ತಮಿಳುನಾಡು: ಟಾಮ್ನ ನೆನಪಿಗಾಗಿ ಪ್ರತಿಮೆ ನಿರ್ಮಿಸಿದ 82 ವರ್ಷದ ವ್ಯಕ್ತಿ
ಚೆನ್ನೈ ಏಪ್ರಿಲ್ 5: ಸಾಕು ಪ್ರಾಣಿಗಳು ಅಂದರೆ ಯಾರಿಗೆ ತಾನೆ ಇಷ್ಟ ಆಗೋದಿಲ್ಲ ಹೇಳಿ. ಅವುಗಳ ಮುಗ್ಧತೆ, ತುಂಟಾಟ, ಪ್ರೀತಿಗೆ ಮಾರು ಹೋಗದವರಿಲ್ಲ. ಅದರಲ್ಲೂ ಸಾಕು ಪ್ರಾಣಿಗಳಲ್ಲಿ ನಾಯಿಗಳೆಂದರೆ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿ ಮಾಡುವವರು ನಮ್ಮ ನಡುವೆ ಇದ್ದಾರೆ. ಮನಷ್ಯರಿಗಿಂತಲೂ ಚೆನ್ನಾಗಿ ನೋಡಿಕೊಂಡು ಅದರ ಪೋಷಣೆ ಮಾಡುವಂತವರು ಹೆಚ್ಚಾಗಿ ಕಾಣಸಿಗುತ್ತಾರೆ. ಆದರೆ ಸಾಕು ಪ್ರಾಣಿಗಳನ್ನ ಎಷ್ಟೇ ಪ್ರೀತಿಸುತ್ತಿದ್ದರೂ ಅವುಗಳ ಅಗಲಿಕೆಯ ನಂತರ ಅವುಗಳನ್ನು ನೆನಪಿಸಿಕೊಳ್ಳುವವರು ತುಂಬಾ ವಿರಳ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಪ್ರೀತಿಯ ಸಾಕು ನಾಯಿ ಅಗಲಿಕೆದ ನಂತರ ಅದರ ಪ್ರತಿಮೆಯನ್ನು ನಿರ್ಮಿಸಿ ನಿತ್ಯ ಪೂಜೆ ಮಾಡುತ್ತಾರೆ.
Tamil Nadu | Muthu, an 82-year-old man has built a statue in memory of his dog, Tom in Sivaganga's Manamadurai.
— ANI (@ANI) April 5, 2022
"I have affection for my dog more than for my child. Tom was with me since 2010 but he died in 2021. My grandparents and father all were dog lovers," he said pic.twitter.com/TGl1FFSBaY
ತಮಿಳುನಾಡಿನ 82 ವರ್ಷದ ಮುತ್ತು ತನ್ನ ಇತ್ತೀಚೆಗೆ ಸತ್ತುಹೋದ ತನ್ನ ನಾಯಿ ಟಾಮ್ ನೆನಪಿಗಾಗಿ ಅಮೃತಶಿಲೆಯ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಶಿವಗಂಗೆಯ ಮನಮದುರೈನಲ್ಲಿ ಸ್ಥಾಪಿಸಿರುವ ಈ ಪ್ರತಿಮೆಗೆ ನಿವೃತ್ತ ಸರ್ಕಾರಿ ನೌಕರ ಮುತ್ತು ಬರೋಬ್ಬರಿ 80,000 ರೂ. ಖರ್ಚು ಮಾಡಿದ್ದಾರೆ.
