ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಐಎಡಿಎಂಕೆ ಮುಖಂಡನನ್ನು ಡಿಎಂಕೆ ಬೆಂಬಲಿಗರು ಹತ್ಯೆ ಮಾಡಿದ್ರಾ?
ತಿರುವಣ್ಣಾಮಲೈನ ಎಐಎಡಿಎಂಕೆ ಕಾರ್ಯದರ್ಶಿಯನ್ನು ಅರುಣಾಚಲೇಶ್ವರ ದೇವಸ್ಥಾನದ ಬಳಿ ಹತ್ಯೆ ಮಾಡಲಾಗಿದೆ. ಈ ಕೊಲೆಯನ್ನು ಡಿಎಂಕೆ ಬೆಂಬಲಿಗರು ಮಾಡಿದ್ದಾರೆಂದು ಆರೋಪಿಸಲಾಗಿದೆ.
ತಿರುವಣ್ಣಾಮಲೈ, ಫೆಬ್ರವರಿ. 12 : ಎಐಎಡಿಎಂಕೆ ಮುಖಂಡರೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಭಾನುವಾರ ಬೆಳಿಗ್ಗೆ ತಮಿಳುನಾಡಿನ ತಿರುವಣ್ಣಾಮಲೈನ ಅರುಣಾಚಲೇಶ್ವರ ದೇವಸ್ಥಾನದ ಬಳಿ ನಡೆದಿದೆ.
ಎಸ್ ಕನಕರಾಜ್(40) ಕೊಲೆಯಾದ ಎಐಎಡಿಎಂಕೆ ಮುಖಂಡ. ಇವರು ತಿರುವಣ್ಣಾಮಲೈ ಘಟಕದ ಪಕ್ಷದ ಕಾರ್ಯದರ್ಶಿಯಾಗಿದ್ದರು. ಈ ಹತ್ಯೆ ಮಾಡಿರುವವರನ್ನು ಡಿಎಂಕೆ ಬೆಂಬಲಿಗರು ಎಂದು ಹೇಳಲಾಗುತ್ತಿದೆ.
ಆರೋಪಿಗಳಾದ ಬಾಬು(28), ರಾಜಾ(35) ಸರವಣನ್(30) ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ತಿರುವಣ್ಣಾಮಲೈ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ.
ಆರೋಪಿಗಳಿಂದ ಒಂದು ಕಾರು ಮತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು ಈ ಪ್ರಕರಣದ ತನಿಖೆ ಮುಂದುವರೆದಿದೆ.
ಬೆಳಗಿನ ವಾಯುವಿಹಾರ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕನಕರಾಜ್ ಅವರನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ. ತೀವ್ರ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
English summary
A prominent AIADMK member was hacked to death in public view by three armed men, alleged supporters of the DMK, in the Arunachaleshwara temple town of Tiruvannamalai in northern Tamil Nadu on February 12.