ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾತಿ ಕಾರಣಕ್ಕೆ ಪ್ರೀತಿಗೆ ಅಡ್ಡಿ: ಮದುವೆಯಾಗಿ ವಿಷ ಸೇವಿಸಿದ ಪ್ರೇಮಿಗಳು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಅಕ್ಟೋಬರ್ 02: ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

ಮೃತರನ್ನ 25 ವರ್ಷದ ನೂತನ್ ಹಾಗೂ 22 ವರ್ಷದ ಅಪೂರ್ವ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ಇಬ್ಬರು ಮದುವೆಯಾಗಿ ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ.

ಭಗ್ನ ಪ್ರೇಮಿಯ ಚಾಕು ಇರಿತದಿಂದ ಆಸ್ಪತ್ರೆ ಸೇರಿದ್ದ ಬಿಂದು ಸಾವುಭಗ್ನ ಪ್ರೇಮಿಯ ಚಾಕು ಇರಿತದಿಂದ ಆಸ್ಪತ್ರೆ ಸೇರಿದ್ದ ಬಿಂದು ಸಾವು

ನೂತನ್ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಅಪೂರ್ವ ಬಿಲ್ಲವ ಜಾತಿಗೆ ಸೇರಿದ್ದವರಾಗಿದ್ದಾರೆ. ಇಬ್ಬರೂ ಬೇರೆ-ಬೇರೆ ಜಾತಿಯಾಗಿದ್ದರಿಂದ ಹೆತ್ತವರು ಇವರ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

Chikkamagaluru: Lovers Commit Suicide

ನೂತನ್ ಮನೆ ಕಡೆ ಅನುಕೂಲಸ್ಥವಾಗಿದ್ದು, ಹತ್ತಾರು ಎಕರೆ ಕಾಫಿ ತೋಟವಿತ್ತು. ಆದರೆ, ಅಪೂರ್ವಳದ್ದು ಮಧ್ಯಮ ಕುಟುಂಬವಾಗಿದ್ದು ತಾಯಿ ಶಾಲೆಯಲ್ಲಿ ಅಡಿಗೆ ಕೆಲಸ ಮಾಡುತ್ತಿದ್ದರು.

ಸಾಗರದ ಪ್ರೇಮಿಗಳಿಗೆ ಕುಂದಾಪುರದಲ್ಲಿ ನಿಖಾಸಾಗರದ ಪ್ರೇಮಿಗಳಿಗೆ ಕುಂದಾಪುರದಲ್ಲಿ ನಿಖಾ

ಇಬ್ಬರ ಮದುವೆಗೆ ಹೆತ್ತವರು ವಿರೋಧ ವ್ಯಕ್ತಪಡಿಸಿದ ಕಾರಣ ಎರಡು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ‌ ಯತ್ನಿಸಿದ್ದರು. ಕೂಡಲೇ ಅವರನ್ನ ಹೆಚ್ವಿನ ಚಿಕಿತ್ಸೆಗೆ‌ ಮಂಗಳೂರಿಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದ ಕಾರಣ ಇಬ್ಬರೂ ಸಾವನ್ನಪ್ಪಿದ್ದಾರೆ. ಬಣಕಲ್ ಹಾಗೂ ಗೋಣಿಬೀಡು ಎರಡೂ ಠಾಣೆಯಲ್ಲೂ ಯುಡಿಆರ್ ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

English summary
Lovers commit suicide because parents did not approve them to get married. Couple get married before they commit suicide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X