ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಸೇರುತ್ತಾರಾ ಸಿ.ಎಂ. ಇಬ್ರಾಹಿಂ; ಅಂಥದ್ದೇನು ಹೇಳಿದರು?

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

Recommended Video

ಸಿದ್ದರಾಮಯ್ಯರನ್ನು ತೆಗಳಿದ ಇಬ್ರಾಹಿಂ | IBRAHIM | SIDDARAMAIAH | CONGRESS | ONEINDIA KANNADA

ಚಿಕ್ಕಮಗಳೂರು, ಜನವರಿ 16: "ನಾನು ಯಡಿಯೂರಪ್ಪ ಒಂದಲ್ಲಾ ಒಂದು ದಿನ ಒಂದೇ ಕಡೆ ಸೇರುತ್ತೇವೆ" ಎಂದು ಹೇಳಿ, ಬಿಜೆಪಿ ಸೇರುವ ಅನುಮಾನ ಹುಟ್ಟುಹಾಕಿದ್ದಾರೆ ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ.

ಇಂದು ಚಿಕ್ಕಮಗಳೂರಿನ ಅಜ್ಜಂಪುರ ತಾಲೂಕಿನ ಸೊಲ್ಲಾಪುರದಲ್ಲಿ ಸಿದ್ದರಾಮೇಶ್ವರ ಜಯಂತ್ಯೋತ್ಸವದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದ ಅವರು, ಭಾಷಣದಲ್ಲಿ ಹೀಗೆ ಇಂಥ ಒಂದು ಅನುಮಾನ ಹುಟ್ಟುಹಾಕಿದ್ದಾರೆ.

ಪೌರತ್ವ ಕಾನೂನು; ಸಿಎಂ ಇಬ್ರಾಹಿಂ ಸಿಡಿಸಿದ್ರು ನಗೆ ಬಾಂಬ್!ಪೌರತ್ವ ಕಾನೂನು; ಸಿಎಂ ಇಬ್ರಾಹಿಂ ಸಿಡಿಸಿದ್ರು ನಗೆ ಬಾಂಬ್!

"ನಾನು, ಯಡಿಯೂರಪ್ಪ ಅವರು ಒಂದೇ ರೈಲಿನಲ್ಲಿ ಪ್ರಯಾಣಿಸೋದು. ಆದರೆ ಅವರ ನಿಲ್ದಾಣ ಬೇರೆ ಅಷ್ಟೆ. ಯಾವಾಗ ಸೇರುತ್ತೇವೊ ಗೊತ್ತಿಲ್ಲ" ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಸಮಾರೋಪ ಸಮಾರಂಭದ ವೇದಿಕೆ ಮೇಲೆ ಯಡಿಯೂರಪ್ಪ ಅವರನ್ನು ಹೊಗಳಿ ಅವರು ನನ್ನ ಆತ್ಮೀಯ ಸ್ನೇಹಿತ ಎನ್ನುತ್ತಲೇ ಸಿದ್ದರಾಮಯ್ಯರನ್ನು ತೆಗಳಿದ್ದಾರೆ.

Cm Ibrahim Praised Yediyurappa In Chikkamagaluru Function

ಬಿಜೆಪಿಯವರು ನಪುಂಸಕರು: ಸಿಎಂ ಇಬ್ರಾಹಿಂ ವಿವಾದಾತ್ಮಕ ಹೇಳಿಕೆಬಿಜೆಪಿಯವರು ನಪುಂಸಕರು: ಸಿಎಂ ಇಬ್ರಾಹಿಂ ವಿವಾದಾತ್ಮಕ ಹೇಳಿಕೆ

"ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಸಿದ್ದರಾಮಯ್ಯಗೆ ಈ ಜಗಳದಲ್ಲಿ ಬೀಳಬೇಡ ಎಂದರೂ ನನ್ನ ಮಾತು ಕೇಳಲಿಲ್ಲ" ಎಂದು ಹೇಳಿಕೊಂಡಿದ್ದಾರೆ.

English summary
"one or the other day, me and cm yediyurappa will join the same place' said congress leader cm ibrahim in chikkamagaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X