ಅಭಿನಂದನ್ ಗೆ ಪರಮ ವೀರ ಚಕ್ರ ನೀಡುವಂತೆ ತಮಿಳುನಾಡಿನಿಂದ ಶಿಫಾರಸು
ಚೆನ್ನೈ, ಮಾರ್ಚ್ 08: ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್, ಪೈಲಟ್ ಅಭಿನಂದನ್ ವರ್ತಮಾನ್ ಅವರಿಗೆ ದೇಶದ ಅತ್ಯುನ್ನುತ ಸೇನಾ ಪದಕ ಪರಮ ವೀರ ಚಕ್ರ ನೀಡಿ ಗೌರವಿಸುವಂತೆ ತಮಿಳುನಾಡು ಸರ್ಕಾರದ ಪರವಾಗಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಬಾಲಕೋಟ್ ವೈಮಾನಿಕ ದಾಳಿ ಬಳಿಕ ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಅಟ್ಟಿಸಿಕೊಂಡು ದಾಳಿ ನಡೆಸಿದ್ದ ಮಿಗ್ 21 ಬೈಸನ್ ವಿಮಾನದ ಪೈಲಟ್ ಅಭಿನಂದನ್ ಅವರ ಸಾಹಸವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಎಫ್ 16 ಹೊಡೆದುರುಳಿಸುವ ಭರದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೆರೆ ಸಿಕ್ಕಿದ್ದ ಅಭಿನಂದನ್ ಅವರು ಸುಮಾರು 60 ಗಂಟೆಗಳ ಕಾಲ ಶತ್ರು ರಾಷ್ಟ್ರದ ಹಿಡಿತದಲ್ಲಿದ್ದರು.
ಮಿಗ್ 21ರಿಂದ ಜಿಗಿಯುವ ಮುನ್ನ ಅಭಿನಂದನ್ ರೇಡಿಯೋ ಸಂದೇಶವೇನು?
ಆದರೂ, ದೇಶಕ್ಕೆ ಮಾರಕವಾಗಬಲ್ಲ ಯಾವುದೇ ಮಾಹಿತಿಯನ್ನು ಹೊರ ಹಾಕದೆ, ಧೈರ್ಯ ಸಂಯಮ ಮೆರೆದಿದ್ದಾರೆ. ಹೀಗಾಗಿ, ಅವರಿಗೆ ಅತ್ಯುನ್ನತ ಮಿಲಿಟರಿ ಗೌರವ ಸಿಗಬೇಕಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.
Chief Minister of Tamil Nadu, Edappadi K. Palaniswami writes to Prime Minister Narendra Modi requesting Param Veer Chakra (country's highest military honour) for Wing Commander Abhinandan Varthaman. (File pic) pic.twitter.com/6HVzrumn7F
— ANI (@ANI) March 8, 2019
ಅಭಿನಂದನ್ಗೂ ಬೆಂಗಳೂರಿಗೂ ಅಳಿಯದ ನಂಟು ಇದೆ
ಪರಮ್ ವೀರ್ ಚಕ್ರ ಇಲ್ಲಿ ತನಕ 21 ಬಾರಿ ನೀಡಲಾಗಿದೆ.ಯುನೈಟೆಡ್ ಸ್ಟೇಟ್ಸ್ ನ ಮೆಡಲ್ ಆಫ್ ಹಾನರ್ ಹಾಗೂ ಯುನೈಟೆಡ್ ಕಿಂಗ್ಡಮ್ ನ ವಿಕ್ಟೋರಿಯಾ ಕ್ರಾಸ್ ಗೆ ಸಮಾನದ ಮಿಲಿಟರಿ ಗೌರವ ಇದ್ದಾಗಿದೆ. ಈ ಪೈಕಿ 14 ಮಂದಿ ಹುತಾತ್ಮರಿಗೆ ಹಾಗೂ 16 ಮಂದಿ ಭಾರತ- ಪಾಕಿಸ್ತಾನ ಯುದ್ಧದಲ್ಲಿ ಕಾದಾಡಿದ ಯೋಧರಿಗೆ ಲಭಿಸಿದೆ. 21 ಪ್ರಶಸ್ತಿ ವಿಜೇತರ ಪೈಕಿ 20 ಮಂದಿ ಭಾರತೀಯ ಭೂ ಸೇನೆಗೆ ಸೇರಿದ್ದರೆ, ಒಬ್ಬರು(ಫ್ಲೈಯಿಂಗ್ ಆಫೀಸರ್ ನಿರ್ಮಲ್ ಜಿತ್ ಸಿಂಗ್ ಶೆಖೋನ್) ಮಾತ್ರ ಭಾರತೀಯ ವಾಯುಸೇನೆಗೆ ಸೇರಿದವರು.