ತಮಿಳುನಾಡಿನ ಈ 'ಸಿದ್ಧ' ಔಷಧಿಯಿಂದ ಕೊರೊನಾವೈರಸ್ ಮಾಯ
ಚೆನ್ನೈ, ಜೂನ್ 24: ತಮಿಳುನಾಡಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 64 ಸಾವಿರದ ಗಡಿ ದಾಟಿದೆ.
Recommended Video
ರಾಜ್ಯ ಸರ್ಕಾರವು ಸ್ಥಳೀಯ 'ಸಿದ್ಧ' ಔಷಧಿಯನ್ನು ಕಡಿಮೆ ಪ್ರಮಾಣದಲ್ಲಿ ಅಥವಾ ಸೋಂಕು ಇಲ್ಲದವರಿಗೆ ನೀಡಲು ಸಿದ್ಧವಾಗಿದ್ದು, ಇದರಿಂದ ಶೇ.100 ಚೇತರಿಕೆ ಕಾಣಲಿದೆ ಎಂದು ವಿಶ್ವಾಸ ವ್ಯಕ್ತವಾಗಿದೆ.
ಪತಂಜಲಿಯ'ಕೊರೊನಿಲ್' ಔಷಧ ಮಾರಾಟಕ್ಕೆ ಕೇಂದ್ರ ಸರ್ಕಾರ ತಡೆ
ಜೂನ್ 23ರಂದು ಯೋಗ ಗುರು ಬಾಬಾ ರಾಮ್ದೇವ್ ಅವರು ಪತಂಜಲಿಯ ಕೊರೊಲಿನ್ ಎನ್ನುವ ಔಷಧಿಯನ್ನು ಬಿಡುಗಡೆ ಮಾಡಿದ್ದರು. ಅದು ಆಯುಷ್ ಮಂತ್ರಾಲಯದಡಿ ಬರುತ್ತದೆ. ಅವರ ಒಪ್ಪಿಗೆ ಸಿಗದೆ ಔಷಧಿಯನ್ನು ಮಾರಾಟ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ.
ತಮಿಳುನಾಡಿನಲ್ಲಿ ಈಗಾಗಲೇ 25 ಮಂದಿಗೆ ಈ ಔಷಧಿಯನ್ನು ನೀಡಿದ್ದು, ಅವರು ಚೇತರಿಸಿಕೊಂಡಿದ್ದಾರೆ. ಈ ಚಿಕಿತ್ಸೆಯನ್ನು ವ್ಯಾಸರ್ಪಡಿಯಲ್ಲಿರುವ ಅಂಬೇಡ್ಕರ್ ಕಾಲೇಜಿಗೂ ವಿಸ್ತರಿಸಲಾಗಿದೆ. ಅಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರಿದ್ದಾರೆ.
ಜನರನ್ನು ಸಾವಿನ ದವಡೆಗೆ ತಳ್ಳುತ್ತಿಲ್ಲ, ಇದರಿಂದ ಶೇ.100 ರಷ್ಟು ಗುಣಮುಖರಾಗುವ ಭರವಸೆ ಇದೆ. ಜನರು ನಂಬಿಕೆ ಇಟ್ಟಿದ್ದಾರೆ. ಇದರಿಂದ ಸಾಕಷ್ಟು ಪ್ರಕರಣಗಳಲ್ಲಿ ಚೇತರಿಕೆ ಕಂಡು ಬಂದಿದೆ. ಸಿದ್ಧ ಔಷಧಿಯನ್ನು ಸೇವಿಸಿದರೆ ಆಕ್ಸಿಜನ್ , ವೆಂಟಿಲೇಟರ್ ಅಳವಡಿಸುವ ಹಂತಕ್ಕೆ ಹೋಗುವುದನ್ನು ತಪ್ಪಿಸಬಹುದು.
ಸಿದ್ಧ ಔಷಧಿಗೆ ಪುರಾವೆಗಳಿಲ್ಲ, ಓದು ನಡೆದಿಲ್ಲ, ಸಂಧೋಧನೆಯನ್ನು ಬಹಿರಂಗಗೊಂಡಿಲ್ಲ. ಅಲೋಪಥಿ ಔಷಧಿಯನ್ನು ಮೊದಲು ಪ್ರಾಣಿಗಳ ಮೇಲೆ ಪ್ರಯೋಗಿಸಲಾಗುತ್ತದೆ. ಬಳಿಕ ರೋಗಿ, ಹಾಗೂ ಆರೋಗ್ಯವಂತರ ಮೇಲೂ ಪ್ರಯೋಗ ನಡೆಸಲಾಗುತ್ತದೆ ಎಂದು ಡಾ.ಅರ್ಥೂರ್ ತಿಳಿಸಿದ್ದಾರೆ.