ತಮಿಳುನಾಡಿನಲ್ಲಿ ಬಿಜೆಪಿಗೆ 20 ಕ್ಷೇತ್ರ ಬಿಟ್ಟುಕೊಟ್ಟ ಎಐಎಡಿಎಂಕೆ
ಚೆನ್ನೈ,
ಮಾರ್ಚ್.06:
ತಮಿಳುನಾಡು
ವಿಧಾನಸಭಾ
ಚುನಾವಣೆಯಲ್ಲಿ
234
ಕ್ಷೇತ್ರಗಳ
ಪೈಕಿ
ಭಾರತೀಯ
ಜನತಾ
ಪಕ್ಷಕ್ಕೆ
20
ಕ್ಷೇತ್ರಗಳನ್ನು
ಬಿಟ್ಟುಕೊಡುವುದಾಗಿ
ಎಐಎಡಿಎಂಕೆ
ಪಕ್ಷವು
ಶುಕ್ರವಾರ
ರಾತ್ರಿ
ಬಹಿರಂಗಪಡಿಸಿದೆ.
2021ನೇ
ಸಾಲಿನ
ಚುನಾವಣೆಯಲ್ಲಿ
ಕನ್ಯಾಕುಮಾರಿ
ಸೇರಿದಂತೆ
20
ಕಡೆಗಳಲ್ಲಿ
ಬಿಜೆಪಿ
ಅಭ್ಯರ್ಥಿಗಳು
ಕಣಕ್ಕಿಳಿಯಲಿದ್ದಾರೆ.
ರಾಜ್ಯ
ವಿಧಾನಸಭಾ
ಚುನಾವಣೆಯ
ಸೀಟು
ಹಂಚಿಕೆಗೆ
ಸಂಬಂಧಿಸಿದಂತೆ
ಸಿಎಂ
ಎಡಪ್ಪಾಡಿ
ಪಳನಿಸ್ವಾಮಿ,
ಉಪ
ಮುಖ್ಯಮಂತ್ರಿ
ಪನ್ನೀರ್
ಸೆಲ್ವಂ,
ಬಿಜೆಪಿಯ
ರಾಷ್ಟ್ರೀಯ
ಕಾರ್ಯದರ್ಶಿ
ಹಾಗೂ
ತಮಿಳುನಾಡು
ಆಂತರಿಕ
ವ್ಯವಹಾರಗಳ
ಉಸ್ತುವಾರಿ
ಸಿ
ಟಿ
ರವಿ
ಮತ್ತು
ಬಿಜೆಪಿ
ರಾಜ್ಯಾಧ್ಯಕ್ಷ
ಎಲ್
ಮುರುಗನ್
ಒಪ್ಪಂದಕ್ಕೆ
ಸಹಿ
ಹಾಕಿದ್ದಾರೆ.
ಎಐಎಡಿಎಂಕೆ
ಅಭ್ಯರ್ಥಿಗಳ
ಪಟ್ಟಿ
ಪ್ರಕಟ,
ಎಡಪ್ಪಾಡಿಯಿಂದ
ಸಿಎಂ
ಸ್ಪರ್ಧೆ
ಕಳೆದ
ಫೆಬ್ರವರಿ.28ರಿಂದಲೂ
ಬಿಜೆಪಿ
ಮತ್ತು
ಎಐಎಡಿಎಂಕೆ
ನಡುವೆ
ಸೀಟು
ಹಂಚಿಕೆಗೆ
ಸಂಬಂಧಿಸಿದಂತೆ
ಮಾತುಕತೆ
ನಡೆಸಲಾಗುತ್ತಿತ್ತು.
ಗೃಹ
ಸಚಿವ
ಅಮಿತ್
ಶಾ
ನೇತೃತ್ವದ
ಸಭೆಯಲ್ಲಿ
ಬಿಜೆಪಿ
ಹೆಚ್ಚಿನ
ಸ್ಥಾನಗಳಿಗೆ
ಬೇಡಿಕೆಯಿಟ್ಟಿತ್ತು.
ಬಿಜೆಪಿ-ಎಐಎಡಿಎಂಕೆ
ನಡುವೆ
ಒಪ್ಪಂದ:
ತಮಿಳುನಾಡು
ವಿಧಾನಸಭಾ
ಚುನಾವಣೆಗೆ
ಬಿಜೆಪಿ
ಮತ್ತು
ಎಐಎಡಿಎಂಕೆ
ನಡುವೆ
ಸೀಟು
ಹಂಚಿಕೆಗೆ
ಸಂಬಂಧಿಸಿದಂತೆ
ಶನಿವಾರ
ಒಪ್ಪಂದದ
ಪ್ರಕ್ರಿಯೆ
ಪೂರ್ಣಗೊಳ್ಳಲಿದೆ
ಎಂದು
ರಾಜ್ಯ
ಉಸ್ತುವಾರಿ
ಸಿ
ಟಿ
ರವಿ
ಸ್ಪಷ್ಟಪಡಿಸಿದ್ದಾರೆ.
