ಭಾಷಾ ಹೋರಾಟ ಅತ್ಯಂತ ಉಗ್ರವಾಗಿರುತ್ತದೆ: ಶಾ ಗೆ ಕಮಲ್ ಹಾಸನ್ ಎಚ್ಚರಿಕೆ
Recommended Video
ಚೆನ್ನೈ, ಸೆಪ್ಟೆಂಬರ್ 16: 'ವಿವಿಧತೆಯಲ್ಲಿ ಏಕತೆ ಎಂಬ ಪ್ರಮಾಣವನ್ನು ನಾವು ಭಾರತ ಸ್ವಾತಂತ್ರ್ಯ ದೇಶವಾದಾಗ ಮಾಡಿದ್ದೆವು, ಅದನ್ನು ಯಾವ ಶಾ, ಸುಲ್ತಾನನೂ ಬದಲಾಯಿಸಲು ಸಾಧ್ಯವಿಲ್ಲ' ಎಂದು ನಟ, ಮಕ್ಕಳ ನೀತಿ ಮೈಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಹೇಳಿದ್ದಾರೆ.
'ಒಂದು ದೇಶ, ಒಂದು ಭಾಷೆ' ಎಂಬ ಅಮಿತ್ ಶಾ ಹೇಳಿಕೆ ವಿರುದ್ಧ ಪ್ರತಿಭಟನಾ ರೂಪಕವಾಗಿ ಇಂದು ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ಕಮಲ್ ಹಾಸನ್, ಹಿಂದಿ ಹೇರಿಕೆಯನ್ನು ಕಠುವಾಗಿ ಖಂಡಿಸಿದ್ದಾರೆ.
Now you are constrained to prove to us that India will continue to be a free country.
— Kamal Haasan (@ikamalhaasan) September 16, 2019
You must consult the people before you make a new law or a new scheme. pic.twitter.com/u0De38bzk0
ಜಲ್ಲಿಕಟ್ಟು ಹೋರಾಟ ಒಂದು ಉದಾಹರಣೆಯಷ್ಟು, ಭಾಷೆಯ ವಿಷಯಕ್ಕೆ ಬಂದರೆ ನಮ್ಮ ಹೋರಾಟ ಅದಕ್ಕಿಂತಲೂ ಉಗ್ರವಾಗಿರುತ್ತದೆ ಎಂದು ಕೇಂದ್ರಕ್ಕೆ ಎಚ್ಚರಿಕೆಯನ್ನು ಕಮಲ್ ಹಾಸನ್ ನೀಡಿದ್ದಾರೆ.
ನಾವು ಎಲ್ಲ ಭಾಷೆಗಳನ್ನೂ ಪ್ರೀತಿಸುವವರು, ಆದರೆ ನಮ್ಮ ಮಾತೃಭಾಷೆ ನಮ್ಮದೇ ಅದಕ್ಕೆ ಹೆಚ್ಚಿನ ಗೌರವ ಯಾಗಾವಲೂ ಇರುತ್ತದೆ ಎಂದ ಅವರು, ಬಂಗಾಳಿ ಭಾಷೆಯ ರಾಷ್ಟ್ರಗೀತೆಯನ್ನು ಎಲ್ಲರೂ ಗೌರವದಿಂದ ಹಾಡುತ್ತಿದ್ದೇವೆ, ಮತ್ತು ಹಾಡುತ್ತೇವೆ ಕೂಡ, ಇದಕ್ಕೆ ಕಾರಣ ರಾಷ್ಟ್ರಗೀತೆ ಬರೆದ ಕವಿ, ದೇಶದ ಎಲ್ಲ ಭಾಷೆಗೆ ಪ್ರದೇಶಕ್ಕೆ ಸಮಾನ ಗೌರವ ಕೊಡುತ್ತಿದ್ದರು ಹಾಗಾಗಿ ಎಂದು ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಹಿಂದಿ ಹೇರಿಕೆ: ಬೆಂಕಿಗೆ ತುಪ್ಪ ಸುರಿದ 'ನಮ್ಮ ಕನ್ನಡ'ದ ಕೇಂದ್ರ ಸಚಿವ
ಹಿಂದಿ ಹೇರಿಕೆ ವಿರುದ್ಧ ದಕ್ಷಿಣದ ರಾಜ್ಯಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ಸ್ವತಃ ಯಡಿಯೂರಪ್ಪ ಸಹ ಹಿಂದಿ ಹೇರಿಕೆ ವಿರುದ್ಧ ದನಿ ಎತ್ತಿದ್ದಾರೆ.