ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಆರೋಗ್ಯ ಸ್ಥಿತಿ ಅಪ್ಡೇಟ್ಸ್
ಚೆನ್ನೈ, ಜುಲೈ 29: ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಎಂ.ಕರುಣಾ ನಿಧಿ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ, ಆದರೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ತೀವ್ರ ವೈದ್ಯಕೀಯ ನಿಗಾದಲ್ಲಿದ್ದಾರೆ ಎಂದು ಕಾವೇರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅರವಿಂದನ್ ಸೆಲ್ವರಾಜ್ ಅವರ್ಹು ಳಿದ್ದಾರೆ.
ಆದರೆ, ವದಂತಿಗಳಿಗೆ ಕಿವಿಗೊಟ್ಟು ಆಸ್ಪತ್ರೆ ಬಳಿ ಸೇರಿರುವ ಅಭಿಮಾನಿಗಳು ಆಸ್ಪತ್ರೆ ಬಳಿಯ ಬ್ಯಾರಿಗೇಡ್ ಗಳನ್ನು ಮುರಿದು ನುಗ್ಗಲು ಯತ್ನಿಸಿದ್ದಾಗ, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಈ ಸಮಯದ ಮಾಹಿತಿಯಂತೆ ಆಸ್ಪತ್ರೆಯಲ್ಲಿ ಕುಟುಂಬದ ಆಪ್ತರು ಬಿಟ್ಟರೆ, ಮಿಕ್ಕ ಎಲ್ಲಾ ಪ್ರಮುಖ ರಾಜಕೀಯ ನಾಯಕರು, ಕರುಣಾನಿಧಿ ಅವರ ಖಾಸಗಿ ವೈದ್ಯ ಡಾ. ಗಿರಿ ಕೂಡಾ ಕಾವೇರಿ ಆಸ್ಪತ್ರೆಯಿಂದ ವಾಪಾಸ್ ಆಗಿದ್ದಾರೆ.
ಇಂಡಿಯಾ ಟುಡೇ ಸಮೀಕ್ಷೆ: ಡಿಎಂಕೆ ಮೈತ್ರಿಕೂಟಕ್ಕೆ ಪೊಂಗಲ್ ಗಿಫ್ಟ್
ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಆರೋಗ್ಯ ಸ್ಥಿತಿ ಗಂಭೀರ ಎಂಬ ಮಾಹಿತಿ ಸಿಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಕಾವೇರಿ ಆಸ್ಪತ್ರೆಯತ್ತ ಧಾವಿಸುತ್ತಿದ್ದಾರೆ. ಚೆನ್ನೈ ನಗರದಾದ್ಯಂತೆ ಹೈ ಅಲರ್ಟ್ ಘೋಷಿಸಲಾಗಿದ್ದು, ಪೊಲೀಸರು ಗಸ್ತು ತಿರುಗುತ್ತಿದ್ದಾರೆ.
ಕಾವೇರಿ ಆಸ್ಪತ್ರೆಗೆ ಕರುಣಾನಿಧಿ ಪುತ್ರ ಸ್ಟಾಲಿನ್, ಪುತ್ರಿ ಕನ್ನಿಮೊಳಿ, ಮಾಜಿ ಕೇಂದ್ರ ಸಚಿವ ಎ ರಾಜಾ ಆಗಮಿಸಿದ್ದಾರೆ. ಇದಕ್ಕೂ ಮುನ್ನ ಮಾಜಿ ಸಚಿವ ಪಿ.ಚಿದಂಬರಂ , ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕರುಣಾನಿಧಿ ಅವರನ್ನು ಕಂಡು ವಾಪಸಾಗಿದ್ದಾರೆ.
There was a transient setback in the clinical condition of Kalaignar M Karunanidhi, DMK President & Former CM of Tamil Nadu. With active medical support, his vital signs are normalising. he continues to be closely monitored & treated by panel of expert doctors: Kauvery Hospital
— ANI (@ANI) July 29, 2018
ಆಸ್ಪತ್ರೆ ಬಳಿ ಈಗಾಗಲೇ ಸಾವಿರಾರು ಡಿಎಂಕೆ ಕಾರ್ಯಕರ್ತರು ಜಮಾಯಿಸಿದ್ದು, ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇರುವುದರಿಂದ ಆಸ್ಪತ್ರೆ ಬಳಿ ಮಾತನಾಡಿದ ಎ ರಾಜಾ, ಯಾವುದೇ ಊಹಾಪೋಹ ಸುದ್ದಿಗೆ ಕಿವಿಗೊಡಬೇಡಿ, ದೇಹ ಸ್ಥಿತಿಯಲ್ಲಿ ಏರುಪೇರಾಗಿದ್ದು, ನಿಜ, ಆದರೆ, ವೈದ್ಯರ ತಂಡ ಸೂಕ್ತ ಚಿಕಿತ್ಸೆ ನೀಡುತ್ತಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ ಎಂದಿದ್ದಾರೆ.
ಕರುಣಾನಿಧಿ ಸ್ಥಿತಿ ಗಂಭೀರ: ಆಸ್ಪತ್ರೆ ಸುತ್ತಮುತ್ತ ಬಿಗಿಭದ್ರತೆ
Outside visuals of Chennai's Kauvery hospital, where DMK Chief M Karunanidhi is admitted. #TamilNadu pic.twitter.com/FVrWHrm8RD
— ANI (@ANI) July 29, 2018
ಕರುಣಾನಿಧಿ ಅವರ ಆರೋಗ್ಯ ಕುರಿತಂತೆ ಕಾವೇರಿ ಆಸ್ಪತ್ರೆಯಿಂದ ವೈದ್ಯರು ಅಧಿಕೃತ ಮಾಹಿತಿ ನೀಡಿದ್ದಾರೆ.
Visited Kaveri Hospital and met former Chief Minister Thiru Kalaignar Karunanidhi. Met his family members and doctors and enquired about his health. Doctors said he is stable. Wish him a speedy recovery. @kalaignar89 pic.twitter.com/Q7ay71txzT
— VicePresidentOfIndia (@VPSecretariat) July 29, 2018
"there was transient setback in the clinical condition" but "vital signs are normalizing". ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ಆದರೆ, ಆಸ್ಪತ್ರೆ ಬಳಿ ಆತಂಕದ ವಾತಾವರಣ ಮುಂದುವರೆದಿದೆ.