ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರ್ಯಾದಾ ಹತ್ಯೆಯಿಂದ ಪ್ರೇಯಸಿ ಉಳಿಸಲು ತಾನೇ ಬೆಂಕಿ ಹಚ್ಚಿಕೊಂಡ ಪ್ರಿಯಕರ

|
Google Oneindia Kannada News

ಚೆನ್ನೈ, ಮೇ 25: ತನ್ನ ಪ್ರೇಯಸಿಯನ್ನು ಉಳಿಸಲು ತಾನೇ ಬೆಂಕಿ ಹಚ್ಚಿಕೊಂಡು ಪ್ರಿಯಕರನೊಬ್ಬ ಆಸ್ಪತ್ರೆ ಸೇರಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ವಿಜಯ್ ಹಾಗೂ ಅಪರ್ಣಶ್ರೀ ಇಬ್ಬರೂ ಎಂಜಿನಿಯರಿಂಗ್ ಪೂರೈಸಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ವಿಜಯ್ ಉದ್ಯೋಗವರಸಿ ಚೆನ್ನೈಗೆ ಹೋಗಿದ್ದ.

ಮರ್ಯಾದಾ ಹತ್ಯೆ: ಮುಸ್ಲಿಂ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳ ಸಜೀವ ದಹನಮರ್ಯಾದಾ ಹತ್ಯೆ: ಮುಸ್ಲಿಂ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳ ಸಜೀವ ದಹನ

ಈ ಸಂದರ್ಭದಲ್ಲಿ ಅಪರ್ಣಶ್ರೀ ಹಾಗೂ ವಿಜಯ್ ಬಗ್ಗೆ ಅಪರ್ಣ ಅವರ ಮನೆಯವರಿಗೆ ಗೊತ್ತಾಗಿತ್ತು, ಆಕೆಯ ಮೊಬೈಲ್‌ನ್ನು ಕಿತ್ತಿಟ್ಟುಕೊಂಡಿದ್ದರು. ಅಷ್ಟೇ ಅಲ್ಲದೆ ಆಕೆಯ ಕೈಗಳನ್ನು ಕೂಡ ಕಟ್ಟಿ ಹಾಕಿದ್ದರು.

Boyfriend Self-Immolates In Front Of Lovers House To Save Her From Honour Killing

ವಿಜಯ್ ಕುಟುಂಬಸ್ಥರು ಅಪರ್ಣಶ್ರೀ ಮನೆಗೆ ತೆರಳಿ ಮಗಳನ್ನು ಮದುವೆ ಮಾಡಿಕೊಡುವಂತೆ ಮನವಿ ಮಾಡಿದ್ದರು. ಆದರೆ ಅಪರ್ಣ ಮನೆಯವರು ವಿಜಯ್ ವಿರುದ್ಧ ದೂರು ದಾಖಲಿಸಿದ್ದರು.

ವಿಜಯ್ ಮತ್ತೆ ಅಪರ್ಣ ಮನೆಗೆ ಹೋಗಿ ಅವರ ಪೋಷಕರ ಬಳಿ ಮದುವೆ ಮಾಡಿಕೊಡಿ ಎಂದು ಮನವಿ ಮಾಡಿದ್ದ, ಆಗ ಆಕೆಯ ಪೋಷಕರು ಅಪರ್ಣ ಸತ್ತಾಗಲೇ ಈ ವಿಷಯಕ್ಕೆ ಅಂತ್ಯ ಎಂದು ಹೇಳಿದ್ದರು.

ಅದಕ್ಕೆ ಗಾಬರಿಗೊಂಡ ವಿಜಯ್ ಪ್ರೇಯಸಿಯನ್ನು ಉಳಿಸಲು ಆಕೆಯ ಮನೆಯ ಮುಂದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ, ಬಳಿಕ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಈ ಕುರಿತು ತನಿಖೆ ನಡೆಯುತ್ತಿದೆ.

English summary
man allegedly self-immolated in the Ramanathapuram district of Tamil Nadu outside his lover’s house in order to save her from her disapproving parents on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X