ಸಾತ್ಕೋಳಿಯಲ್ಲಿ ತಡರಾತ್ರಿ ಮಚ್ಚಿನಿಂದ ಕೊಚ್ಚಿ ದಂಪತಿ ಬರ್ಬರ ಹತ್ಯೆ
ಚಿಕ್ಕಮಗಳೂರು, ಆಗಸ್ಟ್ 31: ಮಚ್ಚಿನಿಂದ ಕೊಚ್ಚಿ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕು ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ತಾಯಿಯ ಮೆದುಳನ್ನೇ ಫ್ರೈ ಮಾಡಿ ತಿಂದ ಕ್ರೂರ ಮಗ
ಮುತ್ತಿನಕೊಪ್ಪ ವ್ಯಾಪ್ತಿಯ ಕುಸುಬೂರು ಗ್ರಾಮದ ಸಾತ್ಕೋಳಿ ಎಂಬಲ್ಲಿ ನಿನ್ನೆ ತಡರಾತ್ರಿ ದಂಪತಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.
ಪತಿ ಧರ್ಮಯ್ಯ (45) ಪತ್ನಿ ಭಾರತಿ (31) ಮೃತಪಟ್ಟವರು. ಮೃತರಿಗೆ 12 ವರ್ಷದ ಮಗನಿದ್ದು, ಕೊಲೆ ಮಾಡಿದವರ ಸುಳಿವು ಇನ್ನೂ ಸಿಕ್ಕಿಲ್ಲ. ಅನೈತಿಕ ಸಂಬಂಧದ ಹಿನ್ನೆಲೆ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Comments
English summary
The couple were brutally murdered on friday midnight at NRPura Taluk Muttinakoppa village panchayat in Chikkamagaluru district. The reason yet to be known.
Story first published: Saturday, August 31, 2019, 14:33 [IST]