ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀರಾಮನವಮಿಗೆ ಪಾನಕ-ಮಜ್ಜಿಗೆ ಹಂಚಿದ ಜಮೀರ್ ಅಹ್ಮದ್

|
Google Oneindia Kannada News

ಹೊಸಕೋಟೆ, ಏಪ್ರಿಲ್ 13: ಲೋಕಸಭೆ ಚುನಾವಣೆ ಪ್ರಚಾರದಲ್ಲಿದ್ದ ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಅವರು ಶ್ರೀರಾಮನವಮಿ ಪ್ರಯುಕ್ತ ಭಕ್ತರಿಗೆ ಮಜ್ಜಿಗೆ-ಪಾನಕ ಹಂಚಿ ಖುಷಿ ಪಟ್ಟರು.

ಚಿಕ್ಕಬಳ್ಳಾಪುರ ಕ್ಷೇತ್ರದ ಹೊಸಕೋಟೆಯಲ್ಲಿ ಇಂದು ಬೆಳಿಗ್ಗೆ ಪ್ರಚಾರ ನಡೆಸಿದ ಸಚಿವ ಜಮೀರ್ ಅಹ್ಮದ್ ಅವರು ಹನುಮ ದೇವಾಲಯವೊಂದರ ಬಳಿ ಪ್ರಚಾರ ವಾಹನವನ್ನು ನಿಲ್ಲಿಸಿ ಭಕ್ತಾದಿಗಳಿಗೆ ಪಾನಕ-ಮಜ್ಜಿಗೆಯನ್ನು ಹಂಚಿದರು. ತಾವೂ ಸಹ ಪಾನಕ-ಮಜ್ಜಿಗೆ ಕುಡಿದು ಸಂತೃಪ್ತರಾದರು.

ಮೋದಿ ಸರ್ಕಾರದಲ್ಲಿ ಒಂದೂ ಹಗರಣವಿಲ್ಲ: ಸದಾನಂದ ಗೌಡಮೋದಿ ಸರ್ಕಾರದಲ್ಲಿ ಒಂದೂ ಹಗರಣವಿಲ್ಲ: ಸದಾನಂದ ಗೌಡ

ಜಮೀರ್ ಅಹ್ಮದ್ ಅವರು ಇಂದು ಚಿಕ್ಕಬಳ್ಳಾಪುರ ಕ್ಷೇತ್ರದ ಹೊಸಕೋಟೆ, ವಿಜಯಪುರ, ದೇವನಹಳ್ಳಿ, ಚಿಕ್ಕಬಳ್ಳಾಪುರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮೈತ್ರಿ ವೀರಪ್ಪ ಮೊಯ್ಲಿ ಅವರ ಪರ ಪ್ರಚಾರ ಮಾಡಿದರು.

Zameer Ahmed campaign for Veerappa Moily in Chikkaballapura constituency

ಹೊಸಕೋಟೆಯಲ್ಲಿ ಮಾತ್ರವಲ್ಲದೆ, ದೇವನಹಳ್ಳಿ, ಚಿಕ್ಕಬಳ್ಳಾಪುರದಲ್ಲೂ ಸಹ ದಾರಿ ಮಧ್ಯೆ ಪಾನಕ-ಮಜ್ಜಿಗೆಗಳನ್ನು ಹಂಚಿದರು. ಜಮೀರ್ ಅವರು ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋದಾಗ ಅಭಿಮಾನಿಗಳಿಗೆ, ಮಕ್ಕಳಿಗೆ ಕೈತುತ್ತು ನೀಡುವ ಅಭ್ಯಾಸವಿಟ್ಟುಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವಿಜಯಪುರದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಅವರು ಕೇವಲ ಸುಳ್ಳು ಹೇಳುವುದರಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

English summary
Minister Zameer Ahmed campaign for Veerappa Moily in Chikkaballapura constituency. He distributed butter milk and juice to devotees.\
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X