ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದತ್ತ ಜಯಂತಿ ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ಬೈಕ್ ಜಾಥಾ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಡಿಸೆಂಬರ್ 7: ದತ್ತ ಜಯಂತಿ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ವಿಎಚ್ ಪಿ ಮತ್ತು ಭಜರಂಗದಳ ಕಾರ್ಯಕರ್ತರು ಬೈಕ್ ಜಾಥಾ ನಡೆಸಿದರು.

ನಗರದ ಶ್ರೀರಾಮ‌ ದೇವಸ್ಥಾನದಿಂದ ಆರಂಭವಾದ ಬೈಕ್ ಜಾಥಾ ರತ್ನಗಿರಿ ರಸ್ತೆ‌ ಮೂಲಕ ಬಸವನಹಳ್ಳಿ ರಸ್ತೆ ಹಾಗೂ ಐಜಿ ರಸ್ತೆಯ ಮೂಲಕ ಭೋಳರಾಮೇಶ್ವರ ದೇವಸ್ಥಾನದವರೆಗೆ ನಡೆಯಿತು.

ದತ್ತ ಜಯಂತಿ: ಸದ್ಗುರುಗಳ ಪಾದುಕೆಗಳ ಪೂಜೆಗಾಗಿ ವಿಶಿಷ್ಟ ಮಂದಿರದತ್ತ ಜಯಂತಿ: ಸದ್ಗುರುಗಳ ಪಾದುಕೆಗಳ ಪೂಜೆಗಾಗಿ ವಿಶಿಷ್ಟ ಮಂದಿರ

ಬೈಕ್ ಜಾಥಾದಲ್ಲಿ ನೂರಾರು ವಿಎಚ್ ಪಿ ಹಾಗೂ ಭಜರಂಗದಳ ಕಾರ್ಯಕರ್ತರು ಭಾಗಿಯಾಗಿ ಬೈಕ್ ಗಳಲ್ಲಿ ಧ್ವಜ ಹಾರಿಸುವ ಮೂಲಕ ಘೋಷಣೆಗಳನ್ನು ಕೂಗುತ್ತ ದತ್ತಜಯಂತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಕರೆ ನೀಡಿದರು. ಬೈಕ್ ಜಾಥಾದಲ್ಲಿ ಭಾಗಿಯಾಗಿದ್ದವರು ಪೊಲೀಸರ ಸಮ್ಮುಖದಲ್ಲಿಯೇ ಹೆಲ್ಮೆಟ್ ಇಲ್ಲದೆ ನಗರದಾದ್ಯಂತ ಬೈಕ್ ಚಾಲನೆ ಮಾಡಿದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದರು.

Bike Rally For Datta jayanthi In Chikkamagaluru

ಈಗಾಗಲೇ ದತ್ತಜಯಂತಿಗೆ ಚಾಲನೆ ನೀಡಲಾಗಿದ್ದು, ಡಿಸೆಂಬರ್ 10ರಂದು ಅನುಸೂಯ ಜಯಂತಿ, 11ರಂದು ಶೋಭಾಯಾತ್ರೆ, 12ರಂದು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆಯುವ ಮೂಲಕ ದತ್ತಜಯಂತಿಗೆ ತೆರೆ ಬೀಳಲಿದೆ.

English summary
VHP and Bajarangadal activists held a bike jatha in the city today in the wake of Datta Jayanti,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X