ತಮಿಳುನಾಡಿನಲ್ಲಿ ಪ್ರತಿನಿತ್ಯ ರಾತ್ರಿ ಕರ್ಫ್ಯೂ ಜೊತೆ ಭಾನುವಾರದ ಲಾಕ್ಡೌನ್
ಚೆನ್ನೈ,
ಏಪ್ರಿಲ್
18:
ತಮಿಳುನಾಡಿನಲ್ಲಿ
ಕೊರೊನಾವೈರಸ್
ಸೋಂಕಿಗೆ
ಕಡಿವಾಣ
ಹಾಕುವುದಕ್ಕಾಗಿ
ಏಪ್ರಿಲ್
20ರಿಂದ
ಪ್ರತಿನಿತ್ಯ
ರಾತ್ರಿ
ನಿಷೇಧಾಜ್ಞೆ
ಜಾರಿಗೊಳಿಸಲಾಗುವುದು
ಎಂದು
ರಾಜ್ಯ
ಸರ್ಕಾರ
ಘೋಷಿಸಿದೆ.
ಮುಖ್ಯಮಂತ್ರಿ
ಎಡಪ್ಪಾಡಿ
ಪಳನಿಸ್ವಾಮಿ
ಅವರು
ಕಂದಾಯ
ಇಲಾಖೆ
ಅಧಿಕಾರಿಗಳು
ಮತ್ತು
ಆರೋಗ್ಯ
ಇಲಾಖೆ
ಅಧಿಕಾರಿಗಳ
ಜೊತೆಗೆ
ಕಠಿಣ
ನಿರ್ಬಂಧ
ಹೇರುವ
ಬಗ್ಗೆ
ಚರ್ಚೆ
ನಡೆಸಿದರು.
ಈ
ವೇಳೆ
ಪ್ರತಿದಿನ
ರಾತ್ರಿ
10
ಗಂಟೆಯಿಂದ
ಬೆಳಗ್ಗೆ
4
ಗಂಟೆವರೆಗೂ
ನೈಟ್
ಕರ್ಫ್ಯೂ
ಜಾರಿಗೊಳಿಸಲಾಗುವುದು.
ಇದರ
ಜೊತೆ
ಪ್ರತಿ
ಭಾನುವಾರ
ಲಾಕ್ಡೌನ್
ಜಾರಿಗೊಳಿಸುವುದಕ್ಕೆ
ಸರ್ಕಾರ
ನಿರ್ಧರಿಸಿದೆ.
Explainer:
ಕೊರೊನಾವೈರಸ್
ಅಲೆಗಳ
ಆಯುಷ್ಯದ
ಮೇಲೆ
ಭಾರತದ
ಭವಿಷ್ಯ!?
ರಾತ್ರಿ
ನಿಷೇಧಾಜ್ಞೆ
ಸಮಯದಲ್ಲಿ
ಸರ್ಕಾರಿ
ಮತ್ತು
ಖಾಸಗಿ
ಸಾರಿಗೆ,
ಟ್ಯಾಕ್ಸಿ,
ಆಟೋ
ಸಂಚಾರಕ್ಕೆ
ಅನುಮತಿ
ಇರುವುದಿಲ್ಲ.
ಈ
ಅವಧಿಯಲ್ಲಿ
ಬೇರೆ
ಜಿಲ್ಲೆ
ಮತ್ತು
ಬೇರೆ
ರಾಜ್ಯಗಳ
ವಾಹನಗಳ
ಸಂಚಾರಕ್ಕೂ
ಅನುಮತಿಯಿಲ್ಲ.
ತುರ್ತು
ಸಂದರ್ಭಗಳಲ್ಲಿ
ಮಾತ್ರ
ವಾಹನ
ಸಂಚಾರಕ್ಕೆ
ಅವಕಾಶ
ನೀಡಲಾಗಿದೆ.
