ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲೈನಾರ್‌ ಕಣ್ಮರೆ: 80 ಕಡೆ ಹಿಂಸಾಚಾರ, ಕಾಲ್ತುಳಿತದಲ್ಲಿ ಗಂಭೀರ ಗಾಯ

By Nayana
|
Google Oneindia Kannada News

ಚೆನ್ನೈ, ಆಗಸ್ಟ್ 8: ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ನಿಧನ ಹಿನ್ನೆಲೆ ರಾಜ್ಯಾದ್ಯಂತ ಒಟ್ಟು 80 ಹಿಂಸಾಚಾರ ಪ್ರಕರಣ ದಾಖಲಾಗಿದೆ.

ಕಲ್ಲು ತೂರಾಟ ಸೇರಿದಂತೆ ಒಟ್ಟು 80 ಹಿಂಸಾಚಾರ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ. ಚೆನ್ನೈನ ಮರೀನಾ ಬೀಚ್‌ನ ಪೆರಿಯಾರ್‌ ಪುತ್ಥಳಿ ಬಳಿ ಅಭಿಮಾನಿಗಳ ನೂಕುನುಗ್ಗಲಿನಲ್ಲಿ ಕಾಲ್ತುಳಿತಕ್ಕೆ ಸಿಲುಕಿ 40 ಮಂದಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಕರುಣಾನಿಧಿ ನಿಧನ: ಮುಗಿಲುಮುಟ್ಟಿದ ಜನತೆಯ ಆಕ್ರಂದನ (In Pics) ಕರುಣಾನಿಧಿ ನಿಧನ: ಮುಗಿಲುಮುಟ್ಟಿದ ಜನತೆಯ ಆಕ್ರಂದನ (In Pics)

ದಕ್ಷಿಣ ಭಾರತದ ಮುತ್ಸದ್ಧಿ ರಾಜಕಾರಣಿ ಕರುಣಾನಿಧಿ ಮಂಗಳವಾರ ಸಂಜೆ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ 6.10ಕ್ಕೆ ವಿಧಿವಶರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಕಳೆದ 12 ದಿನಗಳಿಂದ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗಿದೆ ನಿಧನರಾಗಿದ್ದಾರೆ.

Stampede in Chennai: Two seriously injured

ಕಲೈನಾರ್‌ ಎಂದೇ ಖ್ಯಾತರಾದ ಎಂ. ಕರುಣಾನಿಧಿ ಅವರು 1924ರ ಜೂನ್ 3ರಲ್ಲಿ ಜನಿಸಿದರು. ಹೋರಾಟ ಮತ್ತು ರಾಜಕೀಯದಲ್ಲಿ ಚಿಕ್ಕಂದಿನಿಂದಲೇ ಆಸಕ್ತಿ ಹೊಂದಿದ್ದ ಕರುಣಾನಿಧಿ, 14ನೇ ವಯಸ್ಸಿನಲ್ಲೇ ರಾಜಕೀಯ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದರು.

LIVE:ಪೆರಿಯಾರ್ ಪುತ್ಠಳಿ, ಬಳಿ ಕಾಲ್ತುಳಿತ ಇಬ್ಬರ ಸ್ಥಿತಿ ಗಂಭೀರLIVE:ಪೆರಿಯಾರ್ ಪುತ್ಠಳಿ, ಬಳಿ ಕಾಲ್ತುಳಿತ ಇಬ್ಬರ ಸ್ಥಿತಿ ಗಂಭೀರ

ಡಿಎಂಕೆ ನಾಯಕ ಎಂ ಕರುಣಾನಿಧಿ ನಿಧನದಿಂದ ಡಿಎಂಕೆ ನಾಯಕರೂ ಸೇರಿದಂತೆ ತಮಿಳುನಾಡು ಜನತೆ ಶೋಕ ಸಾಗರದಲ್ಲಿ ಮುಳುಗಿದೆ.

ಚಿತ್ರದಲ್ಲಿ ಎಂ ಕರುಣಾನಿಧಿ ವಂಶವೃಕ್ಷದ ಮಾಹಿತಿಚಿತ್ರದಲ್ಲಿ ಎಂ ಕರುಣಾನಿಧಿ ವಂಶವೃಕ್ಷದ ಮಾಹಿತಿ

ತಮ್ಮ ನೆಚ್ಚಿನ ನಾಯಕನನ್ನು ಕಳೆದುಕೊಂಡ ಹಿನ್ನಲೆಯಲ್ಲಿ ಡಿಎಂಕೆ ಕಾರ್ಯಕರ್ತರು ಹಿಂಸಾಚಾರಕ್ಕೆ ಇಳಿಯಬಹುದು ಎಂಬ ಕಾರಣಕ್ಕೆ ತಮಿಳುನಾಡಿನಾದ್ಯಂತ 2 ಲಕ್ಷಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅದರ ಮಧ್ಯೆಯೂ ಕಲ್ಲು ತೂರಾಟ ಸೇರಿದಂತೆ ಹಿಂಸಾಚಾರ ಪ್ರಕರಣಗಳು ದಾಖಲಾಗಿದೆ.

English summary
At least 80 cases have been registered for violence and two were badly injured in stampede in Chennai day after former chief minister M. Karunanidhi demise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X