ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲು ಸೇರಬೇಕಿದ್ದ ಸರವಣ ಭವನ ಮಾಲೀಕನಿಗೆ ತೀವ್ರ ಹೃದಯಾಘಾತ

|
Google Oneindia Kannada News

ಚೆನ್ನೈ, ಜುಲೈ 16: ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿ ಜೈಲು ಸೇರಬೇಕಿದ್ದ ಖ್ಯಾತ ಸರವಣ ಭವನ ಹೊಟೆಲ್ ಮಾಲೀಕ ಪಿ.ರಾಜಗೋಪಾಲ್‌ಗೆ ನಿನ್ನೆ ತೀವೃ ಹೃದಯಾಘಾತವಾಗಿದೆ.

ಸರವಣ ಭವನ ರಾಜ್ ಗೋಪಾಲ್ ಗೆಲುವಿನ ದಿನಗಳಿಂದ ಜೈಲಿನ ಹಾದಿ ತನಕಸರವಣ ಭವನ ರಾಜ್ ಗೋಪಾಲ್ ಗೆಲುವಿನ ದಿನಗಳಿಂದ ಜೈಲಿನ ಹಾದಿ ತನಕ

ತನ್ನ ಸಂಸ್ಥೆಯ ಉದ್ಯೋಗಿಯ ಮಗಳ ಗಂಡನನ್ನು 2001 ರಲ್ಲಿ ಕೊಲೆ ಮಾಡಿದ ಪ್ರಕರಣದಲ್ಲಿ ಪಿ.ರಾಜಗೋಪಾಲ್ ಅಪರಾಧಿಯೆಂದು ನ್ಯಾಯಾಲಯವು ತೀರ್ಪು ನೀಡಿತ್ತು, ಆದರೆ ಪಿ.ರಾಜಗೋಪಾಲ್ ಪೊಲೀಸರಿಗೆ ಶರಣಾಗಿರಲಿಲ್ಲ.

3 ದಿನದಲ್ಲಿ ಆಮರಣಾಂತ ಜೈಲು ವಾಸಕ್ಕೆ ತೆರಳಲಿರುವ ಸರವಣ ಭವನ ಮಾಲೀಕ 3 ದಿನದಲ್ಲಿ ಆಮರಣಾಂತ ಜೈಲು ವಾಸಕ್ಕೆ ತೆರಳಲಿರುವ ಸರವಣ ಭವನ ಮಾಲೀಕ

ಜುಲೈ 8 ರಂದು ಪಿ.ರಾಜಗೋಪಾಲ್ ಅವರು ಮ್ಯಾಜಿಸ್ಟ್ರೇಟ್‌ರ ಮುಂದೆ ಶರಣಾಗಿದ್ದರು, ಆದರೆ ಅಂದೇ ಅನಾರೋಗ್ಯದ ಕಾರಣ ನೀಡಿ ಆಸ್ಪತ್ರೆ ಸೇರಿದ್ದರು. ನ್ಯಾಯಾಲಯಕ್ಕೆ ಕೂಡ ಅವರು ಆಂಬುಲೆನ್ಸ್‌ನಲ್ಲಿಯೇ ಬಂದಿದ್ದರು.

 Murder case convicted P Rajagopal suffer heart attack

ಪಿ.ರಾಜಗೋಪಾಲ್ ಅವರ ವಕೀಲರು ಹೇಳುವಂತೆ, ಪಿ.ರಾಜಗೋಪಾಲ್ ಅವರಿಗೆ ಕಳೆದ ಶನಿವಾರ ತೀವ್ರ ಹೃದಯಾಘಾತವಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ. ಅವರಿಗೆ ಈಗಾಗಲೇ ಕಿಡ್ನಿ ಮತ್ತು ಡಯಾಬಿಟಿಸ್ ಸಮಸ್ಯೆ ಇದ್ದು, ಕಣ್ಣುಗಳು ಮಂಜಾಗಿವೆ. ಪಿ.ರಾಜಗೋಪಾಲ್ ಅವರು ಪ್ರಸ್ತುತ ಸ್ಟಾನ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

English summary
Murder case convicted P Rajagopal suffers a heart attack. He sentenced life imprisonment in a murder case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X