ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಗೋವು ರಕ್ಷಿಸುತ್ತಾರಾ, ದೇಶ ರಕ್ಷಿಸುತ್ತಾರಾ? ಎಐಎಡಿಎಂಕೆ ಪ್ರಶ್ನೆ

ಕೇಂದ್ರ ಸರ್ಕಾರದ ಗೋ ಹತ್ಯೆ ನಿಷೇಧ ಕಾನೂನಿನ ಬಗ್ಗೆ ಮುಖ್ಯಮಂತ್ರಿ ಪಳನಿ ಸ್ವಾಮಿ ಹಾಗೂ ಮಂತ್ರಿ ಮಂಡಲ ಮೌನವಾಗಿದ್ದರೂ, ಕಾನೂನನ್ನು ತನ್ನ ಮುಖವಾಣಿಯಲ್ಲಿ ಟೀಕಿಸಿರುವ ಎಐಎಡಿಎಂಕೆ.

|
Google Oneindia Kannada News

ಚೆನ್ನೈ, ಜೂನ್ 1: ಪ್ರಧಾನಿ ಮೋದಿಯವರು ದೇಶವನ್ನು ರಕ್ಷಿಸಲು ನಿಂತಿದ್ದಾರಾ ಅಥವಾ ಗೋವುಗಳನ್ನು ರಕ್ಷಿಸಲು ನಿಂತಿದ್ದಾರಾ ? ಇಂಥದ್ದೊಂದು ಪ್ರಶ್ನೆಯನ್ನು ಎಐಎಡಿಎಂಕೆಯ ಮುಖವಾಣಿಯಾದ ಡಾ. ನಮಧು ಎಂಜಿಆರ್ ನಲ್ಲಿ ಪ್ರಶ್ನಿಸಲಾಗಿದೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ್ದ ಗೋ ಹತ್ಯೆ ನಿಷೇಧದ ಕಾನೂನಿಗೆ ಸಂಬಂಧಿಸಿದಂತೆ ಈ ವಾರ ಬಿಡುಗಡೆಗೊಂಡಿರುವ ಮುಖವಾಣಿಯ ಸಂಚಿಕೆಯಲ್ಲಿ ಮೋದಿ ಸರ್ಕಾರವನ್ನು ಈ ರೀತಿಯಾಗಿ ಛೇಡಿಸಿದೆ.

Prime Minister Narendra Modi

ಆದರೆ, ಕೇಂದ್ರ ಸರ್ಕಾರದ ಕಾನೂನು ಜಾರಿಗೊಂಡ ದಿನದಿಂದಲೂ ಬಿಜೆಪಿಯ ವಿರೋಧ ಪಕ್ಷಗಳು ಎಲ್ಲಿಲ್ಲಿ ಅಧಿಕಾರದಲ್ಲಿವೆಯೋ ಅಲ್ಲೆಲ್ಲಾ ಗೋ ಹತ್ಯೆ ನಿಷೇಧ ಕಾನೂನಿನ ವಿರುದ್ಧ ಸಾಕಷ್ಟು ಪ್ರತಿಭಟನೆಗಳಾಗಿವೆ. ಆಯಾ ರಾಜ್ಯ ಸರ್ಕಾರಗಳು ನೇರವಾಗಿ ವಾಗ್ದಾಳಿ ನಡೆಸಿವೆ.

ಇಷ್ಟೆಲ್ಲಾ ಆಗಿದ್ದರೂ, ತಮಿಳುನಾಡಿನ ಮುಖ್ಯಮಂತ್ರಿ ಪಳನಿ ಸ್ವಾಮಿಯಾಗಲೀ, ಅವರ ಮಂತ್ರಿ ಮಂಡಲದ ಯಾವುದೇ ಸಚಿವರಾಗಲೀ ಒಂದೇ ಒಂದು ನಕಾರಾತ್ಮಕ ಮಾತನ್ನೂ ಆಡಿಲ್ಲ.

ಆದರೆ, ಎಐಎಡಿಎಂಕೆಯ ಮುಖವಾಣಿಯಲ್ಲಿ ಮಾತ್ರ ಮೋದಿ ಸರ್ಕಾರದ ನಡೆಯನ್ನು ಟೀಕಿಸಲಾಗಿದೆ.

English summary
Ruling AIADMK's mouthpiece Dr Namadhu MGR on Thursday hit out at the Centre over its recent ban on cattle sale for slaughter at animal markets, days after Chief Minister K Palanisamy said that an official comment could not be given without knowing the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X