ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀಗಳ ಅಂತಿಮ ದರ್ಶನಕ್ಕೆಂದು ಬಂದವರು ಶ್ರೀಗಳನ್ನೇ ಸೇರಿದರು

|
Google Oneindia Kannada News

Recommended Video

Siddaganga Swamiji : ಶ್ರೀಗಳ ಅಂತಿಮ ದರ್ಶನ ಪಡೆದವರು ಮತ್ತೆ ವಾಪಾಸ್ ತಮ್ಮ ಮನೆಗೆ ಹೋಗಲೇ ಇಲ್ಲ|Oneindia Kannada

ಚಿಕ್ಕಮಗಳೂರು, ಜನವರಿ 22: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ(111) ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಅಂತಿಮ ದರ್ಶನಕ್ಕೆಂದು ಬಂದು ವಾಪಾಸಾಗುವಾಗ ನಡೆದ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದಿದೆ.

ಸೋಮವಾರ ಬೆಳಗ್ಗೆ 11.44ಕ್ಕೆ ಶಿವ ಸಾಯುಜ್ಯ ಹೊಂದಿದರೆ ಸಿದ್ದಗಂಗಾ ಶ್ರೀ?ಸೋಮವಾರ ಬೆಳಗ್ಗೆ 11.44ಕ್ಕೆ ಶಿವ ಸಾಯುಜ್ಯ ಹೊಂದಿದರೆ ಸಿದ್ದಗಂಗಾ ಶ್ರೀ?

ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದ್ದು, ಪರಮೇಶ್ವರಪ್ಪ (40) ಮೃತ ದುರ್ದೈವಿಯಾಗಿದ್ದಾರೆ.ಗಾಯಾಳುಗಳನ್ನು ಕಡೂರು ಆಸ್ಪತ್ರೆಗೆ‌ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಅವರನ್ನು ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಕಡೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

1-killed-6-injured-in-road-accident-near-kaduru

ಶಿವಕುಮಾರ ಸ್ವಾಮೀಜಿ ಜನವರಿ 21 ರಂದು ಸೋಮವಾರ ಬೆಳಗ್ಗೆ 11.44ಕ್ಕೆ ಇಹಲೋಕ ತ್ಯಜಿಸಿದರು, ಅವರ ಅಂತ್ಯಕ್ರಿಯೆ ಇಂದು ಸಂಜೆ 4.30ಕ್ಕೆ ತುಮಕೂರಿನಲ್ಲಿ ನೆರವೇರಲಿದೆ. ಸಿದ್ದಗಂಗಾ ಶ್ರೀಗಳಿಗೆ 111 ವರ್ಷ ವಯಸ್ಸಾಗಿತ್ತು, ಅವರಿಗೆ ಹೃದಯಕ್ಕೆ ಸಂಬಂಧಿಸಿದಂತೆ 11 ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.

English summary
One killed, two memers are in critical condition and 6 were injured after Bolero rams into roadside tree near Kaduru of Chikmagalur district on Tuesday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X