ಆಸ್ತಿ ವಿಚಾರವಾಗಿ ಅಣ್ಣತಮ್ಮಂದಿರ ಜಗಳ: ಸಾವಿನಲ್ಲಿ ಅಂತ್ಯ
ಚಿಕ್ಕಮಗಳೂರು, ಏಪ್ರಿಲ್ 28: ಆಸ್ತಿ ವಿಚಾರವಾಗಿ ಅಣ್ಣತಮ್ಮಂದಿರ ನಡುವೆ ಜಗಳವಾಗಿದ್ದು, ಅಣ್ಣನಿಂದ ತಮ್ಮನ ಮೇಲೆ ಶೂಟೌಟ್ ಮಾಡಿರುವ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಚೇಗು ಗ್ರಾಮದಲ್ಲಿ ನಡೆದಿದೆ.
ಅಣ್ಣ ಲಕ್ಷ್ಮಣಗೌಡ ಎಂಬುವನಿಂದ ತಮ್ಮ ಮಂಜಯ್ಯ ಎಂಬುವವರ ಮೇಲೆ ಶೂಟೌಟ್ ನಡೆಸಲಾಗಿದ್ದು, ಮಂಜಯ್ಯ (57) ಸಾವನ್ನಪ್ಪಿದ್ದಾರೆ.
ನಿನ್ನೆ ಆಸ್ತಿ ವಿಚಾರವಾಗಿ ಅಣ್ಣತಮ್ಮಂದಿರ ನಡುವಣ ವಾಗ್ವಾದ ಉಂಟಾಗಿತ್ತು. ನಿನ್ನೆ ರಾತ್ರಿ ಜೆಸಿಬಿ ಕೆಲಸ ಮುಗಿಸಿ ಮನೆಗೆ ಬರುವ ವೇಳೆ ಅಣ್ಣ ಲಕ್ಷ್ಮಣಗೌಡ ಶೂಟೌಟ್ ಮಾಡಿದನು.
ಆರೋಪಿ ಲಕ್ಷ್ಮಣಗೌಡ ನನ್ನು ಪೊಲೀಸರು ಬಂಧಿಸಿದ್ದು, ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Comments
English summary
Shootout Between brothers, this incident happened in Mudigere Taluk, Chikkamagaluru District.