ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೊಬೈಲ್ ಕಳ್ಳತನ ಶಂಕೆ, 15 ವರ್ಷದ ಬಾಲಕನ ಹತ್ಯೆ
ಚೆನ್ನೈ, ಸೆಪ್ಟೆಂಬರ್ 24 : 15 ವರ್ಷದ ಬಾಲಕನನ್ನು ಜನರ ಗುಂಪು ಹೊಡೆದ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಮೊಬೈಲ್ ಫೋನ್ ಕದ್ದಿದ್ದಾನೆ ಎಂಬ ಶಂಕೆಯಿಂದ ಹೊಡೆದು ಹತ್ಯೆ ಮಾಡಲಾಗಿದೆ.
ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬರಿಗೆ ಸೇರಿದ ಮೊಬೈಲ್ ಮತ್ತು 3 ಸಾವಿರ ರೂ. ಹಣ ಕದ್ದಿದ್ದಾನೆ ಎಂಬ ಶಂಕೆಯಿಂದ ಹಲ್ಲೆ ನಡೆಸಲಾಗಿದೆ.
ಬೆಂಗಳೂರು: ಕಳ್ಳನ ಕಿರುಬೆರಳ ಸಮೇತ ಠಾಣೆಗೆ ಬಂದು ದೂರು ನೀಡಿದ ಮಹಿಳೆ!
ಗ್ರಾಮಸ್ಥರು ಬಾಲಕನಿಗಾಗಿ ಹುಡುಕಾಡುತ್ತಾ ಮನೆಗೆ ಬಂದಾಗ ವಿಧವೆಯಾದ ಮಹಿಳೆ ಮನೆಯಿಂದ ಹೊರ ಹೋಗಿದ್ದಳು. ಆಕೆ ಮನಗೆ ಬಂದಾಗ ಬಾಲಕನ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ. ಆತನ ದೇಹದ ಮೇಲೆ ಗಾಯದ ಗುರುತುಗಳಿವೆ.
ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆ ಆರಂಭಿಸಿದ್ದಾರೆ. ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
Comments
English summary
15 year old boy was allegedly lynched by a group of people in Tamil Nadu. Incident reported at Karur district. The boy allegedly in the habit of indulging in small thefts. People beaten boy after they suspected him to be behind the theft of the mobile phone and Rs. 3000 cash.
Story first published: Monday, September 24, 2018, 13:51 [IST]