ಖುಷ್ಬು ಕಹಾನಿ: ತಮಿಳುನಾಡು ಚುನಾವಣಾ ಕಣದಲ್ಲಿ 1 ದೋಸೆ ಕಥೆ!
ಚೆನ್ನೈ, ಮಾರ್ಚ್ 27: ದೇಶದಲ್ಲಿ ಚುನಾವಣೆಗಳು ಎದುರು ಬಂದರೆ ಸಾಕು. ಮತದಾರರನ್ನು ಒಲಿಸಿಕೊಳ್ಳುವುದಕ್ಕೆ ಜನಪ್ರತಿನಿಧಿಗಳು ಮಾಡುವ ಒಂದೊಂದು ಪ್ರಯತ್ನವೂ ಒಂದೊಂದು ಸರ್ಕಸ್ ರೀತಿಯಲ್ಲಿ ಗೋಚರಿಸುತ್ತದೆ.
ನಟಿ ಕಮ್ ರಾಜಕಾರಣಿ ಖುಷ್ಬು ಸುಂದರ್ಗೆ ಬಿಜೆಪಿ ಟಿಕೆಟ್
ತಮಿಳುನಾಡಿನ ಥೌಸಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಆಗಿರುವ ನಟಿ ಖುಷ್ಬು ಸುಂದರ್ ಅವರು ಮಾಡಿದ ಕೆಲಸ ಕೂಡ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ.
Chennai: BJP leader Khushbu Sundar campaigns at Thousand Lights assembly constituency; she also makes dosa as part of her election campaign. #TamilNaduElections pic.twitter.com/kmU6GZIpp5
— ANI (@ANI) March 27, 2021
ಥೌಸಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚನೆ ನಡೆಸಿದ ನಟಿ ಖುಷ್ಬು ಅವರು ಅಲ್ಲಿನ ಮತದಾರರೊಬ್ಬರ ಪುಟ್ಟ ಮಗುವನ್ನು ತಮ್ಮ ತೋಳಿನಲ್ಲಿ ಎತ್ತಿಕೊಂಡು ಮಾತನಾಡಿದರು. ಇನ್ನೊಂದು ಕಡೆ ಸ್ವತಃ ತಾವೇ ದೋಸೆಯನ್ನು ಮಾಡಿದರು. ಹೀಗೆ ದೋಸೆ ಮಾಡಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ತಮಿಳುನಾಡಿನಲ್ಲಿ 20 ಕಡೆ ಬಿಜೆಪಿ ಅಭ್ಯರ್ಥಿಗಳು:
ತಮಿಳುನಾಡು ವಿಧಾನಸಭೆಯ 234 ಕ್ಷೇತ್ರಗಳ ಚುನಾವಣೆಗೆ ಪ್ರಾದೇಶಿಕ ಎಐಎಡಿಎಂಕೆ ಪಕ್ಷದ ಜೊತೆಗೆ ಭಾರತೀಯ ಜನತಾ ಪಕ್ಷವು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. ರಾಜ್ಯ ಚುನಾವಣಾ ಅಖಾಡದಲ್ಲಿ ಬಿಜೆಪಿಯು 20 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ರಾಜ್ಯದಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮೇ 2ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.