ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿಗೆ ಕಾವೇರಿ ನೀರು; ಮೆಟ್ಟೂರು ಡ್ಯಾಂ 100 ಅಡಿಗೂ ಹೆಚ್ಚು ನೀರು!

|
Google Oneindia Kannada News

ಚೆನ್ನೈ, ಜೂನ್ 18 : ತಮಿಳುನಾಡಿಗೆ ಜೂನ್ ತಿಂಗಳ ಕಂತಿನ 9.19 ಟಿಎಂಸಿ ಅಡಿ ನೀರನ್ನು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ. ಮತ್ತೊಂದು ಕಡೆ ಮೆಟ್ಟೂರು ಡ್ಯಾಂ ಭರ್ತಿಯಾಗಿದ್ದು, ನಾಲೆಗಳ ಮೂಲಕ ನೀರನ್ನು ಹೊರಬಿಡಲಾಗಿದೆ.

Recommended Video

Sreesanth to make a comeback to Ranji cricket at the age of 37 | Oneindia Kannada

ಕಾವೇರಿ ವಿವಾದದ ಅಂತಿಮ ತೀರ್ಪಿನ ಅನ್ವಯ ಕರ್ನಾಟಕ ಸರ್ಕಾರ ತಮಿಳುನಾಡಿಗೆ ಜೂನ್‌ನಲ್ಲಿ 9.19 ಟಿಎಂಸಿ ಅಡಿ, ಜುಲೈ ತಿಂಗಳಿನಲ್ಲಿ 31.24 ಟಿಎಂಸಿ ಅಡಿ ನೀರನ್ನು ಹರಿಸಬೇಕು. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಈಗ ನೀರು ಹರಿಸುವಂತೆ ನಿರ್ದೇಶ ನೀಡಿದೆ.

ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಕರ್ನಾಟಕಕ್ಕೆ ಸೂಚನೆ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಕರ್ನಾಟಕಕ್ಕೆ ಸೂಚನೆ

ತಮಿಳುನಾಡಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ಮೆಟ್ಟೂರು ಜಲಾಶಯ ಭರ್ತಿಯಾಗಿದೆ. 9 ವರ್ಷಗಳ ಬಳಿಕ ನಾಲೆಗಳಿಗೆ ನೀರನ್ನು ಹರಿಸಲಾಗುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಜಲಾಶಯಕ್ಕೆ ಪೂಜೆ ಸಲ್ಲಿಸಿ 3 ಸಾವಿರ ಕ್ಯೂಸೆಕ್ ನೀರನ್ನು ನಾಲೆಗಳಿಗೆ ಬಿಡುಗಡೆ ಮಾಡಿದ್ದಾರೆ.

ಕಾವೇರಿ ನದಿ ಮುಖಜಭೂಮಿ: ತಮಿಳುನಾಡು ಮಹತ್ವದ ತೀರ್ಮಾನಕಾವೇರಿ ನದಿ ಮುಖಜಭೂಮಿ: ತಮಿಳುನಾಡು ಮಹತ್ವದ ತೀರ್ಮಾನ

ಕಳೆದ ಕೆಲವು ದಿನಗಳಿಂದ ತಮಿಳುನಾಡಿನಲ್ಲಿ ಉತ್ತಮ ಮಳೆಯಾಗುತ್ತಿದೆ. 120 ಅಡಿ ಎತ್ತರದ ಮೆಟ್ಟೂರು ಜಲಾಶಯದಲ್ಲಿ ಕಳೆದ 6 ತಿಂಗಳಿನಿಂದ 100 ಅಡಿಗೂ ಅಧಿಕ ನೀರಿನ ಸಂಗ್ರಹವಿದೆ. ಒಟ್ಟು 90 ದಿನಗಳ ಕಾಲ ಮೂರು ಸಾವಿರ ಕ್ಯೂಸೆಕ್ ನೀರನ್ನು ನಾಲೆಗಳಿಗೆ ಬಿಡಲಾಗುತ್ತದೆ.

ಕೃಷ್ಣರಾಜಸಾಗರ ಅಣೆಕಟ್ಟು ಇಂದಿನ ನೀರಿನ ಮಟ್ಟಕೃಷ್ಣರಾಜಸಾಗರ ಅಣೆಕಟ್ಟು ಇಂದಿನ ನೀರಿನ ಮಟ್ಟ

ಕೆಆರ್‌ಎಸ್‌ನಲ್ಲಿ ಎಷ್ಟು ನೀರಿದೆ?

