ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಪ್ರಣಾಳಿಕೆಯಲ್ಲಿನ 'ನದಿ ಜೋಡಣೆ' ಅಂಶ ಮೆಚ್ಚಿದ ರಜನಿ

|
Google Oneindia Kannada News

ಚೆನ್ನೈ, ಏಪ್ರಿಲ್ 10: ಈ ಬಾರಿಯ ಲೋಕಸಭೆ ಚುನಾವಣೆ ವೇಳೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಯಾವ ಪಕ್ಷದ ಪರ ನಿಲ್ಲಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ, ಯಾರ ಪರವೂ ನಿಲ್ಲದೆ, ತಟಸ್ಥವಾಗಿರುವ ರಜನಿ ಅವರು ರಾಜಕೀಯ ಸಂಘಟನೆ ಬಗ್ಗೆ ಘೋಷಿಸಿದರೂ ಸಕ್ರಿಯವಾಗಿಲ್ಲ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆದರೆ, ಬಹುದಿನಗಳ ನಂತರ ಮತ್ತೊಮ್ಮೆ ಬಿಜೆಪಿ ಪರ ದನಿಯೆತ್ತಿದ್ದಾರೆ. ಬಿಜೆಪಿ ಸಂಕಲ್ಪ ಪತ್ರ ಹೆಸರಿನ ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಮೆಚ್ಚಿರುವುದಾಗಿ ಹೇಳಿದ್ದಾರೆ. ಅದರಲ್ಲೂ ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನ ನದಿ ಜೋಡಣೆ ಯೋಜನೆ ವಿಚಾರಕ್ಕೆ ರಜನಿ ಕಾಂತ್ ಅವರು ಸಹಮತ ವ್ಯಕ್ತಪಡಿಸಿದ್ದಾರೆ.

 ನದಿ ಜೋಡಣೆ ಮಾಡುವುದು ಅಷ್ಟು ಸುಲಭವಲ್ಲ : ದೇವೇಗೌಡ ನದಿ ಜೋಡಣೆ ಮಾಡುವುದು ಅಷ್ಟು ಸುಲಭವಲ್ಲ : ದೇವೇಗೌಡ

'ನಾನು ಯಾವುದೇ ಪಕ್ಷವನ್ನು ಬೆಂಬಲಿಸುತ್ತಿಲ್ಲ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನದಿ ಜೋಡಣೆ ಬಗ್ಗೆ ಪ್ರಸ್ತಾಪಿಸಿದೆ. ಇದು ಅಗತ್ಯವಾಗಿದ್ದು, ಅಸಾಧ್ಯವಾದುದೇನು ಅಲ್ಲ, ಇದರಿಂದ ಅಂತಾರಾಜ್ಯ ನದಿ ನೀರು ಹಂಚಿಕೆ ಸಮಸ್ಯೆಗೂ ಪರಿಹಾರ ಸಿಗಲಿದೆ' ಎಂದು ರಜನಿಕಾಂತ್ ಹೇಳಿದ್ದಾರೆ.

Its Welcome: Rajinikanth On BJPs Poll Promise Of Interlinking Rivers

2017ರಲ್ಲಿ ರಜನಿಕಾಂತ್ ಅವರು ರೈತ ಸಮೂಹವನ್ನು ಭೇಟಿ ಮಾಡಿ, ನದಿ ಜೋಡಣೆ ಬಗ್ಗೆ ಚರ್ಚಿಸಿದ್ದರು. ವಾಜಪೇಯಿ ಅವರ 'ಭಗೀರಥ ಯೋಜನೆ' ಇದಕ್ಕೆ ಪರಿಹಾರ ಎಂದು ನಿರ್ಧರಿಸಲಾಗಿತ್ತು. ಇದಕ್ಕಾಗಿ 1 ಕೋಟಿ ರು ದೇಣಿಗೆ ನೀಡಲು ಮುಂದಾದರು.

ವಾಜಪೇಯಿ ಕನಸು ನನಸಾಗಲು ಹೊರಟ ನರೇಂದ್ರ ಮೋದಿವಾಜಪೇಯಿ ಕನಸು ನನಸಾಗಲು ಹೊರಟ ನರೇಂದ್ರ ಮೋದಿ

ರಾಜಕೀಯ ಸಂಘಟನೆ ಆರಂಭಿಸಿದ ರಜನಿಕಾಂತ್ ಅವರು ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನೀರಿಕ್ಷೆಯಿದೆ.

English summary
Superstar Rajinikanth on Tuesday welcomed the BJP's poll promise of implementing river inter-linking and said the initiative would address the issue of poverty as it would lead to upliftment of farmers and employment for crores of people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X