ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ 'ಅನರ್ಹ' ಸುಧಾಕರ್ ಆಡಿಯೋ ಬಹಿರಂಗ
ಚಿಕ್ಕಬಳ್ಳಾಪುರ, ನವೆಂಬರ್ 18: ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನರ್ಹ ಶಾಸಕ ಸುಧಾಕರ್ ಅವರ ಆಡಿಯೋ ಸಂದೇಶವೊಂದು ಬಹಿರಂಗಗೊಂಡಿದ್ದು, ಅಭ್ಯರ್ಥಿಗಳು ಚುನಾವಣೆ ಗೆಲ್ಲಲು ಯಾವ ರೀತಿಯ ಆಮಿಷಗಳನ್ನು ಒಡ್ಡುತ್ತಾರೆ, ಹೇಗೆ ಸುಳ್ಳು ಹೇಳುತ್ತಾರೆ, ಮೋಸ ಮಾಡುತ್ತಾರೆಂಬುದಕ್ಕೆ ಈ ಆಡಿಯೋವನ್ನು ಉದಾಹರಣೆಯಾಗಿ ನೀಡಬಹುದಾಗಿದೆ.
ಸುಧಾಕರ್ ಅವರು ತಮ್ಮದೇ ಆದ ಟ್ರಸ್ಟ್ ನ ಸದಸ್ಯರೊಬ್ಬರಿಗೆ ಕಳುಹಿಸಿರುವ ಆಡಿಯೋ ಸಂದೇಶ ಇದಾಗಿದ್ದು, ಸಂದೇಶದಲ್ಲಿ, 'ದೊಡ್ಡ ಉಡುಗೊರೆ ನೀಡುತ್ತೇವೆಂದು ಹೇಳಿ ಜನರ ವಿಳಾಸಗಳನ್ನು ಪಡೆಯಿರಿ' ಎಂದು ಸುಧಾಕರ್ ಸಿಬ್ಬಂದಿಗೆ ಸೂಚಿಸಿದ್ದಾರೆ.
ಉಪಚುನಾವಣೆ: 5 ಅಭ್ಯರ್ಥಿಗಳನ್ನು ಸೋಲಿಸುವ ನಿಟ್ಟಿನಲ್ಲಿ ಕುಮಾರಸ್ವಾಮಿ ಮಾಡಿದ 'ಶಪಥ'
ಟ್ರಸ್ಟ್ನ ಸದಸ್ಯರು, ಪದಾಧಿಕಾರಿಗಳು, ಸಿಬ್ಬಂದಿಗಳು ಜನರಿಗೆ ಉಡುಗೊರೆಗಳನ್ನು ನೀಡುವುದಾಗಿ ಹೇಳಿ, ಬಿಲ್ ಮಾಡಿಸಲು ವಿಳಾಸದ ಅವಶ್ಯಕತೆ ಇದೆ ಎಂದು ಹೇಳಿ ವಿಳಾಸಗಳನ್ನು ಪಡೆಯಬೇಕು, ನಾಮಪತ್ರ ಸಲ್ಲಿಸುವ ಎರಡು ದಿನ ಮುಂಚಿತವಾಗಿ ಈ ಕೆಲಸ ಮಾಡಬೇಕು ಎಂದು ಸುಧಾಕರ್ ಆಡಿಯೋದಲ್ಲಿ ಹೇಳಿದ್ದಾರೆ.
ಸುಧಾಕರ್ ಅವರು ಸಾಯಿಕೃಷ್ಟ ಚಾರಿಟೇಬಲ್ ಟ್ರಸ್ಟ್ ಹೆಸರಿನ ಟ್ರಸ್ಟ್ ಒಂದನ್ನು ನಡೆಸುತ್ತಿದ್ದು, ಈ ಟ್ರಸ್ಟ್ ನ ಸದಸ್ಯರು ಮತ್ತು ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ, ಮತದಾರರಿಗೆ ಹಣ, ಉಡುಗೊರೆಯ ಆಮಿಷ ಒಡ್ಡಲು ಬಳಸಿಕೊಳ್ಳುತ್ತಿದ್ದಾರೆ ಎಂಬುದು ಆಡಿಯೋ ನಿಂದ ಬಹಿರಂಗವಾಗಿದೆ.
ಹೊಸಕೋಟೆ ಕದನ; ಕೋಟ್ಯಾಧಿಪತಿಗಳ ಹೋರಾಟ!
ಆಡಿಯೋ ದಲ್ಲಿ ಮುಂದುವರೆದು ಮಾತನಾಡಿರುವ ಸುಧಾಕರ್, 'ಚುನಾವಣೆ ಮುಗಿದ ಕೂಡಲೇ ನಿಮಗೆಲ್ಲಾ ಪ್ರವಾಸದ ಆಯೋಜನೆ ಮಾಡುತ್ತೇನೆ, ಅಷ್ಟೆ ಅಲ್ಲದೆ ಒಂದು ತಿಂಗಳ ಸಂಬಳ ಹೆಚ್ಚುವರಿಯಾಗಿ ಕೊಡುತ್ತೇನೆ, ಪ್ರತಿಯೊಬ್ಬರು ಚುನಾವಣೆ ಮುಗಿಯುವವರೆಗೂ ಹಗಲು-ರಾತ್ರಿ ಎನ್ನದೆ ಕೆಲಸ ಮಾಡಿ' ಎಂದು ಸುಧಾಕರ್ ಹೇಳಿದ್ದಾರೆ.
ಉಪ ಚುನಾವಣೆ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ
ಕಾಂಗ್ರೆಸ್ನಿಂದ ಶಾಸಕರಾಗಿ ಆಯ್ಕೆ ಆಗಿದ್ದ ಸುಧಾಕರ್, ಆ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಈಗ ಬಿಜೆಪಿಯಿಂದ ಉಪಚುನಾವಣೆ ಸ್ಪರ್ಧಿಸುತ್ತಿದ್ದಾರೆ. ಸುಧಾಕರ್ ಗೆ ಎದುರಾಗಿ ಕಾಂಗ್ರೆಸ್ನ ಆಂಜಿನಪ್ಪ ಮತ್ತು ಜೆಡಿಎಸ್ನಿಂದ ಕೆ.ಪಿ.ಬಚ್ಚೇಗೌಡ ಸ್ಪರ್ಧಿಸುತ್ತಿದ್ದಾರೆ.