ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವಾಗ ರಾಜಕೀಯ ಬಿಡ್ತೀರಿ ಸಿಧು?: ಪಂಜಾಬ್‌ನಲ್ಲಿ ಬಿತ್ತಿಪತ್ರ

|
Google Oneindia Kannada News

ಲೂಧಿಯಾನ, ಜೂನ್ 22: ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋತರೆ ರಾಜಕೀಯದಿಂದ ತ್ಯಜಿಸುವುದಾಗಿ ಹೇಳಿದ್ದ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರು ತಮ್ಮ ಆಶ್ವಾಸನೆಯನ್ನು ಉಳಿಸಿಕೊಳ್ಳುವಂತೆ ಲೂಧಿಯಾನದಲ್ಲಿ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.

'ಹೇಳಿ ಸಿಧು, ಯಾವಾಗ ರಾಜೀನಾಮೆ ಕೊಡ್ತೀರಿ?''ಹೇಳಿ ಸಿಧು, ಯಾವಾಗ ರಾಜೀನಾಮೆ ಕೊಡ್ತೀರಿ?'

ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಸಚಿವೆ ಸ್ಮೃತಿ ಇರಾನಿ ಅವರ ಎದುರು ಅಮೇಥಿಯಲ್ಲಿ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಸೋಲು ಅನುಭವಿಸಿದರೆ ರಾಜಕೀಯ ತ್ಯಜಿಸುವುದಾಗಿ ಹೇಳಿದ್ದರು.

ಇದನ್ನು ಪೋಸ್ಟರ್‌ಗಳಲ್ಲಿ ನೆನಪಿಸಿರುವ ಕೆಲವರು, 'ನೀವು ಯಾವಾಗ ರಾಜಕೀಯ ಬಿಡುತ್ತೀರಿ? ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಮಾತಿಗೆ ಬದ್ಧರಾಗಿ ಈಡೇರಿಸುವ ಸಮಯ ಬಂದಿದೆ. ನಿಮ್ಮ ರಾಜೀನಾಮೆಗೆ ಕಾಯುತ್ತಿದ್ದೇವೆ' ಎಂದು ಹೇಳಿದ್ದಾರೆ.

when are you quitting politics congress navjot singh sidhu posters

'ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋಲು ಅನುಭವಿಸಿದರೆ ನಾನು ರಾಜಕೀಯ ತ್ಯಜಿಸುತ್ತೇನೆ' ಎಂಬ ಸಿಧು ಅವರ ಹೇಳಿಕೆಯನ್ನು ಸಹ ಮುದ್ರಿಸಲಾಗಿದೆ. ಇದೇ ರೀತಿಯ ಪೋಸ್ಟರ್‌ಗಳು ಮೊಹಾಲಿಯಲ್ಲಿಯೂ ಶುಕ್ರವಾರ ಕಂಡುಬಂದಿದ್ದವು.

ಮಾತಿನಮಲ್ಲ ನವಜೋತ್ ಸಿಧು ಡಿಮಾಂಡ್ ಗೆ ಕಾಂಗ್ರೆಸ್ ಬೇಸ್ತು!ಮಾತಿನಮಲ್ಲ ನವಜೋತ್ ಸಿಧು ಡಿಮಾಂಡ್ ಗೆ ಕಾಂಗ್ರೆಸ್ ಬೇಸ್ತು!

ನೆಹರೂ-ಗಾಂಧಿ ಕುಟುಂಬದ ಪ್ರಬಲ ನೆಲೆಯಾದ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರು ಸ್ಮೃತಿ ಇರಾನಿ ಎದುರು 55,120 ಮತಗಳಿಂದ ಸೋಲು ಅನುಭವಿಸಿದ್ದರು. ಇದು ಕಾಂಗ್ರೆಸ್‌ಗೆ ತೀವ್ರ ಆಘಾತ ಉಂಟುಮಾಡಿತ್ತು.

ಪಂಜಾಬ್‌ನಲ್ಲಿ ಹಾಗೂ ಇತರೆ ಕೆಲವೆಡೆ ಕಾಂಗ್ರೆಸ್‌ಗೆ ಹಿನ್ನಡೆಯಾಗಲು ನವಜೋತ್ ಸಿಂಗ್ ಸಿಧು ಅವರ ಹೇಳಿಕೆಗಳು ಹಾಗೂ ನಡೆಗಳೇ ಕಾರಣ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಆರೋಪಿಸಿದ್ದರು. ಅಲ್ಲದೆ, ಅವರ ಸಚಿವ ಸ್ಥಾನದಲ್ಲಿ ಹಿಂಬಡ್ತಿ ನೀಡಿದ್ದರು.

English summary
Posters in Ludhiana found asking Punjab Congress Minister Navjot Singh Sidhu, 'when are you quitting politics? We are waiting for your resignation.'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X