ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವತಂತ್ರ ಭಾರತದ ಮೊತ್ತಮೊದಲ ಉಗ್ರ ಒಬ್ಬ ಹಿಂದು: ಕಮಲ್ ಹಾಸನ್

|
Google Oneindia Kannada News

ಚೆನ್ನೈ, ಮೇ 13: ಸ್ವತಂತ್ರ ಭಾರತದ ಮೊತ್ತಮೊದಲ ಉಗ್ರ ಒಬ್ಬ ಹಿಂದು ಎಂದು ನಾತೂರಾಂ ಗೋಡ್ಸೆ ಅವರನ್ನು ಗುರಿಯಾಗಿಸಿ ನಟ, ರಾಜಕಾರಣಿ ಕಮಲ್ ಹಾಸನ್ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ತಮಿಳುನಾಡಿನ ಅರವಕುರಿಚಿಯಲ್ಲಿ ಮೇ 19 ರಂದು ನಡೆಯಲಿರುವ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್, "ನಾನೊಬ್ಬ ಹೆಮ್ಮೆಯ ಭಾರತೀಯ" ಎಂದರು.

ಲೋಕಸಭೆ ಚುನಾವಣೆ: ಕಮಲ ಹಾಸನ್‌ಗೆ ತಲೈವಾ ಬೆಂಬಲ?ಲೋಕಸಭೆ ಚುನಾವಣೆ: ಕಮಲ ಹಾಸನ್‌ಗೆ ತಲೈವಾ ಬೆಂಬಲ?

"ಇದು ಮುಸ್ಲಿಂ ಜನರೇ ಹೆಚ್ಚಿರುವ ಪ್ರದೇಶ ಎಂಬ ಕಾರಣಕ್ಕಾಗಿ ನಾನು ಈ ಮಾತನ್ನು ಹೇಳುತ್ತಿಲ್ಲ. ಬದಲಿಗೆ ನಾನು ಗಾಂಧಿಜೀ ಅವರ ವಿಗ್ರಹದ ಮುಂದೆ ನಿಂತಿರುವ ಕಾರಣಕ್ಕೆ ಹೀಗೆ ಹೇಳುತ್ತಿದ್ದೇನೆ. ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದು, ಅವನ ಹೆಸರು ನಾಥುರಾಮ್ ಗೋಡ್ಸೆ. ಅಲ್ಲಿಂದ ಭಯೋತ್ಪಾದನೆ ಶುರುವಾಯಿತು" ಎಂದು ಕಮಲ್ ಹಾಸನ್ ಹೇಳಿದ್ದಾರೆ.

Indias first terrorist was a Hindu, says Kamal Haasan.

"ನಾನು ರಾಜಕೀಯಕ್ಕೆ ಬಂದಿದ್ದೇ 1948 ರಲ್ಲಿ ನಡೆದ ಗಾಂಧಿ ಹತ್ಯೆಗೆ ಕಾರಣ ತಿಳಿಯಲು" ಎಂದು ಅವರು ಹೇಳಿದರು.

"ಉತ್ತಮ ಭಾರತೀಯರಿಗೆ ಸಮಾನತೆ ಬೇಕಾಗಿದೆ. ಮತ್ತು ರಾಷ್ಟ್ರಧ್ವಜದಲ್ಲಿರುವ ಮೂರು ಬಣ್ಣದ ಧ್ಯೇಯಗಳು ಈಡೇರಬೇಕಿದೆ. ನಾನು ಅದಕ್ಕಾಗಿ ಹೋರಾಡುತ್ತೇನೆ" ಎಂದು ಹಾಸನ್ ಹೇಳಿದರು.

ಕಮಲ್ ಪಕ್ಷದ ಪ್ರಣಾಳಿಕೆ: ಸ್ಲಂ ಫ್ರೀ, ಟೋಲ್ ಫ್ರೀ ತಮಿಳುನಾಡುಕಮಲ್ ಪಕ್ಷದ ಪ್ರಣಾಳಿಕೆ: ಸ್ಲಂ ಫ್ರೀ, ಟೋಲ್ ಫ್ರೀ ತಮಿಳುನಾಡು

ತಮಿಳುನಾಡಿನಲ್ಲಿ ಉಪಚುನಾವಣೆ ಎದುರಿಸಲಿರುವ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ಅರವಕುರಿಚಿಯೂ ಒಂದಾಗಿದ್ದು ಇಲ್ಲಿ, ಎಸ್ ಮೋಹನ್ ರಾಜ್ ಎಂಬುವವರನ್ನು ಎಂಎನ್ ಎಂ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಫಲಿತಾಂಶ ಮೇ 23 ರಂದು ಹೊರಬೀಳಲಿದೆ.

English summary
Makkal Needhi Maiyam (MNM) founder and actor Kamal Haasan said, India's first terrorist was a Hindu, His name is Nathuram Godse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X