"ನನಗೆ ನನ್ನ ಮಗುವಿಗಿಂತ ಹೆಚ್ಚಾಗಿ ನನ್ನ ನಾಯಿಯ ಮೇಲೆ ಪ್ರೀತಿ ಇದೆ. ಟಾಮ್ 2010 ರಿಂದ ನನ್ನೊಂದಿಗೆ ಇದ್ದನು. ಆದರೆ ಕಳೆದ ಜನವರಿಯಲ್ಲಿ ನಿಧನ ಹೊಂದಿದೆ. ನನ್ನ ಅಜ್ಜಿ ಮತ್ತು ತಂದೆ ಎಲ್ಲರೂ ನಾಯಿ ಪ್ರೇಮಿಗಳು" ಎಂದು 82 ವರ್ಷದ ಶ್ವಾನ ಪ್ರೇಮಿ ಮುತ್ತು ಹೇಳುತ್ತಾರೆ. ಈ ದಿವಂಗತ ಲ್ಯಾಬ್ರಡಾರ್ನ ಟಾಮಿಯ ಅಮೃತಶಿಲೆಯ ಪ್ರತಿಮೆಯನ್ನು ಈ ವರ್ಷದ ಜನವರಿಯಲ್ಲಿ ಸ್ಥಾಪಿಸಲಾಯಿತು.
ವಿಡಿಯೋ: 'ನಾಗ'ಪ್ಪನ್ನು ಕೆಣಕಿ ಆಸ್ಪತ್ರೆ ಹಾಸಿಗೆ ಹಿಡಿದ ಸಾಯದ್!
ಮುತ್ತು ಅವರ ಸೋದರಳಿಯ ಮನೋಜ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, "ಟಾಮ್ ಅನ್ನು ನನ್ನ ಸಹೋದರ ಅರುಣ್ ಕುಮಾರ್ 11 ವರ್ಷಗಳ ಹಿಂದೆ ಖರೀದಿಸಿದ್ದರು. ಆದರೆ ಅದನ್ನು ನಮ್ಮೊಂದಿಗೆ ಇಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ ನಾವು ಆರು ತಿಂಗಳ ನಂತರ ಅವನನ್ನು ನಮ್ಮ ಮಾವನಿಗೆ ಒಪ್ಪಿಸಿದ್ದೆವು. ಟಾಮ್ ಅವರ ಒಡನಾಡಿಯಾಗಿದ್ದನು. ಇಬ್ಬರ ನಡುವೆ ಪರಸ್ಪರ ಪ್ರೀತಿ ಬೇರ್ಪಡಿಸಲಾಗದಷ್ಟು ಹೆಚ್ಚಾಗಿತ್ತು. ಆದರೆ ಟಾಮ್ ಕಳೆದ ವರ್ಷ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಚಿಕಿತ್ಸೆಗೆ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ಜನವರಿ 2022 ರಲ್ಲಿ ನಿಧನ ಹೊಂದಿತು. ಮುತ್ತು ಅವರು ನಾಯಿಯೊಂದಿಗೆ ಸುಮಾರು 11 ವರ್ಷಗಳನ್ನು ಕಳೆದರು" ಎಂದು ಅವರು ಹೇಳಿದರು.
ನಾಯಿಯ ಮರಣದ ನಂತರ, ವಯಸ್ಸಾದ ವ್ಯಕ್ತಿ ತನ್ನ ಪ್ರೀತಿಯ ನಾಯಿಗಾಗಿ ಮನಮದುರೈ ಬಳಿಯ ಕೃಷಿಭೂಮಿಯಲ್ಲಿ ಸಣ್ಣ ದೇವಾಲಯವನ್ನು ಸ್ಥಾಪಿಸಿದರು. ವರದಿಗಳ ಪ್ರಕಾರ, ಅಮೃತಶಿಲೆಯ ಪ್ರತಿಮೆಯನ್ನು ನಿರ್ಮಿಸಲು ಅವರು ತಮ್ಮ ಜೀವನದ ಉಳಿತಾಯದಿಂದ 80,000 ರೂ. ಖರ್ಚು ಮಾಡಿದ್ದಾರೆ. ದೇವಾಲಯವು ಎಲ್ಲರಿಗೂ ತೆರೆದಿರುತ್ತದೆ ಮತ್ತು ನಾಯಿಯ ಪ್ರತಿಮೆಗೆ ಪ್ರತಿದಿನ ನೈವೇದ್ಯವನ್ನು ಮಾಡಲಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ ನಾಯಿಯ ನೆಚ್ಚಿನ ಆಹಾರವನ್ನು ನೈವೇದ್ಯಕ್ಕೆ ಇಡಲಾಗುತ್ತದೆ.