ಭಯಾನಕ ವಿಡಿಯೋ: ಸುಡುವ ಟೈರ್ ಎಸೆದ ತಮಿಳುನಾಡು ರೆಸಾರ್ಟ್ ಕಾರ್ಮಿಕರು: ಆನೆ ಸಾವು
ಚೆನ್ನೈ, ಜನವರಿ 22: ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮಸಿನಗುಡಿಯಲ್ಲಿರುವ ಖಾಸಗಿ ರೆಸಾರ್ಟ್ನ ಸಿಬ್ಬಂದಿಯೊಬ್ಬರು ಸುಡುವ ಟೈರ್ ಅನ್ನು ಆನೆ ಮೇಲೆ ಎಸೆದಿದ್ದರಿಂದ ದಾರಿ ತಪ್ಪಿ ಬಂದಿದ್ದ ಕಾಡು ಆನೆ ಸಾವನ್ನಪ್ಪಿದೆ. ಇದು ಮಾನವನ ಕ್ರೌರ್ಯದ ಪರಮಾವಧಿ ಎಂದು ಹೇಳಬಹುದು.
ಟೈರ್ ಎಸೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಆನೆಯ ಕಿವಿಯಲ್ಲಿ ರಕ್ತಸ್ರಾವವಾಗಿದ್ದು, ಮಸಿನಗುಡಿಯಲ್ಲಿ ಕೆಲವು ಅರಣ್ಯ ಇಲಾಖೆ ಕಾವಲುಗಾರರಿಗೆ ಪತ್ತೆಯಾಗಿದೆ. ಆದರೆ ಅದನ್ನು ಮುದುಮಲೈ ಅರಣ್ಯ ವ್ಯಾಪ್ತಿಯಲ್ಲಿರುವ ಹೆಚ್ಚಿನ ಚಿಕಿತ್ಸೆಗಾಗಿ ಕೊಂಡೊಯ್ಯುವ ಮೊದಲೇ ಅದು ಸತ್ತುಹೋಗಿತ್ತು. ಶವಪರೀಕ್ಷೆ ನಡೆಸಿದಾಗ ಸುಟ್ಟಗಾಯಗಳಿಂದಾಗಿ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಜಿಹಾದಿ ಗ್ಯಾಂಗ್ ಸದಸ್ಯನ ಬಂಧನ
ಅರಣ್ಯ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಲಾಗಿದ್ದು, ಈ ಕೃತ್ಯ ಮಾಡಿದ ಇಬ್ಬರು ವ್ಯಕ್ತಿಗಳನ್ನು ರೆಸಾರ್ಟ್ನಲ್ಲಿ ವಶಕ್ಕೆ ಪಡೆದಿದ್ದಾರೆ. ರೆಸಾರ್ಟ್ ಮಾಲೀಕರಾದ ರೇಮಂಡ್ ಮತ್ತು ಸಿಬ್ಬಂದಿ ಪ್ರಶಾಂತ್ ಅವರನ್ನು ಬಂಧಿಸಲಾಗಿದೆ. ತನಿಖೆಯ ವೇಳೆ, ಆನೆಯ ಮೇಲೆ ಸುಡುವ ಟೈರ್ ಎಸೆಯುವ ವಿಡಿಯೋಗಳು ಅವರ ಫೋನ್ಗಳಲ್ಲಿ ಕಂಡುಬಂದಿವೆ.
ಘಟನೆಯ ತುಣುಕನ್ನು ಅರಣ್ಯ ಇಲಾಖೆ ಶುಕ್ರವಾರ ಬಿಡುಗಡೆ ಮಾಡಿದೆ. ಆನೆಯ ಮೇಲೆ ಕಟ್ಟಡದಿಂದ ಸುಡುವ ಟೈರ್ ಅನ್ನು ಎಸೆಯಲಾಗಿದ್ದು, ಕಿವಿಗೆ ಗಾಯವಾಗಿದೆ ಎಂದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸಿದೆ. ನೋವು ತಾಳಲಾರದೆ ಆನೆ ಓಡಿಹೋಗಿದೆ.
ರೆಸಾರ್ಟ್ ಕಾರ್ಮಿಕರು ಆನೆಯ ಕಡೆಗೆ ಬೆಂಕಿಯನ್ನು ಎಸೆಯುವ ಮೂಲಕ ಅದನ್ನು ಹೆದರಿಸಲು ಪ್ರಯತ್ನಿಸಿರುವ ಹಾಗೆ ಕಂಡು ಬರುತ್ತದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅದು ಕೋಲು ಅಥವಾ ಇನ್ನಾವುದೇ ವಸ್ತುವಾಗಿದ್ದರೆ ಅದು ಆನೆಗೆ ಬಡಿದು ಬೀಳುತ್ತಿತ್ತು. ಆದರೆ ಅದು ಟೈರ್ ಆಗಿದ್ದರಿಂದ, ಅದು ಆನೆಯ ಕಿವಿಯಲ್ಲಿ ಹೊತ್ತು ಸಿಲುಕಿಕೊಂಡಿದೆ.
Barbaric act in Nilgiris, Tamilnadu. An elephant was attacked with a burning tyre, in a private resort, killing the animal. Hope the guilty are punished for this inhumane act of violence. #WA #EveryLifeMatters #SaveWildlife pic.twitter.com/iLJn2yxgdq
— Praveen Angusamy, IFS 🐾 (@PraveenIFShere) January 22, 2021
ನಂತರ, ಆನೆ ಓಡಿ ಹೋಗಿ ಡ್ಯಾಂ ಬಳಿ ಬಿದ್ದಿರುವುದು ಕಂಡುಬಂದಿದೆ. ಅರಣ್ಯ ಇಲಾಖೆಯ ಪಶುವೈದ್ಯರು ಅದನ್ನು ಚೇತರಿಸಿಕೊಳ್ಳುವಂತೆ ಪ್ರಯತ್ನಿಸಿದ್ದು, ಆದರೆ ವ್ಯರ್ಥವಾಯಿತು.
ಕೀವು ತುಂಬಿದ ಸೆಪ್ಟಿಕ್ ಫಿಸ್ಟುಲಾ ಮತ್ತು ತೀವ್ರವಾದ ರಕ್ತಹೀನತೆ, ಹೈಪೋವೊಲೆಮಿಯಾಕ್ಕೆ ಕಾರಣವಾಗುವ ರಕ್ತದ ತೀವ್ರ ಹರಿದಿದ್ದರಿಂದಾಗಿ 50 ವರ್ಷದ ಆನೆ ಸಾವಿಗೀಡಾಯಿತು, ಆದರೂ ಕಿವಿಯಲ್ಲಿ ಸುಟ್ಟ ಗಾಯಗಳು ಆನೆಯ ಸಾವಿಗೆ ಕಾರಣವಾಗಲಿಲ್ಲ ಎಂದು ಪಶುವೈದ್ಯರು ಹೇಳಿದ್ದಾರೆ.