ತಮಿಳುನಾಡಿನಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಕೂಗು
ಚೆನ್ನೈ,
ಫೆಬ್ರವರಿ.16:
ತಮಿಳುನಾಡಿನಲ್ಲೂ
ಕೂಡಾ
ಪೌರತ್ವ
ತಿದ್ದುಪಡಿ
ಕಾಯ್ದೆ
ಮತ್ತು
ರಾಷ್ಟ್ರೀಯ
ನಾಗರಿಕ
ನೋಂದಣಿ
ವಿರುದ್ಧ
ಪ್ರತಿಭಟನೆ
ಮುಂದುವರಿದಿದೆ.
ಚೆನ್ನೈನ
ಹಳೆ
ವಶೇರ್ಮನ್
ಪೇಟ್
ಪ್ರದೇಶದಲ್ಲಿ
ಕೇಂದ್ರ
ಸರ್ಕಾರದ
ವಿರುದ್ಧ
ಜನರು
ಮತ್ತೆ
ಬೀದಿಗೆ
ಇಳಿದಿದ್ದಾರೆ.
ಭಾನುವಾರ
ಕೇಂದ್ರ
ಸರ್ಕಾರವು
ಜಾರಿಗೊಳಿಸಿರುವ
ಪೌರತ್ವ
ತಿದ್ದುಪಡಿ
ಕಾಯ್ದೆ
ಮತ್ತು
ರಾಷ್ಟ್ರೀಯ
ನಾಗರಿಕ
ನೋಂದಣಿ
ವಿರುದ್ಧ
ವಿಭಿನ್ನ
ರೀತಿಯಲ್ಲಿ
ಪ್ರತಿಭಟನೆ
ನಡೆಸಿದರು.
ಇದೇ
ವೇಳೆ
ಬೀದಿ
ನಾಟಕದ
ಮೂಲಕ
ಜನರಲ್ಲಿ
ಸಿಎಎ
ಜಾರಿಯಿಂದ
ಆಗುವ
ಸಮಸ್ಯೆಗಳ
ಕುರಿತು
ಜಾಗೃತಿ
ಮೂಡಿಸಲಾಯಿತು.
ಶಾಹಿನ್
ಬಾಗ್-ಅಮಿತ್
ಶಾ
ನಿವಾಸದತ್ತ
ಸಿಎಎ
ವಿರೋಧಿ
ಹೋರಾಟಗಾರರು
ಇನ್ನೊಂದಡೆ
ಕಡೆ
ರಾಷ್ಟ್ರ
ರಾಜಧಾನಿಯಲ್ಲಿ
ಪೌರತ್ವ
ತಿದ್ದುಪಡಿ
ಕಾಯ್ದೆ
ಮತ್ತು
ರಾಷ್ಟ್ರೀಯ
ನಾಗರಿಕ
ನೋಂದಣಿ
ವಿರುದ್ಧ
ಶಾಹಿನ್
ಬಾಗ್
ನಲ್ಲಿ
ಪ್ರತಿಭಟನೆ
ನಡೆಸುತ್ತಿದ್ದ
ನೂರಾರು
ಮಹಿಳಾ
ಹೋರಾಟಗಾರರು
ಭಾನುವಾರ
ಕೇಂದ್ರ
ಗೃಹ
ಸಚಿವ
ಅಮಿತ್
ಶಾ
ನಿವಾಸದತ್ತೆ
ಹೊರಟಿದ್ದರು.
ಶಾಹಿನ್
ಬಾಗ್
ಹೋರಾಟಗಾರರನ್ನು
ತಡೆದ
ಪೊಲೀಸರು:
ಕೇಂದ್ರ
ಸಚಿವ
ಅಮಿತ್
ಶಾ
ನಿವಾಸದತ್ತೆ
ಹೊರಟ
ಪ್ರತಿಭಟನಾ
ಮೆರವಣಿಗೆಯನ್ನು
ಅವರ
ನಿವಾಸದಿಂದ
500
ಮೀಟರ್
ದೂರದಲ್ಲೇ
ಪೊಲೀಸರು
ತಡೆದಿದ್ದಾರೆ.
ಮುಖ್ಯವಾಗಿ
ಕೆಲವರಿಗೆ
ಬೇಕಿದ್ದಲ್ಲಿ
ಚರ್ಚೆ
ನಡೆಸಲು
ಅವಕಾಶ
ನೀಡಲಾಗುತ್ತದೆ.
ಅಮಿತ್
ಶಾ
ಅವರ
ನಿವಾಸಕ್ಕೆ
ತೆರಳಲು
ಒಂದು
ತಂಡಕ್ಕೆ
ಅನುಮತಿ
ನೀಡಲು
ಒಪ್ಪಿಗೆ
ಸೂಚಿಸಲಾಯಿತು.
ಆದರೆ,
ಪ್ರತಿಭಟನಾನಿರತರೆಲ್ಲ
ಒಟ್ಟಾಗಿ
ತೆರಳುವುದಾಗಿ
ಪಟ್ಟು
ಹಿಡಿದಿದ್ದರಿಂದ
ಅವರನ್ನು
ತಡೆ
ಹಿಡಿಯಲಾಗಿದೆ
ಎಂದು
ಹಿರಿಯ
ಪೊಲೀಸ್
ಅಧಿಕಾರಿಯೊಬ್ಬರು
ತಿಳಿಸಿದ್ದಾರೆ.