ತಮಿಳುನಾಡಿನಲ್ಲಿ ಜಿಹಾದಿ ಗ್ಯಾಂಗ್ ಸದಸ್ಯನ ಬಂಧನ
ಚೆನ್ನೈ, ಜನವರಿ 22: ತಮಿಳುನಾಡಿನಲ್ಲಿ ಸಕ್ರಿಯವಾಗಿರುವ ಜಿಹಾದಿ ಗ್ಯಾಂಗಿನ ಸದಸ್ಯನೊಬ್ಬನನ್ನು ಎಐಎ ತಂಡ ಬಂಧಿಸಿದೆ. ''ಷಹದಾತ್ ನಮ್ಮ ಗುರಿ'' ಎಂದು ದಕ್ಷಿಣ ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನು ಹಬ್ಬಲು ಕಾರಣವಾಗಿದ್ದ ಜಿಹಾದಿ ಎಂದು ತಿಳಿದು ಬಂದಿದೆ.
ಬಂಧಿತನನ್ನು 25 ವರ್ಷ ವಯಸ್ಸಿನ ಮೊಹಮ್ಮದ್ ರಶೀದ್ ಎಂದು ಗುರುತಿಸಲಾಗಿದೆ. ಕಡಲೂರ್ ಜಿಲ್ಲೆಯಲ್ಲಿ ಈತನನ್ನು ಬಂಧಿಸಲಾಗಿದ್ದು, ಚೆನ್ನೈನಲ್ಲಿರುವ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.
ಏಪ್ರಿಲ್ 2018ರಲ್ಲ್ ಐಪಿಸಿಯ ವಿವಿಧ ಸೆಕ್ಷನ್, ಕಾನೂನು ಬಾಹಿರ ಚಟುವಟಿಕೆ(ನಿಗ್ರಹ) ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳಡಿಯಲ್ಲಿ ರಾಮನಾಥಪುರಂ ಜಿಲ್ಲೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ಮೊಹಮ್ಮದ್ ರಿಫಾಸ್, ಮುಪಾರಿಶ್ ಅಹ್ಮದ್, ಅಬುಪಕ್ಕರ್ ಸಿಥಿಕ್ ಎಂಬುವವರನ್ನು ಬಂಧಿಸಲಾಗಿದ್ದು, ಈ ಉಗ್ರರ ಗ್ಯಾಂಗಿನಿಂದ ಹಲವು ಕರಪತ್ರ, ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಇದಾದ ಬಳಿಕ ಶೇಕ್ ದಾವೂದ್, ಅಹ್ಮದ್ ಇಮಿತ್ಯಾಶ್, ಹಮೀದ್ ಅಸ್ಫರ್, ಲಿಯಾಕತ್ ಅಲಿ, ಸಾಜಿತ್ ಅಹ್ಮದ್ ಹಾಗೂ ರಿಜ್ವಾನ್ ಮೊಹಮ್ಮದ್ ನಂತರ ಬಂಧಿಸಲಾಗಿತ್ತು. 2019 ಮತ್ತೆ ತನಿಖೆ ತೀವ್ರಗೊಳಿಸಿದಾಗ ರಶೀದ್ ಬಗ್ಗೆ ಸುಳಿವು ಸಿಕ್ಕಿತ್ತು. ಶರಿಯಾರ್ ಕಾನೂನು ಎಲ್ಲೆಡೆ ಜಾರಿಗೊಳಿಸಬೇಕು ಎಂದು ಬಯಸಿದ್ದರು. ಬಂಧಿತ ರಶೀದ್ ಬಳಿ ಇದ್ದ ಅಕ್ರಮ ಶಸ್ತ್ರಾಸ್ತ್ರ, ದಾಖಲೆಗಳನ್ನುವಶಪಡಿಸಿಕೊಳ್ಳಲಾಗಿದ್ದು ,ತನಿಖೆ ಮುಂದುವರೆದಿದೆ.