ವರನನ್ನು ಹುಡುಕಿ ಬಂದವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಿರಾತಕ
ಚಿಕ್ಕಮಗಳೂರು, ನವೆಂಬರ್ .29: ಮದುವೆ ಮಾಡಿಸುವ ನೆಪದಲ್ಲಿ ಹತ್ತಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಓಪನ್ ಸ್ಟ್ರೀಟ್ ಫೆಸ್ಟಿವಲ್ನಲ್ಲಿ ಯುವತಿಯರಿಗೆ ಕಿರುಕುಳವಾಗಿಲ್ಲ:ಸುಬ್ರಹ್ಮಣ್ಯೇಶ್ವರರಾವ್
ಬಂಧಿತ ವ್ಯಕ್ತಿಯ ಹೆಸರು ರಾಮಕೃಷ್ಣ(52). ಮೂಲತಃ ಮಂಡ್ಯದವನು. ಈತ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಮಹಿಳೆಯರಿಗೆ ವಂಚಿಸುತ್ತಿದ್ದ. ಅಷ್ಟೇ ಅಲ್ಲ, ವರನನ್ನು ಹುಡುಕಿ ಬಂದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿ ಮಹಿಳೆಯರಿಂದ ಹಣ, ಬಂಗಾರ ದೋಚುತ್ತಿದ್ದ.
#ಮಿಟೂ ಎಲ್ಲಾ ಬಂಡಲ್, ಚಿತ್ರರಂಗದಲ್ಲಿ 'ಅದು' ಮಾಮೂಲಿ ಎಂದಳು ನಟಿ
ಸರ್ಕಾರಿ ನೌಕರಿಯ ಮಹಿಳೆಯರನ್ನು ಟಾರ್ಗೇಟ್ ಮಾಡಿಕೊಂಡಿದ್ದ ಈತ, ಎರಡನೇ ಮದುವೆ ಮಾಡಿಸುವ ನೆಪದಲ್ಲಿ ಹತ್ತಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ.
ಹೀಗೆ ಎಲ್ಲಾ ಮಹಿಳೆಯರಿಗೂ ವಂಚಿಸಿದಂತೆ ಚಿಕ್ಕಮಗಳೂರು ಮೂಲದ ಶಿಕ್ಷಕಿಗೂ ಮೋಸ ಮಾಡಲು ಹೋಗಿ ಇದೀಗ ಸಿಕ್ಕಿಬಿದ್ದಿದ್ದಾನೆ ರಾಮಕೃಷ್ಣ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments
harassment women arrest chikmagalur district news ಲೈಂಗಿಕ ಕಿರುಕುಳ ಬಂಧನ ಮಹಿಳೆಯರು ಚಿಕ್ಕಮಗಳೂರು ಜಿಲ್ಲಾಸುದ್ದಿ
English summary
A person who has sexually harassed women has been arrested. Arrested person is Ramakrishna (52). He is Originally Mandya.
Story first published: Thursday, November 29, 2018, 10:24 [IST]