ಲಕ್ಷ ಲಕ್ಷ ರೂಪಾಯಿ ಸುರಿದು ಸಿದ್ಧಪಡಿಸಿದ ಹಡಗುಗಳಿಗೆ ಗುಜರಿ ವಸ್ತುವಿನ ಬೆಲೆ!
ಚೆನ್ನೈ, ಮೇ 12: ದೇಶದ ನೌಕಾಪಡೆಯು ಈ ಹಿಂದೆ ವಶಪಡಿಸಿಕೊಂಡ ನಂತರ ಹರಾಜಿನಲ್ಲಿದ್ದ ನೂರಕ್ಕೂ ಹೆಚ್ಚು ತಳದ ಟ್ರಾಲರ್ಗಳನ್ನು ಅವು ಬಂದ ಸ್ಥಳಕ್ಕೆ ಮರಳಿ ರವಾನೆ ಮಾಡಲು ಸಿದ್ಧವಾಗಿವೆ.
ಕಳೆದ ಫೆಬ್ರವರಿಯಲ್ಲಿ ಸುಮಾರು 217 ಭಾರತೀಯ ತಳದ ಟ್ರಾಲರ್ಗಳನ್ನು ಹರಾಜು ಮಾಡಲಾಗಿತ್ತು. ಅವುಗಳಲ್ಲಿ 130 ಟ್ರಾಲರ್ಗಳು ಸಮುದ್ರದಲ್ಲಿ ದೀರ್ಘ ಕಾಲದವರೆಗೂ ನಿಂತಿರುವ ಹಿನ್ನೆಲೆ ಅವುಗಳು ದುರಸ್ಥಿ ಮಾಡುವ ಸ್ಥಿತಿಯಲ್ಲಿಲ್ಲ. ಆದ್ದರಿಂದ, ಅವುಗಳನ್ನು ಚಿಂದಿ ಲೋಹ ಮತ್ತು ಮರದ ದಿನ್ನೆಯಾಗಿ ವಿಲೇವಾರಿ ಮಾಡಲಾಗುತ್ತಿದೆ.
ಹರಾಜಾದ ಟ್ರಾಲರ್ಗಳನ್ನು ಹೊರತೆಗೆಯುವ ಪ್ರಕ್ರಿಯೆಗಾಗಿ ಜಾಫ್ನಾದಲ್ಲಿನ ಬೊಮ್ಮೈವೇಲಿಯಲ್ಲಿನ ಮೈದಾನದ ಕಾರ್ಯಾಗಾರಕ್ಕೆ ತರಲಾಯಿತು. ಅಡುಗೆ ಅನಿಲದ ಕೊರತೆಯಿಂದಾಗಿ, ದೋಣಿಗಳಿಂದ ಮರದ ಬಾರ್ಗಳು ಮತ್ತು ಸ್ಲ್ಯಾಪ್ಗಳನ್ನು ಹೊರತೆಗೆಯಲಾಗಿದ್ದು, ಉರುವಲು ಎಂದು ಮಾರಾಟ ಮಾಡಲಾಯಿತು. ಜಾಫ್ನಾದಲ್ಲಿ ಒಂದು ಕಿಲೋ ಉರುವಲು ಅನ್ನು ಪ್ರಸ್ತುತ 15 ರಿಂದ 20 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಇನ್ನು ಲಂಗರಿಳಿಸುವಿಕೆ ಸರಪಳಿಗಳಂತಹ ಲೋಹದ ಭಾಗಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಯಿತು.
ಮೋದಿ ತವರಲ್ಲಿ ದಯಾಮರಣ ಬಯಸಿದ ಮುಸ್ಲಿಂ ಮೀನುಗಾರರು
ಭಾರತೀಯ ಟ್ರಾಲರ್ಗಳ ಬಗ್ಗೆ ಕೇಳಿದಾಗ ಆಶ್ಚರ್ಯ
ತಮಿಳುನಾಡಿನ ನಾಗಪಟ್ಟಣಂನ ಮೀನುಗಾರ ಸ್ಟಾನಿಸ್ಲಾಸ್ ಕೋದಂಡರಾಮನ್ ಅವರಿಗೆ ಸೇರಿದ ದೋಣಿಯು ಫೆಬ್ರವರಿಯಲ್ಲಿ ಹರಾಜಾಗಿತ್ತು. "ಭಾರತೀಯರು ಹೂಡಿಕೆ ಮಾಡಿರುವ ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಾರಿಕೆ ಹಡಗುಗಳು ಏನಾಗುತ್ತಿವೆ ಎಂಬುದನ್ನು ಕೇಳುವುದಕ್ಕೂ ಅಚ್ಚರಿ ಆಗುತ್ತದೆ. ಭಾರತದಲ್ಲಿ ಟ್ರಾಲರ್ಗಳ ತಯಾರಿಕೆಗೆ 40 ರಿಂದ 70 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಲಾಗುವುದು. ಅದು ಟ್ರಾಲರ್ಗಳ ಸಾಮರ್ಥ್ಯ ಮತ್ತು ಆಧಾರದ ಮೇಲೆ ನಿರ್ಧಾರವಾಗುತ್ತದೆ," ಎಂದು ಕೋದಂಡರಾಮನ್ ತಿಳಿಸಿದರು.
