ಚಂದಮಾಮ: ವಿಕ್ರಮ ಮತ್ತು ಬೇತಾಳ ಕಥೆ ಖ್ಯಾತಿಯ ಚಿತ್ರ ಕಲಾವಿದ ಶಿವಶಂಕರನ್ ನಿಧನ
ಬೆಂಗಳೂರು, ಸೆಪ್ಟೆಂಬರ್ 20: ಮೊಬೈಲ್ ಇಲ್ಲದ ಕಾಲದಲ್ಲಿ, ಮಕ್ಕಳನ್ನು ಓದಿಗೆ ಒರೆ ಹಚ್ಚುತ್ತಿದ್ದ, ರಾಜಾ ವಿಕ್ರಮನ ಸಾಹಸಗಳ ಮೂಲಕ ಬೆರಗಾಗುವ ಜಗತ್ತನ್ನು ತೆರೆದಿಡುತ್ತಿದ್ದ ಚಂದಮಾಮ ಕಲಾವಿದ ಶಂಕರ( ಕೆಸಿ ಶಿವಶಂಕರನ್) ಅವರು ಕೊನೆಯುಸಿರೆಳೆದಿದ್ದಾರೆ.
ವಿಕ್ರಮ ಮತ್ತು ಬೇತಾಳನ ಕಥೆಗಳು ಕಥಾರೂಪಕಗಳಲ್ಲಿ ಸುಂದರವಾಗಿ ಮೂಡಿಬರುತ್ತಿದ್ದ ಕಲಾವಿದ ಶಂಕರ್ ಅವರ ಅದ್ಭುತ ಚಿತ್ರಗಳು ನೇರವಾಗಿ ಮನಸ್ಸಿಗೆ ತಾಕುತ್ತಿದ್ದವು.
ಕೆಸಿ ಶಿವಶಂಕರನ್ 1924 ರಲ್ಲಿ ಈರೋಡ್ನಲ್ಲಿ ಜನಿಸಿದರು. ಅವರ ತಂದೆ ಶಿಕ್ಷಕರಾಗಿದ್ದರು. ಮದ್ರಾಸಿನ ಕಾರ್ಪೊರೇಷನ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲ ಶಂಕರ್ ಅವರ ಕೈಬರಹ ಅದ್ಭುತವಾಗಿತ್ತು. ಮುಂದೆ ಆ ಕೈಬರಹವೇ ಚಿತ್ರಕಾರರನ್ನಾಗಿ ಮಾಡಿತ್ತು.
ಮುಂದೆ
ತಂದೆ
ಸೇರಿದಂತೆ
ಅನೇಕ
ಹಿತೈಷಿಗಳ
ಮಾರ್ಗದರ್ಶನದಂತೆ
ಬಾಲ
ಶಂಕರ್
ಪದವಿ
ಶಿಕ್ಷಣ
ಪಡೆಯದೆ,
ಫೈನ್
ಆರ್ಟ್ಸ್
ಕಾಲೇಜು
ಸೇರಿಕೊಂಡು
ಒಂದಷ್ಟು
ಕಲೆ
ಕಲಿತರು.
ಬಳಿಕ
1952ರ
ವೇಳೆಗೆ
ಮಾಸಿಕ
350
ರೂಪಾಯಿ
ಸಂಬಳಕ್ಕೆ
ಚಂದಮಾಮ
ಮಾಸಿಕ
ಪತ್ರಿಕೆ
ಸೇರಿಕೊಂಡು
ತಮ್ಮ
ಭವಿಷ್ಯ
ರೂಪಸಿಕೊಂಡರು.