ಖ್ಯಾತ ನಿರ್ದೇಶಕ ಶಂಕರ್ ವಿರುದ್ಧ ಜಾಮೀನು ರಹಿತ ವಾರೆಂಟ್
ಚೆನ್ನೈ, ಜನವರಿ 31: ಇಲ್ಲಿನ ಎಗ್ಮೋರ್ ಮೆಟ್ರೋಪಾಲಿಟನ್ ಕೋರ್ಟ್ II ನಿಂದ ಖ್ಯಾತ ನಿರ್ದೇಶಕ ಶಂಕರ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ತಮಿಳು ಚಿತ್ರರಂಗದ ಜನಪ್ರಿಯ ನಿರ್ದೇಶಕ ಶಂಕರ್ ಅವರ ಮೇಲೆ ಕೃತಿಚೌರ್ಯ ಆರೋಪ ಹೊರೆಸಲಾಗಿದೆ.
2010 ರಲ್ಲಿ ಶಂಕರ್ ನಿರ್ದೇಶನದಲ್ಲಿ ತೆರೆಕಂಡ ಎಂದಿರನ್ ಅಲಿಯಾಸ್ ರೋಬೋ ಚಿತ್ರ ಸೂಪರ್ ಹಿಟ್ ಆಗಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ನಟನೆಯ ಈ ಚಿತ್ರಕ್ಕೆ ಸಂಬಂಧಿಸಿದಂತೆ ಕಥೆ ಕದ್ದ ಆರೋಪದ ಕೇಸ್ 11ನೇ ವರ್ಷಕ್ಕೆ ಕಾಲಿಟ್ಟಿದೆ.
ಪ್ರವೇಶಕ್ಕೂ ಮುನ್ನವೇ ನಿರ್ಗಮನ, ರಜನಿ ನಡೆಯಿಂದ ಯಾರಿಗೆ ಲಾಭ?
ಏನಿದು
ಪ್ರಕರಣ?:
ಆರೂರು
ತಮಿಳ್ನಾದನ್
ಎಂಬ
ವ್ಯಕ್ತಿ
ನಿರ್ದೇಶಕ
ಶಂಕರ್
ಮೇಲೆ
ಕತೆ
ಕದ್ದ
ಆರೋಪ
ಮಾಡಿದ್ದಾರೆ.
ಜಿಗುಬಾ
ಎಂಬ
ಹೆಸರಿನಲ್ಲಿ
ತಾವು
ಬರೆದ
ಕತೆಯನ್ನು
ಶಂಕರ್
ಹಾಗೆ
ಭಟ್ಟಿ
ಇಳಿಸಿದ್ದಾರೆ.
ಈ
ಬಗ್ಗೆ
ದೂರಿದರೂ
ಪ್ರಯೋಜನವಾಗಿಲ್ಲ
ಎಂದು
ಆರೋಪಿಸಿದ್ದರು.
1996
ಹಾಗೂ
2007
ರಲ್ಲಿ
ಬೇರೆ
ಹೆಸರಿನಲ್ಲಿ
ಜಿಗುಬಾ
ಕಥೆ
ತಮಿಳು
ಮ್ಯಾಗಜಿನ್ಗಳಲ್ಲಿ
ಪ್ರಕಟವಾಗಿದೆ,
1957ರ
ಕೃತಿಹಕ್ಕು
ಕಾಯ್ದೆ
ಅನ್ವಯ
ಕ್ರಮ
ಜರುಗಿಸುವಂತೆ
ಎಂದು
ಅರೂರು
ಪರ
ವಕೀಲರು
ಕೋರ್ಟಿಗೆ
ಸಾಕ್ಷ್ಯ
ಒದಗಿಸಿದ್ದರು.
ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಶಂಕರ್ ಅವರಿಗೆ ಅನೇಕ ಬಾರಿ ಸಮನ್ಸ್ ಕಳಿಸಿದ್ದರೂ ಹಾಜರಾಗದ ಕಾರಣ, ಮೆಟ್ರೋಪಾಲಿಟನ್ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದ್ದು, ವಿಚಾರಣೆಯನ್ನು ಫೆಬ್ರವರಿ 19ಕ್ಕೆ ಮುಂದೂಡಲಾಗಿದೆ. ತಮಿಳ್ನಾದನ್ ಆರೋಪನ್ನು ಅಲ್ಲಗಳೆದಿದ್ದ ಶಂಕರ್ ಅವರು ತಮ್ಮ ವಿರುದ್ಧದ ಪ್ರಕರಣವನ್ನು ವಜಾಗೊಳಿಸುವಂತೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ತಿರಸ್ಕೃತಗೊಂಡಿತ್ತು.