ತಮಿಳುನಾಡಿನಲ್ಲಿ
ಯಾವೆಲ್ಲ
ಸೌಲಭ್ಯಗಳು
ಲಭ್ಯ?:
ಮೂಲಭೂತ
ಸೇವೆಗಳಾದ
ಹಾಲು,
ಪತ್ರಿಕೆ,
ಆಸ್ಪತ್ರೆ,
ಮೆಡಿಕಲ್
ಶಾಪ್,
ಆಂಬುಲೆನ್ಸ್,
ಪೆಟ್ರೋಲ್,
ಡೀಸೆಲ್,
ಗ್ಯಾಸ್
ಸಾಗಾಣಿಕೆ
ವಾಹನಗಳ
ಸಂಚಾರಕ್ಕೆ
ಯಾವುದೇ
ನಿರ್ಬಂಧ
ಇರುವುದಿಲ್ಲ.
ಪತ್ರಕರ್ತರು,
ಪೆಟ್ರೋಲ್
ಬಂಕ್,
ಕಾರ್ಖಾನೆಗಳು
ಮತ್ತು
ಕೈಗಾರಿಕೆಗಳು
ರಾತ್ರಿ
ಅವಧಿಯಲ್ಲೂ
ಕಾರ್ಯನಿರ್ವಹಿಸುವುದಕ್ಕೆ
ಅವಕಾಶ
ನೀಡಲಾಗಿದೆ.
ಆದರೆ
ರಾತ್ರಿ
ಪಹರೆಯಲ್ಲಿ
ಕಾರ್ಯ
ನಿರ್ವಹಿಸುವ
ಕಾರ್ಮಿಕರು
ಮತ್ತು
ಪತ್ರಕರ್ತರು
ಗುರುತಿನ
ಚೀಟಿಯನ್ನು
ಹೊಂದಿರಬೇಕು.
ರಾಜ್ಯದಲ್ಲಿ
ಯಾವೆಲ್ಲ
ಸೇವೆಗಳು
ಅಲಭ್ಯ?:
ತಮಿಳುನಾಡಿನಲ್ಲಿ
ಭಾನುವಾರ
ಲಾಕ್ಡೌನ್
ಸಂದರ್ಭದಲ್ಲಿ
ಮಾಂಸದ
ಅಂಗಡಿ,
ಮೀನು
ಮಾರುಕಟ್ಟೆ,
ತರಕಾರಿ
ಅಂಗಡಿ,
ಚಿತ್ರ
ಮಂದಿರ,
ವಾಣಿಜ್ಯ
ಮಳಿಗೆಗಳು
ಸೇರಿದಂತೆ
ಎಲ್ಲ
ಅಂಗಡಿ-ಮುಂಗಟ್ಟುಗಳನ್ನು
ಬಂದ್
ಮಾಡುವುದಕ್ಕೆ
ಸೂಚಿಸಲಾಗಿದೆ.
ಹೋಟೆಲ್
ಮತ್ತು
ರೆಸ್ಟೋರೆಂಟ್
ಸಮಯವನ್ನು
ಬೆಳಗ್ಗೆ
6
ರಿಂದ
10,
ಮಧ್ಯಾಹ್ನ
12
ರಿಂದ
3
ಹಾಗೂ
ಸಂಜೆ
6
ರಿಂದ
9
ಗಂಟೆವರೆಗೂ
ನಿಗದಿಗೊಳಿಸಲಾಗಿದೆ.
ತಮಿಳುನಾಡಿನಲ್ಲಿ
ಮ್ಯೂಸಿಯಂ,
ಉದ್ಯಾನವನ,
ಮೃಗಾಲಯಗಳನ್ನು
ಬಂದ್
ಮಾಡುವುದಕ್ಕೆ
ಸೂಚಿಸಲಾಗಿದೆ.
ಉಳಿದಂತೆ
ಎಲ್ಲ
ಐಟಿ
ಕಂಪನಿಗಳಲ್ಲಿ
ಶೇ.50ರಷ್ಟು
ಸಿಬ್ಬಂದಿ
ಸಾಮರ್ಥ್ಯದಲ್ಲಿ
ಕಾರ್ಯ
ನಿರ್ವಹಿಸುವುದಕ್ಕೆ
ಅನುಮತಿ
ನೀಡಲಾಗಿದೆ.