ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಿ ಮಿನರಲ್ಸ್‌ಗೆ ಐಟಿ ಶಾಕ್: ನೂರಕ್ಕೂ ಹೆಚ್ಚು ಕಚೇರಿಗಳ ಮೇಲೆ ದಾಳಿ

|
Google Oneindia Kannada News

ಚೆನ್ನೈ, ಅಕ್ಟೋಬರ್ 25: ಅಪರೂಪದ ಭೂಖನಿಜಗಳು ಮತ್ತು ಗಾರ್ನೆಟ್‌ಗಳ ದೇಶದ ಅತಿ ದೊಡ್ಡ ರಫ್ತುದಾರ ಕಂಪೆನಿಗಳಲ್ಲಿ ಒಂದಾದ ವಿವಿ ಮಿನರಲ್ಸ್‌ಗೆ ಸೇರಿದ ನೂರಕ್ಕೂ ಅಧಿಕ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಗುರುವಾರ ದಾಳಿ ನಡೆಸಿದೆ.

ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿನ ವಿವಿ ಮಿನರಲ್ಸ್‌ನ ನೂರಾರು ಕಚೇರಿಗಳಲ್ಲದೆ, ಇನ್ನೂ ನಾಲ್ಕು ಇತರೆ ಸಂಸ್ಥೆಗಳ ಮೇಲೆಯೂ ಐಟಿ ದಾಳಿ ನಡೆದಿದೆ.

ತಮಿಳುನಾಡಿನ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಲಿರುವ 18 ಶಾಸಕರ ಅನರ್ಹತೆ ಪ್ರಕರಣದ ತೀರ್ಪಿನ ನಿರೀಕ್ಷೆಯಲ್ಲಿರುವಾಗಲೇ ಆದಾಯ ತೆರಿಗೆ ಅಧಿಕಾರಿಗಳ ಈ ದಾಳಿ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.

ವಿದೇಶದಲ್ಲಿ ಕಾನೂನುಬಾಹಿರ ಆಸ್ತಿ ಮಾಡಿದ ಭಾರತೀಯರ ಮೇಲೆ ಐಟಿ ಕಣ್ಣುವಿದೇಶದಲ್ಲಿ ಕಾನೂನುಬಾಹಿರ ಆಸ್ತಿ ಮಾಡಿದ ಭಾರತೀಯರ ಮೇಲೆ ಐಟಿ ಕಣ್ಣು

ವಿವಿ ಮಿನರಲ್ಸ್‌ನ ಮುಖ್ಯಸ್ಥ ಮತ್ತು ಉದ್ಯಮಿ ವೈಕುಂಠರಾಜನ್ ಅವರ ಚೆನ್ನೈ ನಿವಾಸದ ಮೇಲೆಯೂ ಪರಿಶೀಲನೆ ನಡೆಸಲಾಗಿದೆ.

ತಮಿಳುನಾಡಿನ ಕೊಯಮತ್ತೂರು, ತಿರುನೆಲ್ವೇಲಿ, ಕರೈಕಲ್, ತೂತುಕುಡಿ ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣ ಮತ್ತು ಶ್ರೀಕಾಕುಳಂಗಳಲ್ಲಿ ಸುಮಾರು 400 ಆದಾಯ ತೆರಿಗೆ ಅಧಿಕಾರಿಗಳು ಏಕಕಾಲದಲ್ಲಿ ಈ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿವಿಧ ವಲಯಗಳಿಗೆ ಹೂಡಿಕೆ

ವಿವಿಧ ವಲಯಗಳಿಗೆ ಹೂಡಿಕೆ

ಮರಳು ಗಣಿಗಾರಿಕೆ ನಡೆಸಿ ರಹಸ್ಯವಾಗಿ ರಫ್ತು ಮಾಡುವ ಮೂಲಕ ಅಕ್ರಮವಾಗಿ ಲಾಭ ಗಳಿಸುತ್ತಿದ್ದ ನಾಲ್ಕು ಕಂಪೆನಿಗಳ ಮೇಲೆ ದಾಳಿ ನಡೆಸಲಾಗಿದೆ. ಈ ಹಣವನ್ನು ಜವಳಿ ಉದ್ಯಮ, ಸಕ್ಕರೆ ಕಾರ್ಖಾನೆ, ಹೋಟೆಲ್, ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಗಡಿಯಾಚೆಗಿನ ವ್ಯವಹಾರಗಳಿಗೆ ಬಳಸಲಾಗುತ್ತಿತ್ತು ಎನ್ನಲಾಗಿದೆ.

ವೈಕುಂಠರಾಜನ್ ಅವರ ಒಡೆತನದ ತಮಿಳು ವಾಹಿನಿ ನ್ಯೂಸ್ 7ಅನ್ನು ಕೂಡ ಪರಿಶೀಲನೆಗೆ ಒಳಪಡಿಸಲಾಗಿದೆ.

ಭಾರತದಲ್ಲಿ ಕರೋಡ್ ಪತಿಗಳ ಸಂಖ್ಯೆ ಶೇ 60ರಷ್ಟು ಹೆಚ್ಚಳ, ಏನಿದು ಜಾದೂ?ಭಾರತದಲ್ಲಿ ಕರೋಡ್ ಪತಿಗಳ ಸಂಖ್ಯೆ ಶೇ 60ರಷ್ಟು ಹೆಚ್ಚಳ, ಏನಿದು ಜಾದೂ?

