ಒಳ್ಳೆಯ ಹಿಂದುವಿಗೆ ಅಯೋಧ್ಯೆಯಲ್ಲಿ ರಾಮಮಂದಿರ ಬೇಕಿಲ್ಲ: ತರೂರ್
ಚೆನ್ನೈ, ಅಕ್ಟೋಬರ್ 15: 'ಒಳ್ಳೆಯ ಹಿಂದುವಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದು ಬೇಕಿಲ್ಲ' ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಬಾಬ್ರಿ ದೇಶಕ್ಕೆ ಕಳಂಕ, ಅದು ಮಸೀದಿಯಲ್ಲ: ಮುಸ್ಲಿಂ ಮುಖಂಡ!
'ಮತ್ತೊಬ್ಬರ ಪೂಜಾ ಸ್ಥಳವನ್ನು ನಾಶಮಾಡಿ, ಆ ಜಾಗದಲ್ಲಿ ರಾಮಮಂದಿರ ಕಟ್ಟುವುದು ಒಬ್ಬ ಉತ್ತಮ ಹಿಂದುವಿಗೆ ಬೇಕಿಲ್ಲ, ಅದನ್ನು ಎಂದಿಗೂ ಆತ ಬಯಸುವುದಿಲ್ಲ' ಎಂದು ತರೂರ್ ಹೇಳಿದ್ದರು.
ಚೆನ್ನೈಯಲ್ಲಿ ನಡೆದ ಸಾಹಿತ್ಯ ಹಬ್ಬದಲ್ಲಿ ಮಾತನಾಡುತ್ತಿದ್ದ ಅವರು, ರಾಮಮಂದಿರದ ಬಗ್ಗೆ ಮತ್ತೆ ಬಿಜೆಪಿ ಮಾತನಾಡುತ್ತಿದೆ. 2019 ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹಿಂದುಗಳ ಓಲೈಕೆಗಾಗಿ ಬಿಜೆಪಿ ಈ ಕೆಲಸ ಮಾಡುತ್ತಿದೆ. ಆದರೆ ಒಬ್ಬ ಒಳ್ಳೆಯ ಹಿಂದುವಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದು ಬೇಕಿಲ್ಲ' ಎಂದರು.
ಕಾಂಗ್ರೆಸ್ ಎಂದಿಗೂ ತನ್ನ ತಪ್ಪನ್ನು ಒಪ್ಪಿಕೊಳ್ಳುವಲ್ಲಿ ಹಿಂದೇಟು ಹಾಕಿಲ್ಲ ಎಂದ ಅವರು ತುರ್ತು ಪರಿಸ್ಥಿತಿಯನ್ನೂ ಸಮರ್ಥಿಸಿಕೊಂಡರು.
ಮಸೀದಿ ಹಾಗೂ ಇಸ್ಲಾಂ : ನಮಾಜಿಗಿಂತ ಜಮೀನು ಯಾರಿಗೆ ಎಂಬುದು ಮುಖ್ಯ!
ಇತ್ತೀಚೆಗಷ್ಟೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತಂತೆ ಶಿಯಾ ವಕ್ಫ್ ಬೋರ್ಡ್ ಮುಖಂಡ ವಾಸೀಮ್ ರಿಜ್ವಿ ಮಾತನಾಡಿದ್ದರು. ಬಾಬ್ರಿ ಮಸೀದಿ ಈ ದೇಶಕ್ಕೆ ಒಂದು ಕಪ್ಪುಚುಕ್ಕೆ. ಬಾಬ್ರಿ ಮಸೀದಿ ಇದ್ದ ಜಾಗದಲ್ಲಿ ಮೊದಲು ಹಿಂದು ದೇವಾಲಯವಿತ್ತು. ಅದನ್ನು ನೆಲಸಮ ಮಾಡಿ ಮಸೀದಿ ಕಟ್ಟಿದ್ದಕ್ಕೆ ಸಾಕ್ಷ್ಯಗಳಿವೆ ಎಂದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.