ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈದ್ಯ ದೀಪಕ್ ಮೇಲೆ ಹಲ್ಲೆ: ಜೂನ್ 3ರಿಂದ ತರೀಕೆರೆಯಲ್ಲಿ ಆಸ್ಪತ್ರೆ-ಕ್ಲಿನಿಕ್ ಬಂದ್

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜೂನ್ 3: ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಮಕ್ಕಳ ತಜ್ಞ ವೈದ್ಯ ದೀಪಕ್ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣ ಖಂಡಿಸಿ ಜೂನ್ 3ರಿಂದ ಜೂನ್ 6ರವರೆಗೆ ಖಾಸಗಿ ಆಸ್ಪತ್ರೆ-ಕ್ಲಿನಿಕ್ ಸೇವೆ ಬಂದ್ ಮಾಡಲು ವೈದ್ಯರು ನಿರ್ಧರಿಸಿದ್ದಾರೆ.

ಮಕ್ಕಳ ತಜ್ಞ ವೈದ್ಯ ದೀಪಕ್ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣ ವಿರೋಧಿಸಿ ನಾಲ್ಕು ದಿನ ಖಾಸಗಿ ಆಸ್ಪತ್ರೆಗಳ ಸೇವೆ ಸ್ಥಗಿತಗೊಳಿಸಲಾಗಿದ್ದು, ವೈದ್ಯರ ಸಾಮೂಹಿಕ ರಕ್ಷಣೆಗೆ ಅಭಿಯಾನ ಶುರು ಮಾಡಿದ್ದಾರೆ.

ಡಾ.ದೀಪಕ್ ಮೇಲಿನ ಹಲ್ಲೆ ಇಡೀ ವೈದ್ಯ ಸಮೂಹದ ಮೇಲೆ ನಡೆದ ದೌರ್ಜನ್ಯವಾಗಿದೆ. ಜೀವ ಬಲಿ ಪಡೆಯುವಂಥ ಕ್ರೌರ್ಯಕ್ಕೆ ಮುಂದಾದರೆ ಹೇಗೆ? ಎಂದು ತರೀಕೆರೆಯ ಖಾಸಗಿ ವೈದ್ಯರು ಪ್ರಶ್ನಿಸಿದ್ದಾರೆ.

Chikkamagaluru: Assault On Dr Deepak; Private Hospitals To Bandh In Tarikere From 3-6th June

ಕೊರೊನಾದಂಥ ಸನ್ನಿವೇಶದಲ್ಲಿ ಪ್ರಾಣ ಒತ್ತೆ ಇಟ್ಟು ಡಾ.ದೀಪಕ್ ಕೆಲಸ ಮಾಡಿದ್ದರು. ಇಂದು ದೀಪಕ್ ಮೇಲೆ, ನಾಳೆ ಇನ್ನ್ಯಾರೋ ವೈದ್ಯರ ಮೇಲೆ ಹಲ್ಲೆ. ವೈದ್ಯರ ರಕ್ಷಣೆಗೆ ಸರ್ಕಾರ ಮುಂದಾಗಲೇಬೇಕೆಂದು ವೈದ್ಯರ ಸಂಘಟನೆಗಳು ಒತ್ತಾಯಿಸಿವೆ.

Chikkamagaluru: Assault On Dr Deepak; Private Hospitals To Bandh In Tarikere From 3-6th June

Recommended Video

ಭಾರತೀಯರಿಗೆ ಹೊಸ ಭರವಸೆ ಮೂಡಿಸಿದ ರಷ್ಯಾ ಲಸಿಕೆ | Sputnik light | Oneindia Kannada

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲು ಅಭಿಯಾನ ಶುರುವಾಗಿದ್ದು, ಡಾ.ದೀಪಕ್ ಮೇಲಿನ ಹಲ್ಲೆಗೆ ನ್ಯಾಯ ಸಿಗದಿದ್ದರೆ ಬೆಂಗಳೂರಿನಲ್ಲೂ ವೈದ್ಯಕೀಯ ಸೇವೆ ಸ್ಥಗಿತಕ್ಕೆ ಚಿಂತನೆ ನಡೆಸಲಾಗಿದೆ.

English summary
Doctors have decided to Bandh a private hospitals-clinic services from June 3 to June 6, condemning the murder attempt on Dr Deepak, a pediatrician in Tarikere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X