ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರುಣಾನಿಧಿ ಅಂತಿಮ ದರ್ಶನ ಮಾಡಿದ ರಜನೀಕಾಂತ್, ಪಳನೀಸ್ವಾಮಿ

By Manjunatha
|
Google Oneindia Kannada News

Recommended Video

ಕರುಣಾನಿಧಿ ಅಂತಿಮ ದರ್ಶನ ಮಾಡಿದ ರಜನೀಕಾಂತ್, ಪಳನೀಸ್ವಾಮಿ | Oneindia Kannada

ಚೆನ್ನೈ, ಆಗಸ್ಟ್ 08: ನಿನ್ನೆ ಸಂಜೆ ದೈವಾಧೀನರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಪಾರ್ಥಿವ ಶರೀರವನ್ನು ರಾಜಾಜಿ ಹಾಲ್‌ನಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ತ.ನಾಡು ಪ್ತಸ್ತುತ ಮುಖ್ಯಮಂತ್ರಿ ಪಳನಿಸ್ವಾಮಿ ಹಾಗೂ ನಟ ರಜನೀಕಾಂತ್ ಮುಂಜಾನೇಯೇ ಅಂತಿಮ ದರ್ಶನ ಪಡೆದರು.

ತ್ರಿವರ್ಣ ಧ್ವಜ ಹೊದಿಸಿದ ಕರುಣಾನಿಧಿ ಕಳೇಬರವನ್ನು ರಾಜಾಜಿ ಹಾಲ್‌ನಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ಮಧ್ಯರಾತ್ರಿಯಿಂದಲೂ ಇಲ್ಲಿ ಜನಸಾಗರವೇ ಏರ್ಪಟ್ಟಿದೆ. ತಮ್ಮ ಮೆಚ್ಚಿನ ನಾಯಕನನ್ನು ಕೊನೆಯ ಬಾರಿ ಕಾಣಲು ಸಹಸ್ರಾರು ಸಂಖ್ಯೆಯಲ್ಲಿ ಜನ ರಾರಾಜಿ ಹಾಲ್‌ನ ಮುಂದೆ ಜಮಾಯಿಸಿದ್ದಾರೆ.

ನನ್ನ ಬದುಕಿನ ಕರಾಳ ದಿನ ಇದು, ಕಲೈನಾರ್ ಸಾವಿಗೆ ರಜನಿ ಸಂತಾಪನನ್ನ ಬದುಕಿನ ಕರಾಳ ದಿನ ಇದು, ಕಲೈನಾರ್ ಸಾವಿಗೆ ರಜನಿ ಸಂತಾಪ

ಅಂತಿಮ ದರ್ಶನ ಪಡೆದು ಮಾತನಾಡಿದ ಮುಖ್ಯಮಂತ್ರಿ ಪಳನಿಸ್ವಾಮಿ, ಇದು ತಮಿಳುನಾಡಿಗೆ ಆದ ಭಾರಿ ನಷ್ಟ, ಕರುಣಾನಿಧಿ ಅವರ ಅಗಲಿಕೆಯ ದುಖಃವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರಿಗೆ ಹಾಗೂ ಡಿಎಂಕೆ ಪಕ್ಷದ ಕಾರ್ಯಕರ್ತರಿಗೆ ಆ ದೇವರು ನೀಡಲಿ ಎಂದು ಅವರು ಹೇಳಿದ್ದಾರೆ.

Tamilnadu CM Palaniswamy, actor Rajinikanth pay last respects to Karunanidhi

ನಟ ರಜನೀಕಾಂತ್ ಸಹ ಇಂದು ಮುಂಜಾನೆಯೇ ಕರುಣಾನಿಧಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಅವರು ಕೆಲವು ದಿನಗಳ ಹಿಂದೆಯಷ್ಟೆ ಆಸ್ಪತ್ರೆಗೆ ಭೇಟಿ ನೀಡಿ ಕರುಣಾನಿಧಿ ಆರೋಗ್ಯ ವಿಚಾರಿಸಿದ್ದರು.

ಕರುಣಾನಿಧಿ ಅವರ ಅಂತಿಮ ಸಂಸ್ಕಾರವನ್ನು ಮರೀನಾ ಬೀಚ್‌ನ ಅಣ್ಣಾ ಸ್ಮಾರಕದಲ್ಲಿ ಮಾಡಲು ಅವಕಾಶ ನೀಡಬೇಕೆಂದು ಡಿಎಂಕೆ ನಾಯಕರು ನಿನ್ನೆ ತಡ ರಾತ್ರಿ ಕೋರ್ಟ್‌ ಮೆಟ್ಟಿಲೇರಿದ್ದರು.

Tamilnadu CM Palaniswamy, actor Rajinikanth pay last respects to Karunanidhi

ರಾತ್ರಿ 10.30ಕ್ಕೆ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಇಂದು ಬೆಳಿಗ್ಗೆ 8 ಗಂಟೆಗೆ ವಿಚಾರಣೆಯನ್ನು ಮುಂದೂಡಿದೆ. ಇನ್ನು ಕೆಲವೇ ಗಂಟೆಗಳಲ್ಲಿ ವಿವಾದ ಬಗೆಹರಿಯಲಿದೆ.

English summary
Tamilnadu CM Palaniswamy, actor Rajanikanth pay last respects to to Karunanidhi to day early early in the morning in Rajajai Hall. Many leaders coming to pay last respect to Karunanidhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X