ತಮಿಳುನಾಡು ವಿಧಾನಸಭೆ ಕದನಕ್ಕೆ ಸೂಪರ್ ಸ್ಟಾರ್ ರಜನಿ ಎಂಟ್ರಿ!
ಚೆನ್ನೈ, ಏಪ್ರಿಲ್ 19: ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಸೂಪರ್ ಸ್ಟಾರ್ ಬಿರುದಾಂಕಿತ ರಜನಿಕಾಂತ್ ಅವರು ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸದ್ಯ ನಡೆದಿರುವ ಲೋಕಸಭೆ ಚುನಾವಣೆ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ರಜನಿಕಾಂತ್ ಅವರು ಈ ರೀತಿ ಉತ್ತರಿಸಿದ್ದಾರೆ. ಎಐಎಡಿಎಂಕೆಗೆ ಒಂದು ವೇಳೆ ಮೇ 23ರಂದು ಬಹುಮತ ಸಿಗದಿದ್ದರೆ ಏನು ಮಾಡುತ್ತೀರಿ, ಸರ್ಕಾರ ಪತನವಾದರೆ ನಿಮ್ಮ ನಡೆಯೇನು? ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ? ಎಂಬ ಪ್ರಶ್ನೆಗೆ ರಜನಿ ಉತ್ತರಿಸಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಾಗಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬರುತ್ತಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿ, ಮೇ 23ಕ್ಕೆ ನಿಮಗೆ ಉತ್ತರ ಸಿಗಲಿದೆ ಎಂದಿದ್ದಾರೆ.
Rajinikanth on being asked if he will contest state polls if AIADMK falls short of majority after assembly bypolls: Whenever it is announced I am ready. I will decide after May 23 #TamilNadu pic.twitter.com/mjfR10xeRg
— ANI (@ANI) April 19, 2019
ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆ ಜೊತೆಗೆ 18 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಏಪ್ರಿಲ್ 18ರಂದು ನಡೆದಿದ್ದು, ಮೇ23ರಂದು ಫಲಿತಾಂಶ ಹೊರಬರಲಿದೆ.
ಬಿಜೆಪಿ ಪ್ರಣಾಳಿಕೆಯಲ್ಲಿನ 'ನದಿ ಜೋಡಣೆ' ಅಂಶ ಮೆಚ್ಚಿದ ರಜನಿ
ಈ ಬಾರಿಯ ಲೋಕಸಭೆ ಚುನಾವಣೆ ವೇಳೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಯಾವ ಪಕ್ಷದ ಪರ ನಿಲ್ಲಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ, ಯಾರ ಪರವೂ ನಿಲ್ಲದೆ, ತಟಸ್ಥವಾಗಿರುವ ರಜನಿ ಅವರು ರಾಜಕೀಯ ಸಂಘಟನೆ ಬಗ್ಗೆ ಘೋಷಿಸಿದರೂ ಸಕ್ರಿಯವಾಗಿಲ್ಲ.
ಲೋಕಸಭೆ ಚುನಾವಣೆ: ಕಮಲ ಹಾಸನ್ಗೆ ತಲೈವಾ ಬೆಂಬಲ?
ಕೆಲ ವರ್ಷಗಳ ಹಿಂದೆ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ರಾಜಕೀಯ ಸಂಘಟನೆ ಆರಂಭಿಸಿದ ರಜನಿಕಾಂತ್ ಅವರು ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನೀರಿಕ್ಷೆಯಿದೆ.