ಎಂಕೆ ಅಳಗಿರಿ ಬಿಜೆಪಿಗೆ ಬಂದರೆ ಸ್ವಾಗತಿಸುವೆ: ಎಲ್ ಮುರುಗನ್
ಚೆನ್ನೈ, ನ. 17: ತಮಿಳುನಾಡಿನ ಭಾರತೀಯ ಜನತಾ ಪಕ್ಷಕ್ಕೆ ಇತ್ತೀಚೆಗೆ ಸೆಲೆಬ್ರಿಟಿಗಳು ಸೇರ್ಪಡೆಗೊಳ್ಳುತ್ತಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ, ನಟಿಮ್ ರಾಜಕಾರಣಿ ಖುಷ್ಬೂ ಸೇರ್ಪಡೆಯಿಂದ ಪಕ್ಷ ಇನ್ನಷ್ಟು ಬಲಗೊಂಡಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತನ್ನ ಛಾಪು ಮೂಡಿಸಲು ಕೇಸರಿ ಪಡೆ ಇನ್ನಿಲ್ಲದ ಸಾಹಸ ಮಾಡುತ್ತಿದೆ. ಈ ನಡುವೆ ಡಿಎಂಕೆಯಿಂದ ಉಚ್ಚಾಟನೆಗೊಂಡಿರುವ ಹಿರಿಯ ರಾಜಕಾರಣಿ ಎಂಕೆ ಅಳಗಿರಿ ಅವರು ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿ ಬಂದಿದೆ.
ಮಾಜಿ ಮುಖ್ಯಮಂತ್ರಿ ದಿವಂಗತ ಎಂ ಕರುಣಾನಿಧಿ ಅವರ ಹಿರಿಯ ಪುತ್ರ, ಮಾಜಿ ಕೇಂದ್ರ ಸಚಿವ ಎಂ.ಕೆ.ಅಳಗಿರಿ ಅವರು ಹೊಸ ಪಕ್ಷ ರಚನೆ ಮಾಡುತ್ತಾರೆ ಎಂಬ ಸುದ್ದಿ ಜೊತೆಗೆ ಬಿಜೆಪಿಗೆ ಬೆಂಬಲ ನೀಡುತ್ತಾರೆ ಎಂಬ ಸುದ್ದಿಯೂ ತಗುಲಿಹಾಕಿಕೊಂಡಿದೆ. ನವೆಂಬರ್ 21ರಂದು ಚೆನ್ನೈಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದು, ಮಹತ್ವದ ಮಾತುಕತೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಅಳಗಿರಿ ಅವರು ಅಮಿತ್ ಶಾರನ್ನು ಭೇಟಿ ಮಾಡುತ್ತಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಅಳಗಿರಿ ಕುಟುಂಬದವರು ಸುದ್ದಿಯನ್ನು ಅಲ್ಲಗೆಳೆದಿದ್ದಾರೆ.
ಕರುಣಾನಿಧಿ ಪುತ್ರ ಕಾಳಗ, ಅಳಗಿರಿಯಿಂದ ಹೊಸ ಪಕ್ಷ ಉದಯ?
ಈ ನಡುವೆ ಅಳಗಿರಿ ಅವರು ಬಿಜೆಪಿಗೆ ಸೇರುವ ಬಗ್ಗೆ ಅಥವಾ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುವ ಬಗ್ಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್ ಮುರುಗನ್ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ, ನಾನು ಎಂಕೆ ಅಳಗಿರಿ ಅವರೊಂದಿಗೆ ಮಾತನಾಡಿಲ್ಲ, ನನಗೇನು ತಿಳಿದಿಲ್ಲ. ಪಕ್ಷದ ಸಿದ್ಧಾಂತವನ್ನು ಒಪ್ಪಿ ಪಕ್ಷಕ್ಕೆ ಅನೇಕ ಮಂದಿ ಸೇರುತ್ತಿದ್ದಾರೆ. ಅದರಂತೆ, ಅಳಗಿರಿ ಕೂದಾ ಪಕ್ಷಕ್ಕೆ ಸೇರಲು ಬಯಸಿದರೆ ಅಥವಾ ಬೆಂಬಲ ನೀಡಿದರೆ ಮುಕ್ತವಾಗಿ ಸ್ವಾಗತಿಸುವೆ. ಈ ಬಗ್ಗೆ ಪಕ್ಷದ ವರಿಷ್ಠರು ನೀಡಿವ ನಿರ್ದೇಶನದಂತೆ ನಡೆದುಕೊಳ್ಳುವೆ ಎಂದು ಮುರಗನ್ ಹೇಳಿದ್ದಾರೆ.
I'm happy he (Tamil Nadu BJP chief L Murugan) said so. But I haven’t decided anything yet. I'll decide my political stand after discussion with supporters. There's no political strategy meet on 21st, it's all rumours: MK Alagiri (file pic) - DMK chief MK Stalin's brother - to ANI https://t.co/Fb1ukpHGqv pic.twitter.com/vGoQ0osGDL
— ANI (@ANI) November 17, 2020
ಮುರಗನ್ ಅವರ ಹೇಳಿಕೆಗೆ ಧನ್ಯವಾದಗಳು, ನಾನು ಈ ಬಗ್ಗೆ ಇನ್ನೂ ನಿರ್ಧರಿಸಿಲ್ಲ, ಪಕ್ಷದ ಕಾರ್ಯಕರ್ತರ ಜೊತೆ ಮಾತನಾಡಿ ನನ್ನ ನಿರ್ಧಾರವನ್ನು ಪ್ರಕಟಿಸುವೆ ಎಂದ ಎಂಕೆ ಅಳಗಿರಿ