Array

ಹಣಕಾಸು ಇಲಾಖೆ ಆದೇಶ

ಕೇಂದ್ರ ಹಣಕಾಸು ಸಚಿವಾಲಯದ ವಿತ್ತೀಯ ಗುಪ್ತಚರ ಘಟಕದ ಆದೇಶದ ಮೇರೆಗೆ ಈ ದಾಳಿಗಳನ್ನು ನಡೆಸಲಾಗಿದೆ. ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಮರ್ಪಕವಾಗಿ ಸಲ್ಲಿಸದ ಮತ್ತು ಕಂಪೆನಿಯು ಅಕ್ರಮ ಹಣ ಸಂಪಾದನೆ ಮಾಡಿರುವ ಆರೋಪಗಳ ಆಧಾರದಲ್ಲಿ ಈ ದಾಳಿಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಪ್ರಾಶಸ್ತ್ಯದ ಸೇವೆ, ಸರಕಾರದ ಹೊಸ ಚಿಂತನೆ ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಪ್ರಾಶಸ್ತ್ಯದ ಸೇವೆ, ಸರಕಾರದ ಹೊಸ ಚಿಂತನೆ

ಅಕ್ರಮ ಗಣಿಗಾರಿಕೆ ಆರೋಪ

ಅಕ್ರಮ ಗಣಿಗಾರಿಕೆ ಆರೋಪ

ವಿವಿ ಮಿನರಲ್ಸ್ ಸಾಕಷ್ಟು ವಿವಾದಕ್ಕೆ ಒಳಗಾದ ಕಂಪೆನಿ. ನದಿ ಪಾತ್ರಗಳಿಂದ ಮರಳು ಗಣಿಗಾರಿಕೆ ಮಾಡುವುದನ್ನು 2013ರಲ್ಲಿ ಮದ್ರಾಸ್ ಹೈಕೋರ್ಟ್ ನಿಷೇಧಿಸಿದ್ದರೂ, ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿತ್ತು ಎಂದು ಆರೋಪಿಸಲಾಗಿದೆ. 2017ರ ಏಪ್ರಿಲ್‌ನಲ್ಲಿ ಮದ್ರಾಸ್ ಹೈಕೋರ್ಟ್ ಮುಂದೆ ಸಲ್ಲಿಸಲಾದ ವರದಿಯಲ್ಲಿ, ವಿವಿ ಮಿನರಲ್ಸ್ ಯಾವುದೇ ಸಮರ್ಪಕ ದಾಖಲೆ ಪತ್ರಗಳಿಲ್ಲದೆ ಖನಿಜಗಳ ಗಣಿಗಾರಿಕೆ ಮತ್ತು ಸಾಗಾಣಿಕೆಯನ್ನು ಮಾಡುತ್ತಿದೆ ಎಂದು ಆರೋಪಿಸಲಾಗಿತ್ತು.

ಆಮ್ ಆದ್ಮಿ ಪಕ್ಷದ ಮಂತ್ರಿ ಕೈಲಾಶ್ ಗಹ್ಲೋಟ್ ಮೇಲೆ ಐಟಿ ದಾಳಿಆಮ್ ಆದ್ಮಿ ಪಕ್ಷದ ಮಂತ್ರಿ ಕೈಲಾಶ್ ಗಹ್ಲೋಟ್ ಮೇಲೆ ಐಟಿ ದಾಳಿ

ತನ್ನ ಪರ ಎಂದು ವಾದಿಸಿದ್ದ ಕಂಪೆನಿ

ತಮಿಳುನಾಡು ಸರ್ಕಾರದ ಸೂಚನೆಯಂತೆ ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಕುರಿತು ಐಎಎಸ್ ಅಧಿಕಾರಿ ಗಗನದೀಪ್ ಸಿಂಗ್ ಬೇಡಿ ಅವರ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲಾಗಿತ್ತು. ಕೋರ್ಟ್ ಎದುರು ವಿವಿ ಮಿನರಲ್ಸ್, ಆ ವರದಿಯು ತನ್ನ ಪರವಾಗಿಯೇ ಇದೆ. ತನ್ನ ಮೇಲೆ ಯಾವುದೇ ಆರೋಪಗಳಿಲ್ಲ ಎಂದು ವಾದಿಸಿತ್ತು.

ಕಳೆದ ವರ್ಷವೂ ದಾಳಿ

ಕಳೆದ ವರ್ಷದ ಮಾರ್ಚ್‌ನಲ್ಲಿ ತೂತುಕುಡಿ ಜಿಲ್ಲಾಡಳಿತವು ವಿವಿ ಮಿನರಲ್ಸ್‌ನ ಉಗ್ರಾಣಗಳ ಮೇಲೆ ದಾಳಿಗಳನ್ನು ನಡೆಸಲು ತಂಡಗಳನ್ನು ರಚಿಸಿತ್ತು. ಕಂಪೆನಿಗೆ ಸೇರಿದ ಸ್ಥಳಗಳಲ್ಲಿ ಬೀಚ್ ಸ್ಯಾಂಡ್‌ಅನ್ನು ಸಂಗ್ರಹಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಈ ತಂಡಗಳು ತಪಾಸಣೆ ನಡೆಸಿದ್ದವು.

English summary
Income Tax Department has begun searches at over 100 properties belonging to VV Minerals and four other firms across Tamil Nadu and Andhra Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X