CAA ಪ್ರತಿಭಟನೆ, ಹಿಂಸಾಚಾರದ ಬಗ್ಗೆ ಸೂಪರ್ ಸ್ಟಾರ್ ರಜನಿ ಕಳವಳ
ಚೆನ್ನೈ, ಡಿಸೆಂಬರ್ 20: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದೆಲ್ಲೆಡೆ ನಡೆದಿರುವ ಪ್ರತಿಭಟನೆ ಹಿಂಸಾಚಾರ ರೂಪ ತಳೆದಿರುವುದಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕಾಯ್ದೆ ಬಗ್ಗೆ ರಜನಿಕಾಂತ್ ಪ್ರತಿಕ್ರಿಯಿಸುತ್ತಿದ್ದಂತೆ ರಜನಿ ಹೇಳಿಕೆ ಪರ-ವಿರೋಧ ಚರ್ಚೆ ಸಾಮಾಜಿಕ ಜಾಲ ತಾಣಗಳಲ್ಲಿ ಜೋರಾಗಿ ನಡೆದಿದೆ.
"ಈ ಪ್ರತಿಭಟನೆ, ಹಿಂಸಾಚಾರದಿಂದ ನನಗೆ ತೀವ್ರವಾಗಿ ನೋವಾಗಿದೆ. ಹಿಂಸೆಯ ಮೂಲಕ ಸಮಸ್ಯೆಗೆ ಪರಿಹಾರ ಎಂದಿಗೂ ನೀಡುವುದಿಲ್ಲ. ಭಾರತದ ಏಕತೆ, ಸುರಕ್ಷತೆ, ಸೌಹಾರ್ದತೆ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ" ಎಂದು ರಜನಿ ಹೇಳಿದ್ದಾರೆ.
ಪೌರತ್ವ ಕಾಯ್ದೆ ಪ್ರಸ್ತಾಪಿಸಿರುವ 'ಧಾರ್ಮಿಕ ಕಿರುಕುಳ' ಎಂದರೇನು?
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ಉತ್ತರಪ್ರದೇಶ ಹಾಗೂ ಕರ್ನಾಟಕದಲ್ಲಿ ಸಾವು-ನೋವು ಸಂಭವಿಸಿದ ಬಳಿಕ ಮನನೊಂದು ರಜನಿ ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ.
ಆದರೆ, ಟ್ವಿಟ್ಟರಲ್ಲಿ #IStandWithRajnikanth ಹಾಗೂ #ShameOnYouSanghiRajini ಎಂಬ ಎರಡು ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದೆ.
What do you think Mr.Rajinikanth's Advice to Bhagat Singh Would have been, had he been living during his time ?😡
— Facts Only Matter (@Verizon33387597) December 20, 2019
INDIA DESERVES BETTER ICONS.#IndiansAgainstCAA #IndiaRejectsCAA #ShameOnYouSanghiRajini pic.twitter.com/l10wR3HgfW
CAA ಮತ್ತು NRC ವಿರುದ್ಧ ಹಮ್ಮಿಕೊಂಡಿದ್ದ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕುವುದರ ವಿರುದ್ಧ ಆಕ್ಷೇಪ ವ್ಯಕ್ತವಾಗಿದೆ. ಪ್ರತಿಭಟನೆ ಮಾಡುವುದು ಸಾಂವಿಧಾನಿಕ ಹಕ್ಕಿ, ರಾಜ್ಯ ಸರ್ಕಾರಗಳು ಜನರ ಈ ಹಕ್ಕನ್ನು ಹತ್ತಿಕ್ಕುತ್ತಿರುವುದು ಖಂಡನಾರ್ಹ ಹಾಗೂ ಕಾನೂನು ಅಸಮ್ಮತ ಎಂಬ ವಾದ ಕೇಳಿ ಬರುತ್ತಿದೆ.
I oppose CAA, protesting is the only way of showing opposition, but I don't want any violence in protests
— ரௌடி (@Rowdy_3_) December 19, 2019
If you ask me who started violence, how will I know? I can only wish there is no violence
My thoughts exactly match with Thalaivar's statement so #IStandWithRAJINIKANTH
ಇದು ಭಾರತವನ್ನು ನಿಜವಾಗಿಯೂ ಕಾಡುತ್ತಿರುವ ಸಮಸ್ಯೆಗಳಾದ ಉದ್ಯೋಗ, ಶಿಕ್ಷಣ, ಆರೋಗ್ಯ, ಏರುತ್ತಿರುವ ಬೆಲೆ, ಕುಸಿಯುತ್ತಿರುವ ಆರ್ಥಿಕತೆ ಹಾಗೂ ಕೇಂದ್ರ ಸರ್ಕಾರದ ಸೋಲುಗಳ ಬಗ್ಗೆ ಜನರ ದಿಕ್ಕು ತಪ್ಪಿಸುವ ಹುನ್ನಾರ ಎಂಬ ಇನ್ನೊಂದು ವಾದವೂ ಕೇಳಿ ಬಂದಿದೆ.
If @rajinikanth is condemned for saying,
— ɴᴀᴛʜᴀɴ ᴰᴬᴿᴮᴬᴿ ❁ (@ShaSherNat) December 19, 2019
PRACTICE NON VIOLENCE..
Trust me,
the doomsday is near. 🙏#IStandWithRajinikanth pic.twitter.com/7jjUonQOMH
I oppose CAA, protesting is the only way of showing opposition, but I don't want any violence in protests
— ரௌடி (@Rowdy_3_) December 19, 2019
If you ask me who started violence, how will I know? I can only wish there is no violence
My thoughts exactly match with Thalaivar's statement so #IStandWithRAJINIKANTH