ಗುಜರಿ ವಸ್ತುಗಳ ಬೆಲೆಯಲ್ಲಿ ಟ್ರಾಲರ್ ಮಾರಾಟ
"ನಾವು ಈ ಹಡಗುಗಳ ಮೇಲೆ ಲಕ್ಷ ಲಕ್ಷ ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದೇವೆ. ನಮ್ಮಲ್ಲಿ ಯೋಗ್ಯವಾದ ಟ್ರಾಲರ್ ಅನ್ನು ಪಡೆದುಕೊಳ್ಳುವುದಕ್ಕಾಗಿ ಬ್ಯಾಂಕ್ಗಳಿಂದ ಸಾಲವನ್ನು ಪಡೆದಿದ್ದೇವೆ. ಆದರೆ ಇಂದು ಅಂಥ ಟ್ರಾಲರ್ಗಳನ್ನು ಗುಜರಿ ಮೆಟಲ್ನಂತೆ ಮಾರಾಟ ಮಾಡುವುದನ್ನು ನೋಡಿದರೆ ಬಹಳ ದುಃಖವಾಗುತ್ತದೆ," ಎಂದು ಸ್ಟಾನಿಸ್ಲಾಸ್ ಹೇಳಿದರು.
ಅಧಿಕಾರಿಗಳ ವಿಳಂಬ ನೀತಿಗೆ ಮೀನುಗಾರರ ಅಸಮಾಧಾನ
"ಸಮುದ್ರದಲ್ಲಿ ವರ್ಷಗಳ ಹಿಂದೆಯೇ ಸಾಕಷ್ಟು ಹಡಗುಗಳು ನಾಶಗೊಂಡಿದ್ದವು. ಅವುಗಳ ಹರಾಜು ಪ್ರಕ್ರಿಯೆಯನ್ನು ಮೊದಲೇ ಮಾಡಿದ್ದರೆ, ಅವುಗಳಿಗೆ ದಂಡವನ್ನು ಪಾವತಿಸಿ ಪಡೆದುಕೊಳ್ಳಲು ನಾವು ಸಿದ್ಧರಿದ್ದೆವು. ಆದರೆ ಅಧಿಕಾರಿಗಳು ತಡವಾಗಿ ಪ್ರಕ್ರಿಯೆ ಆರಂಭಿಸಿದ್ದರಿಂದ ಆ ದೋಣಿಗಳನ್ನು ಹಿಂಪಡೆಯುವುದಕ್ಕಾ ಸಾಧ್ಯವಾಗುತ್ತಿಲ್ಲ," ಎಂದಿದ್ದಾರೆ.
ಈ ಹಿಂದೆ ಅಧಿಕಾರಿಗಳು ವಶಕ್ಕೆ ಪಡೆದಿದ್ದ ಹಡಗುಗಳು
ಸುದೀರ್ಘ ಅವಧಿಯಲ್ಲಿ ಅನೇಕ ಹಡಗುಗಳು ನಾಶವಾಗಿವೆ. ಆದರೆ ಅಧಿಕಾರಿಗಳು ಆ ಪ್ರಕರಣಗಳನ್ನು ಮೊದಲೇ ಪ್ರಕ್ರಿಯೆಗೊಳಿಸಬಹುದಿತ್ತು ಆದ್ದರಿಂದ ನಾವು ದಂಡವನ್ನು ಪಾವತಿಸಿದ ನಂತರ ಆ ದೋಣಿಗಳನ್ನು ಹಿಂಪಡೆಯಲು ಸಾಧ್ಯವಾಗುತ್ತಿತ್ತು. ಆದರೆ ಅದು ತುಂಬಾ ತಡವಾಗಿತ್ತು, "ಎಂದು ಅವರು ಹೇಳಿದರು. ಕಳೆದ ಫೆಬ್ರವರಿಯಲ್ಲಿ, ಕಾನೂನು ಪ್ರಕ್ರಿಯೆಗಳು ಮುಕ್ತಾಯಗೊಂಡ ನಂತರ ಮೀನುಗಾರಿಕೆ ಇಲಾಖೆಯು ಭಾರತೀಯ ತಳದ ಟ್ರಾಲರ್ಗಳನ್ನು ಸಾರ್ವಜನಿಕ ಹರಾಜಿನಲ್ಲಿ ವಿಲೇವಾರಿ ಮಾಡಿತು. ಶ್ರೀಲಂಕಾದ ನೀರಿನಲ್ಲಿ ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದಕ್ಕಾಗಿ ಅಧಿಕಾರಿಗಳು ಅವುಗಳನ್ನು ವಶಪಡಿಸಿಕೊಂಡಿದ್ದರು.
Recommended Video