ಮಲೆನಾಡಿನ ಹಸಿರಿನ ಮಧ್ಯೆ ಪಾತರಗಿತ್ತಿಗಳ ಚಿತ್ತಾರ ಲೋಕ
ಚಿಕ್ಕಮಗಳೂರು, ಜನವರಿ 25: ತನ್ನೊಡಲೊಳಗೆ ಅಗಾಧ ಪ್ರಾಕೃತಿಕ ಸಂಪತ್ತನ್ನು ಹೊಂದಿರುವ ಮಲೆನಾಡಿನ ಚಿಕ್ಕಮಗಳೂರಿನಲ್ಲಿ ಚಿಟ್ಟೆಯ ಲೋಕವೊಂದು ಸೃಷ್ಟಿಯಾಗಿದೆ.
ಚಿಕ್ಕಮಗಳೂರಿನಿಂದ ಬಾಳೆಹೊನ್ನೂರಿಗೆ ಸಾಗುವ ದಾರಿಯಲ್ಲಿ ಅರೆನೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಈ ಚಿಟ್ಟೆಗಳ ಚಿತ್ತಾರ ಎಲ್ಲರ ಕಣ್ಮನ ಸೆಳೆಯುವಂತಿದೆ. ಅರೆನೂರು ಗ್ರಾಮದಿಂದ ಅರಣ್ಯ ಪ್ರದೇಶದೊಳಗೆ ಐದಾರು ಕಿ.ಮೀ ನಡೆದುಕೊಂಡು ಹೋದರೆ ಲಕ್ಷಾಂತರ ಚಿಟ್ಟೆಗಳು ಎತ್ತರದ ಮರಗಳ ರೆಂಬೆ, ಕೊಂಬೆಗಳ ಮೇಲೆ ಕೂತು ಚಿತ್ತಾರ ಬಿಡಿಸಿದಂತೆ ಗೋಚರವಾಗುತ್ತಿವೆ.
ಬೆರಗು ಮೂಡಿಸುವ ಕಂಬಳಿಹುಳುಗಳ ಮೋಹಕ ಲೋಕ
"ಡಾರ್ಕ್ ಬ್ಲೂ ಟೈಗರ್' ಎಂದೇ ಕರೆಸಿಕೊಳ್ಳುವ ಈ ಚಿಟ್ಟೆಗಳು ಪ್ರತಿವರ್ಷ ಡಿಸೆಂಬರ್ ತಿಂಗಳಿನಿಂದ ಆರಂಭವಾಗಿ ಜನವರಿ ಅಂತ್ಯದ ವರೆಗೂ ಇಲ್ಲಿ ಕಾಣಸಿಗುತ್ತವೆ. ಚಿಟ್ಟೆಗಳ ಸಂತಾನೋತ್ಪತ್ತಿಗೆ ಮಲೆನಾಡಿನ ಈ ಭಾಗದ ಕಾಡು ಸಹಾಯಕವಾಗಿದೆ. ಮಲೆನಾಡು ನೈಸರ್ಗಿಕ ಹಸಿರು ಸಂಪತ್ತನ್ನು ಒಳಗೊಂಡಿರುವುದರಿಂದ ಈ ಚಿಟ್ಟೆಗಳು ಇಲ್ಲಿ ಪ್ರತಿವರ್ಷ ಬಂದು ಸಂತಾನ ವೃದ್ಧಿಮಾಡಿಕೊಂಡು ಹೊರಡುತ್ತವೆ.
ಹಸಿರಿನ ಮಧ್ಯೆ ಪಾತರಗಿತ್ತಿಗಳ ವೈಯಾರ
ದಟ್ಟವಾದ ಹಸಿರ ಕಾನನದ ಮಧ್ಯೆ ದೊಡ್ಡ ದೊಡ್ಡ ಮರಗಳ ರಂಬೆ ಕೊಂಬೆ, ಬಳ್ಳಿಗಳ ಮೇಲೆಲ್ಲಾ ಈ ಚಿಟ್ಟೆಗಳು ಚಿತ್ತಾರ ಬಿಡಿಸಿದಂತೆ ಭಾಸವಾಗುತ್ತವೆ. ನುಣುಪಾದ ಚಿಟ್ಟೆಗಳ ರೆಕ್ಕೆಯ ಮೇಲಿನ ಬಣ್ಣಗಳು ಇಡೀ ಅರಣ್ಯ ಪ್ರದೇಶವನ್ನು ನೀಲಿ ಬಣ್ಣಕ್ಕೆ ತಿರಿಗಿಸಿವೆಯೇನೋ ಅನ್ನಿಸುತ್ತದೆ.
ಮುತ್ತೋಡಿಯಲ್ಲಿ ಸಫಾರಿಗೆ ಹೋದವರಿಗೆ ಹಿಂಡುಹಿಂಡಾಗಿ ಎದುರಾದ ಗಜಪಡೆ
ನೋಡುಗರ ಕಣ್ಮನಗಳಿಗೆ ಆಹ್ಲಾದಕರವನ್ನು ನೀಡುತ್ತಿವೆ. ಇನ್ನು ಈ ಚಿಟ್ಟೆಗಳು ಆಗಾಗ ಒಮ್ಮೆಲೆ ಮೇಲೆ ಹಾರಿ ಮತ್ತೆ ಬಂದು ರೆಂಬೆಗಳ ಮೇಲೆ ಕೂರುವುದು ನೋಡುಗರಿಗೆ ಮತ್ತಷ್ಟು ಸೊಗಸು ನೀಡುತ್ತಿವೆ.
ಒಟ್ಟಾರೆ ಈ ಭಾಗದ ಕಾಡಿನ ಅದೆಷ್ಟೋ ಹೂಗಳ ಸುಗಂಧವನ್ನು ಹೀರುತ್ತಾ ಪಾತರಗಿತ್ತಿಗಳು ಹೊಸದೊಂದು ಲೋಕವನ್ನು ಸೃಷ್ಟಿ ಮಾಡಿದ್ದು ನೋಡುಗರ ಮನಸ್ಸಿಗೆ ಆನಂದ ಮೂಡಿಸಿವೆ.