ಸಿಖ್ ಮಾರಣಹೋಮ: ಗಾಂಧಿ ಕುಟುಂಬದ ವಿರುದ್ಧ ಮೋದಿ ವಾಗ್ದಾಳಿ
ಫತೇಪುರ್ ಸಾಹಿಬ್, ಮೇ 13: ಸಿಖ್ ಮಾರಣ ಹೋಮದ ಸ್ಯಾಮ್ ಪಿತ್ರೋಡಾ ಅಲ್ಲ, ನಿಮಗೆ ನಾಚಿಕೆ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ರಾಹುಲ್ ಗಾಂಧಿ ಮೇಲೆ ಹರಿಹಾಯ್ದಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಪಂಜಾಬ್ನ ಫತೇಪುರ್ ಸಾಹೀಬ್ನಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಖ್ಖ್ ಮಾರಣಹೋಮದ ವಿಷಯವನ್ನು ಮುಂದು ಮಾಡಿ ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬದ ಮೇಲೆ ಹರಿಹಾಯ್ದರು.
'ಹುವಾ ತೋ ಹುವಾ' ಎಂದ ಸ್ಯಾಮ್ ಪಿತ್ರೋಡಾಗೆ ಪಂಚ್ ನೀಡಿದ ಮೋದಿ
ಇಂದೇ ಬೆಳಿಗ್ಗೆ ಸಮಾವೇಶ ವೊಂದರಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, 'ಸಿಖ್ ಮಾರಣಹೋಮದ ಬಗ್ಗೆ ಕಾಂಗ್ರೆಸ್ನ ಸ್ಯಾಮ್ ಪಿತ್ರೋಡಾ ನೀಡಿದ್ದ ಹೇಳಿಕೆಗೆ ಅವರಿಗೆ ನಾಚಿಕೆಯಾಗಬೇಕು' ಎಂದಿದ್ದರು, ರಾಹುಲ್ ಹೀಗೆಂದ ಕೆಲವೇ ಗಂಟೆಗಳಲ್ಲಿ ಮೋದಿ ಅವರು ನಾಚಿಕೆಯಾಗಬೇಕಾದ್ದು ನಿಮಗೆ (ಗಾಂಧಿ ಕುಟುಂಬಕ್ಕೆ) ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಖ್ ಮಾರಣಹೋಮದ ಬಗ್ಗೆ ಮಾತನಾಡಿದ್ದ ಸ್ಯಾಮ್ ಪಿತ್ರೋಡಾ, 'ಆದರೆ ಆಯಿತು, ಏನು ಮಾಡಲಾಗುತ್ತದೆ' ಎಂದಿದ್ದರು, ಇದನ್ನು ರಾಹುಲ್ ಗಾಂಧಿ ಸೇರಿ ಹಲವರು ತೀವ್ರವಾಗಿ ಖಂಡಿಸಿದ್ದರು.
ಮೋದಿಯ ಅಪ್ರತಿಮ ತಂತ್ರಗಾರಿಕೆ ಅರಿಯದೇ ಬೆಪ್ಪುತಕ್ಕಡಿಯಾದ ಕಾಂಗ್ರೆಸ್
ಫತೇಪುರ್ ಸಾಹೀಬ್ನಲ್ಲಿ ಮಾತನಾಡಿದ ನರೇಂದ್ರ ಮೋದಿ, 'ರಾಹುಲ್ ಗಾಂಧಿ ತಮ್ಮ ಗುರುಗಳಿಗೆ (ಸ್ಯಾಮ್ ಪಿತ್ರೋಡಾ) ಗೆ ನಾಚಿಕೆಯಾಗಬೇಕು ಎಂದು ಹೇಳಿದ್ದನ್ನು ಕೇಳಿದೆ, ಕಾಂಗ್ರೆಸ್ ಮಾಡಿಕೊಂಡು ಬಂದದ್ದನ್ನು ಅವರು ಹೇಳಿದ್ದಾರೆ ಅಷ್ಟೆ, 1984 ರ ಘಟನೆ ಬಗ್ಗೆ ನಾಚಿಕೆಪಟ್ಟುಕೊಳ್ಳಬೇಕಾದದ್ದು ನೀವು, ಬೇರಾರೂ ಅಲ್ಲ ಎಂದು ಮೋದಿ ನೇರ ವಾಗ್ದಾಳಿ ನಡೆಸಿದರು.