ರಾಜೀವ್ ಗಾಂಧಿ ಹಂತಕರ ಬಿಡುಗಡೆ, ಡಿಎಂಕೆ ಪ್ರಣಾಳಿಕೆ
ಚೆನ್ನೈ, ಮಾರ್ಚ್ 19: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದ ಏಳು ಅಪರಾಧಿಗಳನ್ನು ಬಿಡುಗಡೆ ಮಾಡುವುದು ಸೇರಿದಂತೆ ಅನೇಕ ಯೋಜನೆಗಳುಳ್ಳ ಪ್ರಣಾಳಿಕೆಯನ್ನು ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಮಂಗಳವಾರದಂದು ಪ್ರಕಟಿಸಿದೆ.
ಅತಿ ಶ್ರೀಮಂತ ಪಕ್ಷ : ಪ್ರಾದೇಶಿಕ ಪಕ್ಷಗಳ ಪೈಕಿ ಎಸ್ಪಿ, ಡಿಎಂಕೆ ಮುಂದು!
ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ಪ್ರಣಾಳಿಕೆ ಬಗ್ಗೆ ಮಾತನಾಡಿ, ಸುಪ್ರೀಂಕೋರ್ಟ್ ಅದೇಶ, ತಮಿಳುನಾಡು ಸಚಿವ ಸಂಪುಟ ಸಭೆ ನಿರ್ಣಯದಂತೆ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡಲು ರಾಜ್ಯಪಾಲರ ಮೇಲೆ ಒತ್ತಡ ಹೇರಲಾಗುವುದು ಎಂದರು.
ಪ್ರಣಾಳಿಕೆ
ಮುಖ್ಯಾಂಶಗಳು:
*
ರಾಜೀವ್
ಗಾಂಧಿ
ಹತ್ಯೆ
ಪ್ರಕರಣದ
7
ಅಪರಾಧಿಗಳು,
ಎಲ್ಲಾ
ಶ್ರೀಲಂಕಾದ
ನಿರಾಶ್ರಿತರಿಗೆ
ಭಾರತ
ಪೌರತ್ವ
ಕೊಡಿಸುವುದು.
*
ವೈದ್ಯಕೀಯ
ಉನ್ನತ
ಶಿಕ್ಷಣ
ಕೋರ್ಸ್
ಪ್ರವೇಶಕ್ಕಾಗಿ
ಇರುವ
ನೀಟ್
ಪರೀಕ್ಷೆಯನ್ನು
ರದ್ದುಗೊಳಿಸುವುದು.
*
ದಕ್ಷಿಣ
ಭಾರತ
ಎಲ್ಲ
ಪ್ರಮುಖ
ನದಿಗಳ
ಜೋಡಣೆ
ಹಾಗೂ
ಕುಡಿಯುವ
ನೀರಿನ
ಸಮಸ್ಯೆ
ನಿವಾರಣೆ
*
ಎಲ್ಲಾ
ರೀತಿಯ
ಶಿಕ್ಷಣ
ಸಾಲವನ್ನು
ಮನ್ನಾ
ಮಾಡಲಾಗುವುದು.
*
ತಮಿಳು
ದೇಶದ
ಅಧಿಕೃತ
ಭಾಷೆ
ಮಾನ್ಯತೆ,
ತಮಿಳುನಾಡಿನ
ಕೇಂದ್ರ
ಸರ್ಕಾರಿ
ಕಚೇರಿಯಲ್ಲಿ
ತಮಿಳು
ಮುಖ್ಯಭಾಷೆಯಾಗಲಿದೆ.
*
ಶಾಲಾ,
ಕಾಲೇಜು
ವಿದ್ಯಾರ್ಥಿಗಳಿಗೆ
ಉಚಿತ
ರೈಲು
ವ್ಯವಸ್ಥೆ.
*
ಕೇಂದ್ರ
ಸರ್ಕಾರ
ಇಲಾಖೆಗಳಲ್ಲಿ
ಸ್ಥಳೀಯರಿಗೆ
ಉದ್ಯೋಗ
ಅವಕಾಸ
ಹೆಚ್ಚಿಸುವುದು.
ಡಿಎಂಕೆ- ಕಾಂಗ್ರೆಸ್ ಕ್ಷೇತ್ರ ಹಂಚಿಕೆ ಪಟ್ಟಿ ಪ್ರಕಟಿಸಿದ ಎಂಕೆ ಸ್ಟಾಲಿನ್
ತಮಿಳುನಾಡಿನಲ್ಲಿ ಎಐಎಡಿಎಂಕೆ ಹಾಗೂ ಬಿಜೆಪಿ ಮಧ್ಯೆ ಮೈತ್ರಿಯು ತಮಿಳುನಾಡಿನಲ್ಲಿ ಅಂತಿಮಗೊಂಡ ಮರು ದಿನವೇ ಡಿಎಂಕೆ ಹಾಗೂ ಕಾಂಗ್ರೆಸ್ ಮೈತ್ರಿ ಒಪ್ಪಂದ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಒಟ್ಟು 40 ಲೋಕಸಭಾ ಕ್ಷೇತ್ರಗಳ ಪೈಕಿ ತಮಿಳುನಾಡಿನಲ್ಲಿ 39 ಹಾಗೂ ಪುದುಚೆರಿಯಲ್ಲಿ 1 ಸ್ಥಾನವಿದೆ. ಕಾಂಗ್ರೆಸ್ ಗೆ 10 ಕ್ಷೇತ್ರ ಹಾಗೂ ಇತರೆ ಮಿತ್ರ ಪಕ್ಷಗಳಿಗೆ 10 ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ. ಉಳಿದ 20 ಕ್ಷೇತ್ರಗಳಲ್ಲಿ ಡಿಎಂಕೆ ಸ್ವತಂತ್ರವಾಗಿ ಸ್ಪರ್ಧಿಸಲಿದೆ.