ಶೃಂಗೇರಿ; ಅತ್ಯಾಚಾರ ಪ್ರಕರಣಕ್ಕೆ ಸ್ಫೋಟಕ ತಿರುವು
ಚಿಕ್ಕಮಗಳೂರು, ಮಾರ್ಚ್ 24: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ 15 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಹಣದ ಆಸೆಗೆ ತಾಯಿಯೇ ಮಗಳನ್ನು ವೇಶ್ಯಾವೃತ್ತಿಗೆ ತಳ್ಳಿದ್ದಳು ಎಂಬ ಮಾಹಿತಿ ತನಿಖೆಯಿಂದ ಬಯಲಾಗಿದೆ.
ಹೆಚ್ಚುವರಿ ಎಸ್ಪಿ ಎಸ್. ಶ್ರುತಿ ನೇತೃತ್ವದ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ. ಬಾಲಕಿಯ ತಾಯಿಯೇ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಬಾಲಕಿಯ ಚಿಕ್ಕಮ್ಮ ಎಂದ ಹೇಳಿಕೊಂಡಿದ್ದ ಮಹಿಳೆ ಬಾಲಕಿಯ ಚಿಕ್ಕಮ್ಮ ಅಲ್ಲ ಹೆತ್ತ ತಾಯಿ ಎಂಬುದು ತಿಳಿದುಬಂದಿದೆ.
ಶೃಂಗೇರಿ ಅತ್ಯಾಚಾರ ಪ್ರಕರಣ; ಮೌನ ಮುರಿದ ಶೋಭಾ ಕರಂದ್ಲಾಜೆ
ಉತ್ತರ ಕರ್ನಾಟಕ ಮೂಲದ ಮಹಿಳೆ ಶೃಂಗೇರಿಗೆ ಬಂದು ಎರಡನೇ ಮದುವೆಯಾಗಿದ್ದಳು. ಆಗ ಅಕ್ಕನ ಮಗಳು ಎಂದು ಹೇಳಿಕೊಂಡು ತನ್ನ ಮಗಳನ್ನು ಕರೆದುಕೊಂಡು ಬಂದಿದ್ದಳು. 2ನೇ ಗಂಡನಿಂದಲೂ ದೂರವಾಗಿದ್ದ ಮಹಿಳೆ ಮಗಳ ಜೊತೆ ಪ್ರತ್ಯೇಕವಾಗಿ ವಾಸವಾಗಿದ್ದಳು.
ಶೃಂಗೇರಿ; ಸಾಮೂಹಿಕ ಅತ್ಯಾಚಾರ, 17 ಜನರ ವಿರುದ್ಧ ಎಫ್ಐಆರ್
ಕೆಲವು ವರ್ಷಗಳ ಹಿಂದೆ ಆಕೆಗೆ ಮೊದಲ ಮದುವೆ ಆಗಿತ್ತು. ಮೊದಲ ಪತಿಯ ಮಗುವನ್ನು ಅಕ್ಕನ ಮಗಳು ಎಂದು 2ನೇ ಗಂಡನ ಮನೆಗೆ ಕರೆದುಕೊಂಡು ಬಂದಿದ್ದಳು. ಆದರೆ, 15 ವರ್ಷದ ಬಾಲಕಿ ಆಕೆಯ ಮೊದಲ ಮಗಳಾಗಿದ್ದಳು.
ಶೃಂಗೇರಿಯಲ್ಲಿ ಸಾಮೂಹಿಕ ಅತ್ಯಾಚಾರ; ಸದನದಲ್ಲಿ ವಿಷಯ ಪ್ರಸ್ತಾಪ
ಬಾಲಕಿಯೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದ ಮಹಿಳೆ ಹಣದ ಆಸೆಗೆ ಮಗಳನ್ನು ವೇಶ್ಯಾವೃತ್ತಿಗೆ ತಳ್ಳಿದ್ದಳು. ತಾಯಿಯೇ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಯಲು ಅವಕಾಶ ಮಾಡಿಕೊಟ್ಟಿದ್ದಳು.
ಬಾಲಕಿಯ ಚಿಕ್ಕಮ್ಮ ಎಂದು ಹೇಳಿಕೊಂಡಿದ್ದ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾಯಿಯ ಹೀನಕೃತ್ಯ ಬಹಿರಂಗವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 32 ಆರೋಪಿಗಳನ್ನು ಬಂಧಿಸಲಾಗಿದೆ.
Recommended Video
2021ರ ಜನವರಿ 30 ರಂದು ಶೃಂಗೇರಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರರಕಣದ ಬಗ್ಗೆ ರಾಜ್ಯಾದ್ಯಂತ ಭಾರೀ ಚರ್ಚೆ ನಡೆದಿತ್ತು.