ಜೈಲಿಗೆ ಹೋಗೋ ಆಸೆಯಿಂದ ವ್ಯಕ್ತಿ ಮಾಡಿದ್ದೇನು?
ಚೆನ್ನೈ, ಜುಲೈ 13: ಯಾವುದೋ ಕೆಟ್ಟ ಘಳಿಗೆಯಲ್ಲಿ ಜೈಲಿಗೆ ಹೋಗುವಂತಹ ಸನ್ನಿವೇಶಗಳು ಬರುತ್ತವೆ. ಹೇಗಪ್ಪಾ ಜೈಲಿಂದ ಹೊರಗೆ ಬರೋದು ಎಂದು ಯೋಚನೆ ಮಾಡುವವರು ಸಾವಿರಾರು ಮಂದಿ ಇದ್ದಾರೆ.
ಆದರೆ ಹೇಗಪ್ಪಾ ಮತ್ತೆ ಜೈಲಿಗೆ ಹೋಗೋದು ಎಂದು ಯೋಜನೆ ಮಾಡಿರುವ ವ್ಯಕ್ತಿಯನ್ನು ಎಲ್ಲಾದರೂ ನೋಡಿದ್ದೀರಾ. ಒಮ್ಮೆ ಜೈಲಿಗೆ ಹೋಗಿ ಬಂದರೆ ಮತ್ತದೇ ತಪ್ಪು ಮಾಡಲು ಯಾರೂ ಬಯಸುವುದಿಲ್ಲ.
ಕುಖ್ಯಾತ ದನಗಳ್ಳನನ್ನು ಬಂಧಿಸಿದ ಮಂಗಳೂರು ಪೊಲೀಸರು
ಆದರೆ ಇಲ್ಲೊಬ್ಬ ವ್ಯಕ್ತಿ ಮತ್ತೆ ಜೈಲಿಗೆ ಹೋಗಬೇಕು ಎಂದು ಬೈಕ್ ಕದ್ದಿದ್ದಾನೆ. ಅಷ್ಟೇ ಅಲ್ಲದೆ ಸಿಸಿ ಕ್ಯಾಮರಾದಲ್ಲಿ ತನ್ನ ಮುಖ ಕಾಣುವಂತೆ ಬೈಕ್ ಕಳವು ಮಾಡಿದ್ದಾನೆ.
ಚೆನ್ನೈನ ಜ್ಞಾನಪ್ರಕಾಶಂ ಎಂಬಾತ ಮತ್ತೆ ಜೈಲಿಗೆ ಹೋಗಬೇಕೆಂಬ ಆಸೆಯಿಂದ ಈ ಕೆಲಸ ಮಾಡಿದ್ದಾನೆ.
ಕಳ್ಳತನ ಕೇಸ್ ನಲ್ಲಿ ಜೈಲು ಸೇರಿದ್ದ ಈತ ಜಾಮೀನಿನ ಮೇಲೆ ಹೊರ ಬಂದಿದ್ದನು. ಜೈಲಿನಲ್ಲಿ ಸಿಗುತ್ತಿದ್ದ ಊಟ, ಸ್ನೇಹಿತರು, ಆರಾಮದಾಯಕ ಜೀವನವನ್ನು ಮತ್ತೆ ಅನುಭವಿಸಬೇಕೆಂದು ಕೈಲಾಸಪುರಂನ ರಸ್ತೆಯಲ್ಲಿದ್ದ ಬೈಕೊಂದನ್ನು ಕಳ್ಳತನ ಮಾಡಿದ್ದಾನೆ.
ಆರೋಪಿ ಜ್ಞಾನಪ್ರಕಾಶಂ ಪೆರುಂಗಲತ್ತೂರು ನಿವಾಸಿಯಾಗಿದ್ದು, ಕಳೆದ ಮಾರ್ಚ್ ತಿಂಗಳಲ್ಲಿ ಕಳ್ಳತನ ಮಾಡಿ ಬಂಧಿತನಾಗಿದ್ದನು.