ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೈ ಕತ್ತರಿಸುತ್ತೇನೆ ಎಂದಿದ್ದ ಶಾಸಕನ ಮೇಲೆ ಎಫ್‌ಐಆರ್

|
Google Oneindia Kannada News

ಚಿಕ್ಕಬಳ್ಳಾಪುರ, ನವೆಂಬರ್ 10: ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ ವಿರುದ್ಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಹಾಗಾಗಿ ಶಾಸಕ ಎಚ್​​ಎನ್​ ಎಸ್​ ವಿರುದ್ಧ ಐಪಿಸಿ ಸೆಕ್ಷನ್ 120b, 124, 121, 141, 506, 506b, 159 ಅಡಿಯಲ್ಲಿ ಪ್ರಕರಣದ ದಾಖಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆ: ಶಿವಶಂಕರ್ ರೆಡ್ಡಿ ಖರ್ಚಾಗದ ಅನುದಾನ ಹೆಚ್ಚುಚಿಕ್ಕಬಳ್ಳಾಪುರ ಜಿಲ್ಲೆ: ಶಿವಶಂಕರ್ ರೆಡ್ಡಿ ಖರ್ಚಾಗದ ಅನುದಾನ ಹೆಚ್ಚು

ಮಂಚೇನಳ್ಳಿ ತಾಲೂಕು ರಚನೆ ಹಾಗೂ ತೊಂಡೇಬಾವಿಯನ್ನು ಮಂಚೇನಳ್ಳಿಗೆ ಸೇರಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಶಾಸಕ ಶಿವಶಂಕರ ರೆಡ್ಡಿ, ನನ್ನ ಕ್ಷೇತ್ರದ ತಂಟೆಗೆ ಬಂದರೆ ಕೈ ಕತ್ತರಿಸುವುದಾಗಿ ಕೆಲವು ದಿನಗಳ ಹಿಂದೆ ಚಿಕ್ಕಬಳ್ಳಾಪುರ ಅನರ್ಹ ಶಾಸಕ ಸುಧಾಕರ್​ಗೆ ಎಚ್ಚರಿಕೆ ನೀಡಿದ್ದರು.

FIR Against MLA Shivashankar Reddy

ಶಿವಶಂಕರ ರೆಡ್ಡಿ ಅವರು ಮಂಚೇನಹಳ್ಳಿ ತಾಲೂಕು ರಚನೆ ವಿಚಾರವಾಗಿ ಮಾತನಾಡುತ್ತಾ ನನ್ನ ಕ್ಷೇತ್ರದಲ್ಲಿ ಕೈ ಹಾಕಿದವರ ಕೈ ಕತ್ತರಿಸುತ್ತೇನೆ ಎಂದು ಪರೋಕ್ಷವಾಗಿ ಅನರ್ಹ ಶಾಸಕ ಡಾ. ಕೆ. ಸುಧಾಕರ್ ಅವರ ವಿರುದ್ಧ ಗುಡುಗಿದ್ದರು.

ನಗರ ಸಭೆ ವ್ಯಾಪ್ತಿಯ ನದಿಗಡ್ಡೆ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಸಂತೆ ಮೈದಾನದಲ್ಲಿ ಹಾಗೂ ನಗರಸಭೆ ವ್ಯಾಪ್ತಿಯ ಬಡವರ ಮನೆಗಳ ಮೇಲೆ ಕೈ ಹಾಕಿದರೆ ಶಾಸಕರ ಕೈ ಕತ್ತರಿವುದು ನಾನೇ ಎಂದು ಹೇಳಿರುವುದು ಇದೀಗ ಕ್ಷೇತ್ರದಲ್ಲಿ ಸಂಚಲನ ಮೂಡಿಸಿತ್ತು.

English summary
FIR Has Been Lodged Against Gouribidanur MLA H.H. Shivashankar Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X