ಕೆಆರ್‌ಎಸ್‌ನಲ್ಲಿ ಎಷ್ಟು ನೀರಿದೆ?

ಕರ್ನಾಟಕದಲ್ಲಿ ಈಗ ಮಳೆ ಆರಂಭವಾಗುತ್ತಿದೆ. ಕಾವೇರಿ ನದಿ ಪಾತ್ರದಲ್ಲಿ ಮಳೆ ಜೋರಾಗಿ ಸುರಿದು ಇನ್ನೂ ಜಲಾಶಯಕ್ಕೆ ಒಳಹರಿವು ಬರಬೇಕಿದೆ. ತಮಿಳುನಾಡಿಗೆ ಜೂನ್ ತಿಂಗಳ ಕೋಟಾದ 9.19 ಟಿಎಂಸಿ ಅಡಿ ನೀರನ್ನು ಮಂಡ್ಯದ ಕೆಆರ್‌ಎಸ್ ಜಲಾಶಯದಿಂದ ಬಿಡಬೇಕು. 124.80 ಅಡಿ ಜಲಾಶಯದಲ್ಲಿ 92.87 ಅಡಿ ನೀರಿನ ಸಂಗ್ರವಿದೆ (45.05 ಟಿಎಂಸಿ ಅಡಿ).

ಭರ್ತಿಯಾಗಿದೆ ಮೆಟ್ಟೂರು ಡ್ಯಾಂ

ಭರ್ತಿಯಾಗಿದೆ ಮೆಟ್ಟೂರು ಡ್ಯಾಂ

ತಮಿಳುನಾಡಿನ ಮೆಟ್ಟೂರು ಡ್ಯಾಂ ಭರ್ತಿಯಾಗಿದೆ. ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಜಲಾಶಯದಿಂದ 3 ಸಾವಿರ ಕ್ಯೂಸೆಕ್ ನೀರನ್ನು ನಾಲೆಗಳಿಗೆ ಬಿಡುಗಡೆ ಮಾಡಿದ್ದಾರೆ. 2011ರ ಬಳಿಕ ಮೊದಲ ಬಾರಿಗೆ ನಾಲೆಗಳಿಗೆ ನೀರು ಹರಿಸಲಾಗಿದೆ. ಶುಕ್ರವಾರದಿಂದ 10 ಸಾವಿರ ಕ್ಯೂಸೆಕ್‌ ನೀರನ್ನು ಬಿಡಲಾಗುತ್ತದೆ ಎಂದು ಹೇಳಿದ್ದಾರೆ.

ರೈತರಿಗೆ ಅನುಕೂಲವಾಗಲಿದೆ

ರೈತರಿಗೆ ಅನುಕೂಲವಾಗಲಿದೆ

ಮೆಟ್ಟೂರು ಡ್ಯಾಂನಿಂದ ನಾಲೆಗಳಿಗೆ ನೀರನ್ನು ಬಿಟ್ಟರೆ ನಾಗಪಟ್ಟಿನಂ, ತಂಜಾವೂರು, ಪುದುಕೋಟೈ ಸೇರಿದಂತೆ ವಿವಿಧ ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ. ಜಲಾಶಯದ ಕೆಳಭಾಗದ ಸುಮಾರು 5 ಲಕ್ಷ ಎಕರೆ ಭೂಮಿಯಲ್ಲಿ ರೈತರು ಅಲ್ಪ ಅವಧಿಯ ಬೆಳೆಯನ್ನು ಬೆಳೆಯುತ್ತಾರೆ.

ಭರ್ತಿಯಾದ ಮೆಟ್ಟೂರು ಡ್ಯಾಂ ನೋಟ

ಭರ್ತಿಯಾಗಿರುವ ಮೆಟ್ಟೂರು ಡ್ಯಾಂನ ವಿಡಿಯೋವನ್ನು ಮುಖ್ಯಮಂತ್ರಿಗಳು ತಮ್ಮ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.

English summary
Tamil Nadu CM Edappadi K.Palaniswami released the water of Mettur dam. Sluice gates of the reservoir opened after 9 years. Over the past 6 months the water-level has been near the 120-feet mark in the reservoir. Karnataka to release 9.19 tmcft of water for June.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X