ಕೆಸಿಆರ್ ತೃತೀಯ ರಂಗಕ್ಕೆ ಕರುಣಾನಿಧಿ ಬಲ
ಚೆನ್ನೈ, ಏಪ್ರಿಲ್ 29: ರಾಷ್ಟ್ರೀಯ ಪಕ್ಷಗಳ ವಿರುದ್ಧ ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಇಂದು ಡಿಎಂಕೆ ಪಕ್ಷದ ಮುಖಂಡ ಮಾಜಿ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರನ್ನು ಭೇಟಿ ಆದರು.
ಕರುಣಾನಿಧಿ ಅವರ ಆರೋಗ್ಯ ವಿಚಾರಿಸಿದ ಕೆಸಿಆರ್ ಅವರು ಆ ನಂತರ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರೊಂದಿಗೆ ತೃತೀಯ ರಂಗದ ಬಗ್ಗೆ ಚರ್ಚೆ ನಡೆಸಿ ಬೆಂಬಲ ಪಡೆದುಕೊಂಡರು.
ಮೋದಿ ಅಲೆ ತಡೆಯಲು ಕೆಸಿಆರ್ಗೆ ದೇವೇಗೌಡ ಬೆಂಬಲ
ಕೆಸಿಆರ್ ಅವರು ಇತ್ತೀಚೆಗಷ್ಟೆ ಜಾತ್ಯಾತೀತ ಜನತಾದಳ ಪಕ್ಷದ ಅಧ್ಯಕ್ಷ ದೇವೇಗೌಡ ಅವರನ್ನು ಭೇಟಿ ಮಾಡಿ ತೃತೀಯ ರಂಗ ರಚನೆಗೆ ಬೆಂಬಲ ಪಡೆದುಕೊಂಡಿದ್ದರು.
ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ಕೇಂದ್ರದ ಆಡಳಿತದ ಮೇಲೆ ಹಿಡಿತ ಸಾಧಿಸಬೇಕೆಂಬ ದೃಷ್ಠಿಯಿಂದ ಕೆಸಿಆರ್ ಅವರು ಪ್ರಯತ್ನಿಸುತ್ತಿದ್ದು ಇದೇ ಭಾಗವಾಗಿ ಮಮತಾ ಬ್ಯಾನರ್ಜಿ, ಎನ್ಸಿಪಿಯ ಶರದ್ ಪವಾರ್, ದೇವೇಗೌಡ, ಆರ್ಜೆಡಿ ಇನ್ನೂ ಹಲವು ಪಕ್ಷಗಳ ಬೆಂಬಲವನ್ನು ಕೆಸಿಆರ್ ಪಡೆದಿದ್ದಾರೆ. ಈಗ ಈ ಪಟ್ಟಿಗೆ ಡಿಎಂಕೆ ಸಹ ಸೇರಿಕೊಂಡಂತಾಗಿದೆ.