ಶನಿವಾರ
ಒಟ್ಟು
ಕ್ಷೇತ್ರಗಳು
ಮತ್ತು
ಯಾವ
ಯಾವ
ಕ್ಷೇತ್ರಗಳನ್ನು
ಬಿಜೆಪಿಗೆ
ಬಿಟ್ಟು
ಕೊಡಲಾಗುತ್ತದೆ
ಎನ್ನುವುದರ
ಬಗ್ಗೆ
ಸ್ಪಷ್ಟವಾಗಲಿದೆ.
ಮುಂದಿನ
ಕೆಲವೇ
ದಿನಗಳಲ್ಲಿ
ಈ
ಬಗ್ಗೆ
ಬಿಜೆಪಿಯು
ಅಧಿಕೃತವಾಗಿ
ಘೋಷಣೆ
ಮಾಡಲಿದೆ.
ಎಐಎಡಿಎಂಕೆ
6
ಅಭ್ಯರ್ಥಿಗಳ
ಪಟ್ಟಿ
ಬಿಡುಗಡೆ:
ಚೆನ್ನೈನಲ್ಲಿ
ಶುಕ್ರವಾರ
ರಾತ್ರಿ
ಮುಖ್ಯಮಂತ್ರಿ
ಎಡಪ್ಪಾಡಿ
ಪಳನಿಸ್ವಾಮಿ
ಮತ್ತು
ಡಿಸಿಎಂ
ಪನ್ನೀರ್
ಸೆಲ್ವಂ
ಸೇರಿದಂತೆ
ಎಐಡಿಎಂಕೆ
ಪಕ್ಷದ
ಆರು
ಅಭ್ಯರ್ಥಿಗಳ
ಪಟ್ಟಿಯನ್ನು
ಬಿಡುಗಡೆಗೊಳಿಸಲಾಗಿತ್ತು.
ರಾಜ್ಯದ
ಒಟ್ಟು
234
ವಿಧಾನಸಭಾ
ಕ್ಷೇತ್ರಗಳ
ಪೈಕಿ
ಪಿಎಂಕೆ
ಮತ್ತು
ಬಿಜೆಪಿಗೆ
43
ಕ್ಷೇತ್ರಗಳನ್ನು
ಬಿಟ್ಟು
ಕೊಡಲಾಗಿದೆ.
170
ಕ್ಷೇತ್ರಗಳಲ್ಲಿ
ಎಐಡಿಎಂಕೆ
ಸ್ಪರ್ಧಿಸುವುದಕ್ಕೆ
ಪ್ಲ್ಯಾನ್
ರೂಪಿಸುತ್ತಿದೆ.
ಏಕೆಂದರೆ
ಮತ್ತೊಂದು
ಮಿತ್ರಪಕ್ಷ
ಡಿಎಂಡಿಕೆ
25
ಕ್ಷೇತ್ರಗಳಿಗೆ
ಬೇಡಿಕೆ
ಇಟ್ಟಿದೆ
ಎಂದು
ಮೂಲಗಳಿಂದ
ತಿಳಿದು
ಬಂದಿದೆ.
ತಮಿಳುನಾಡು
ವಿಧಾನಸಭೆ
ಚುನಾವಣೆ:
ತಮಿಳುನಾಡು
ವಿಧಾನಸಭೆಯ
234
ಕ್ಷೇತ್ರಗಳಿಗೆ
ಒಂದೇ
ಹಂತಗಳಲ್ಲಿ
ಚುನಾವಣೆ
ನಡೆಸುವುದಾಗಿ
ಕೇಂದ್ರ
ಚುನಾವಣಾ
ಆಯೋಗ
ಈಗಾಗಲೇ
ಘೋಷಿಸಿದೆ.
ಏಪ್ರಿಲ್.06ರಂದು
ಒಂದು
ಹಂತದಲ್ಲಿ
ಮತದಾನ
ನಡೆಯಲಿದ್ದು,
ಮೇ.2ರಂದು
ಚುನಾವಣಾ
ಫಲಿತಾಂಶ
ಹೊರ
ಬೀಳಲಿದೆ.