ಶೀಘ್ರದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಕೊರೊನಾ ಲಸಿಕೆ ದೊರೆಯಲಿದೆ: ಹರ್ಷವರ್ಧನ್
ಚೆನ್ನೈ,
ಜನವರಿ
08:
ಅತಿ
ಶೀಘ್ರದಲ್ಲಿ
ದೇಶದ
ಪ್ರತಿಯೊಬ್ಬ
ನಾಗರಿಕನಿಗೂ
ಕೊರೊನಾ
ಲಸಿಕೆ
ಲಭ್ಯವಾಗಲಿದೆ
ಎಂದು
ಆರೋಗ್ಯ
ಸಚಿವ
ಹರ್ಷವರ್ಧನ್
ತಿಳಿಸಿದ್ದಾರೆ.
ದೇಶದಾದ್ಯಂತ
ಇಂದು
2ನೇ
ಸುತ್ತಿನ
ಲಸಿಕೆ
ತಾಲೀಮು
ಕಾರ್ಯಕ್ರಮ
ಆರಂಭವಾಗಿರುವ
ಹಿನ್ನೆಲೆಯಲ್ಲಿ
ಸಚಿವ
ಹರ್ಷವರ್ಧನ್
ಅವರು
ಸರ್ಕಾರಿ
ಆಸ್ಪತ್ರೆಗೆ
ಭೇಟಿ
ನೀಡಿ
ಪರಿಶೀಲನೆ
ನಡೆಸಿದರು.
ಇನ್ನು ಕೆಲವೇ ದಿನಗಳಲ್ಲಿ ದೇಶದ ಪ್ರತೀ ನಾಗರೀಕನಿಗೂ ಕೊರೊನಾ ಲಸಿಕೆ ಲಭ್ಯವಾಗಲಿದೆಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಶುಕ್ರವಾರ ಹೇಳಿದ್ದಾರೆ.
ಲಸಿಕೆ ಕುರಿತು ಯಾವುದೇ ಮಾಹಿತಿಯನ್ನು ಸರ್ಕಾರ ತಳಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೂ ಜನರಿಗೆ ನೀಡಲಿದೆ. ಲಸಿಕೆ ತಾಲೀಮು ಮೂಲಕ ಲಕ್ಷಾಂತರ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ. ಪ್ರಕ್ರಿಯೆಗಳು ಇನ್ನೂ ಮುಂದುವರೆದಿವೆ ಎಂದು ತಿಳಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತ್ಯಂತ ಕಡಿಮೆ ಅವಧಿಯಲ್ಲಿ ಲಸಿಕೆ ಅಭಿವೃದ್ಧಿಯಲ್ಲಿ ಭಾರತ ಉತ್ತಮ ಕಾರ್ಯ ಸಾಧಿಸಿದೆ. ಇನ್ನು ಕಳವೇ ದಿನಗಳಲ್ಲಿ ದೇಶದ ಪ್ರತೀ ನಾಗರೀಕರನಿಗೂ ಲಸಿಕೆ ವಿತರಣೆ ಮಾಡಲಾಗುತ್ತದೆ. ಲಸಿಕೆ ಲಭ್ಯವಾಗುತ್ತಿದ್ದಂತೆಯೇ ಆರೋಗ್ಯ ಕಾರ್ಯಕರ್ತರಿಗೆ ಮೊದಲು ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕದ 263 ಕಡೆಗಳಲ್ಲಿ ಲಸಿಕೆ ವಿತರಣೆಯ ತಾಲೀಮು (ಡ್ರೈ ರನ್) ನಡೆಯಲಿದೆ. ಲಸಿಕೆ ಬಂದ ಬಳಿಕ ವಿತರಣೆಯ ಕಾರ್ಯ ಜನಾಂದೋಲನದಂತೆ ನಡೆಯಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.