ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನ ಏಳು ಕಡೆಗಳಲ್ಲಿ ಆದಾಯ ತೆರಿಗೆ ದಾಳಿ

|
Google Oneindia Kannada News

ಚೆನ್ನೈ, ಏಪ್ರಿಲ್ 12: ತಮಿಳುನಾಡಿನಲ್ಲಿ ಚುನಾವಣೆಗೆ ಇನ್ನೊಂದು ವಾರ ಬಾಕಿ ಇರುವಾಗ(ಏಪ್ರಿಲ್ 18) ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಚೆನ್ನೈನ 3 ಕಡೆ ಮತ್ತು ನಮಕ್ಕಳ್ ನ 4 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಪಿಎಸ್ಕೆ ಇಂಜಿನಿಯರಿಂಗ್ ಕನ್ಸ್ಟ್ರಕ್ಷನ್ ಕಂಪನಿ ಗೆ ಸಂಬಮಧಿಸಿದ ಕೆಲವು ಸ್ಥಳಗಳಲ್ಲಿ ಅಕ್ರಮ ಹಣ ಸಂಗ್ರಹವಾಗಿರುವ ಕುರಿತು ಖಚಿತ ಮಾಹಿತಿ ಪಡೆದ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಚೆನ್ನೈನ ಆದಾಯ ತೆರಿಗೆ ನಿರ್ದೇಶನಾಲಯಕ್ಕೆ ಅಕ್ರಮ ಹಣ ಸಂಗ್ರಹದ ಕುರಿತಂತೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಚುನಾವಣೆಗಾಗಿ ಹಣ ಹಂಚಿಕೆಯಾಗುತ್ತಿರುವ ದೂರೂ ಇದ್ದಿದ್ದರಿಂದ ತಕ್ಷಣವೇ ದಾಳಿ ನಡೆಸಲಾಗಿತ್ತು. ಲೋಕಸಭೆ ಚುನಾವಣೆ ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಏಪ್ರಿಲ್ 18 ರಂದು ನಡೆಯಲಿದೆ.

ಎಲ್ಲಿದ್ದೀಯಪ್ಪ ಬಾಲಕೃಷ್ಣ? ಐಟಿ ಮುಖ್ಯಸ್ಥರ ಮೇಲೆ ಸಿಎಂ ಏಕವಚನದ ವಾಗ್ದಾಳಿಎಲ್ಲಿದ್ದೀಯಪ್ಪ ಬಾಲಕೃಷ್ಣ? ಐಟಿ ಮುಖ್ಯಸ್ಥರ ಮೇಲೆ ಸಿಎಂ ಏಕವಚನದ ವಾಗ್ದಾಳಿ

ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಹಣ ಸಾಗಣೆಯಾಗುತ್ತಿರುವ ಕುರಿತು ಖಚಿತ ಮಾಹಿತಿ ಲಭ್ಯವಾದ ಕಾರಣ ದಾಳಿ ನಡೆಸಲಾಗಿದೆ.

IT raid in Tamil Nadus Chennai and Namakkal

ರಿಜ್ವಾನ್ ಅರ್ಷದ್ ಗೆ ಐಟಿ ಶಾಕ್, ಆಪ್ತರ ಮನೆ ಮೇಲೆ ದಾಳಿರಿಜ್ವಾನ್ ಅರ್ಷದ್ ಗೆ ಐಟಿ ಶಾಕ್, ಆಪ್ತರ ಮನೆ ಮೇಲೆ ದಾಳಿ

ಇತ್ತೀಚೆಗಷ್ಟೇ ಕರ್ನಾತಕದ ಹಲವು ರಾಜಕಾರಣಿಗಳ ಆಪ್ತರ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಚುನಾವಣೆ ಹತ್ತಿರವಾಗುತ್ತಿರುವುದರಿಂದ ಕೇಂದ್ರ ಸರ್ಕಾರವೇ ಬೇಕೆಂದು ಈ ರೀತಿ ಮಾಡಿಸುತ್ತಿದೆ ಎಂದು ಕಾಂಗ್ರೆಸ್ ಮತ್ತು ಜೆಡಿ ಎಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

English summary
Based on information received about unaccounted cash in Chennai and Namakkal, Tamil Nadu Income Tax Raid took place in 7 different places.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X