ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಸ್ಲಿಂ ಮತದಾನ ಹೆಚ್ಚಾದರೆ ರಾಹುಲ್ ಗಾಂಧಿ ಪಿಎಂ ಕನ್ಫರ್ಮ್

|
Google Oneindia Kannada News

ಚಿಕ್ಕಬಳ್ಳಾಪುರ, ಫೆ 19: ಈ ರಾಜ್ಯದ ಕೆಲವು ಮುಖಂಡರು ನನಗೇನೂ ಗೊತ್ತಿಲ್ಲ, ನಾನೊಬ್ಬ ಅಪ್ರಬುದ್ದ ಎಂದು ತಿಳಿದುಕೊಂಡಿದ್ದಾರೆ. ಹೌದು, ನಾನೊಬ್ಬ ಹೆಬ್ಬೆಟ್ಟು ಎಂದು ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.

ಜಿಲ್ಲೆಯ ಬಾಗೇಪಲ್ಲಿಯಲ್ಲಿ ಶಾದಿಮಹಲ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆಯ ಸಚಿವ ಜಮೀರ್, ಮುಂದಿನ ಚುನಾವಣೆಯಲ್ಲಿ ಒಂದು ವೇಳೆ ಶೇ. 90ರಷ್ಟು ಮುಸ್ಲಿಂ ಬಾಂಧವರು ಮತ ಚಲಾಯಿಸಿದರೆ, ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಾಗುವುದು ಕನ್ಫರ್ಮ್ ಎಂದು ಜಮೀರ್ ಹೇಳಿದರು.

ನ್ಯೂಸ್ ನೇಷನ್ ಸಮೀಕ್ಷೆ : ರಾಜಸ್ಥಾನದಲ್ಲಿ ಮೋದಿಗೇ ಜೈ, ಗಾಂಧಿಗೆ ಬೈನ್ಯೂಸ್ ನೇಷನ್ ಸಮೀಕ್ಷೆ : ರಾಜಸ್ಥಾನದಲ್ಲಿ ಮೋದಿಗೇ ಜೈ, ಗಾಂಧಿಗೆ ಬೈ

ಆದರೆ, ಮುಸ್ಲಿಮರು ಪೂರ್ಣ ಪ್ರಮಾಣದಲ್ಲಿ ಮತ ಚಲಾಯಿಸುವುದಿಲ್ಲ. ಅರ್ದಕರ್ಧ ಜನ ವೋಟ್ ಮಾಡುತ್ತಾರೆ. ನೀವೆಲ್ಲಾ ಮತಚಲಾಯಿಸಲು ಮುಂದೆ ಬರಬೇಕು. ಆಗ ಮಾತ್ರ, ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯ ಎಂದು ಜಮೀರ್ ಅಭಿಪ್ರಾಯ ಪಟ್ಟಿದ್ದಾರೆ.

If Muslim turnout increases in LS election, Rahul Gandhi will become PM

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೋ ಅಥವಾ ಕಾಂಗ್ರೆಸ್ಸಿನವರೋ ಎನ್ನುವ ಗೊಂದಲದ ನಡುವೆ, ಮುಂದಿನ ಚುನಾವಣೆಯಲ್ಲಿ ನೀವೆಲ್ಲಾ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿಗೆ ಮತ ಚಲಾಯಿಸಬೇಕೆಂದು ಜಮೀರ್ ಮನವಿ ಮಾಡಿದ್ದಾರೆ.

ಫಸ್ಟ್ ನ್ಯೂಸ್ ಸಮೀಕ್ಷೆ: ಮೋದಿ-ಅತ್ಯಂತ ವಿಶ್ವಾಸಾರ್ಹ ರಾಜಕೀಯ ನಾಯಕಫಸ್ಟ್ ನ್ಯೂಸ್ ಸಮೀಕ್ಷೆ: ಮೋದಿ-ಅತ್ಯಂತ ವಿಶ್ವಾಸಾರ್ಹ ರಾಜಕೀಯ ನಾಯಕ

ಪುಲ್ವಾಮಾ ಘಟನೆಯಲ್ಲಿ ಯಾವ ಜಾತಿಯವನಿದ್ದ, ಯಾವ ಕೋಮಿನವನಿದ್ದ ಎಂದು ನೋಡುವ ಬದಲು, ಹುತಾತ್ಮರಾದರವೆಲ್ಲಾ ಭಾರತೀಯರು ಎನ್ನುವುದನ್ನು ಮೊದಲು ಅರಿತುಕೊಳ್ಳಬೇಕು ಎಂದು ಜಮೀರ್ ಬುದ್ದಿಮಾತು ಹೇಳಿದ್ದಾರೆ.

English summary
If Muslim turnout increases in the upcoming Lok Sabha election 2019, Rahul Gandhi will become Prime Minister for sure, Food and Civil Supply Minsiter of Karnataka Zameer Ahmed Khan said in Bagepalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X